ಕನ್ನಡಪ್ರಭವಾರ್ತೆ ರಾಯಚೂರು
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ವೇ ನಂ. 384/1/ಎ ನಾಗರಿಕ ಸೌಲಭ್ಯ ಕೋಟಾದಡಿ ಅಲ್ಲಮಪ್ರಭು ಕಾಲೋನಿ ಪ್ರೌಢಶಾಲೆಗೆ ನೀಡಿದ ಜಾಗ ಕೆಲವರು ಒತ್ತುವರಿ ಮಾಡಿಕೊಂಡು ಶೆಡ್ ನಿರ್ಮಿಸಿಕೊಂಡಿದ್ದಾರೆ. ಶಾಲೆ ಜಾಗ ರಕ್ಷಣೆ ಮಾಡಬೇಕಿರುವ ಶಾಸಕ ಡಾ.ಶಿವರಾಜ ಪಾಟೀಲ್ರು ಶಾಲೆಯನ್ನು ಬೇರೆಡೆ ವರ್ಗಾಯಿಸಬೇಕು ಎಂದು ಪತ್ರ ಬರೆದಿದ್ದು ಖಂಡನೀಯ. ಶಾಲೆಗೆ ಮೀಸಲಾದ ಜಾಗದಲ್ಲಿಯೇ ಶಾಲೆ ನಿರ್ಮಾಣ ಮಾಡಬೇಕು ಆಗ್ರಹಿಸಿದರು.
ಸಚಿವ ಪಾಟೀಲರ ಮಾತಿಗೆ ಬೆಲೆ ಕೊಡದ ನಗರಸಭೆ ಪೌರಾಯುಕ್ತ ಗುರುಸಿದ್ದಯ್ಯ ಹಿರೇಮಠ, ಬಿಇಒ ಚಂದ್ರಶೇಖರ ಭಂಡಾರಿ ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳೆಲ್ಲರೂ ಶಾಸಕರ ಅಣತಿಯಂತೆ ನಡೆದುಕೊಳ್ಳುತ್ತಿದ್ದಾರೆ ಎಂದು ದೂರಿದರು.ಕನ್ನಡ ಶಾಲೆ ಉಳುವಿಗೆ ಹೋರಾಟ ಮಾಡುತ್ತಿದ್ದು ಮಕ್ಕಳಿಗಾಗಿ ಜೈಲಿಗೂ ಹೋಗಲು ಸಿದ್ಧರಾಗಿದ್ದೇವೆ. ಆದ್ದರಿಂದ ಜಿಲ್ಲಾಡಳಿತ ತಕ್ಷಣ ಇದ್ದಲ್ಲಿಯೇ ಶಾಲೆ ಉಳಿಸಿಕೊಳ್ಳಬೇಕು. ಇಲ್ಲವಾದಲ್ಲಿ ತೀವ್ರ ಹೋರಾಟ ಅನಿವಾರ್ಯವಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಈ ವೇಳೆ ಹೋರಾಟಗಾರ ಎಸ್. ನರಸಿಂಹಲು, ಶ್ರೀನಿವಾಸ ಕಲವಲದೊಡ್ಡಿ ಸಾದೀಕ್ ಪಾಶ ಉಪಸ್ಥಿತರಿದ್ದರು.