ಎಂಜಿನಿಯರ್‌ಗಳು ಸಮಾಜದ ಶಕ್ತಿ ಕೇಂದ್ರ: ಚಿತ್ರನಟ ರಮೇಶ ಅರವಿಂದ

KannadaprabhaNewsNetwork |  
Published : Mar 02, 2025, 01:17 AM IST
1ಎಚ್‌ಯುಬಿ7ಕಾರ್ಯಕ್ರಮವನ್ನು ಚಿತ್ರನಟ ರಮೇಶ ಅರವಿಂದ ಉದ್ಘಾಟಿಸಿದರು. | Kannada Prabha

ಸಾರಾಂಶ

ಉತ್ತರ ಕರ್ನಾಟಕದಲ್ಲಿ ಮೊಟ್ಟಮೊದಲ ಬಾರಿಗೆ ಆಧುನಿಕ ತಂತ್ರಜ್ಞಾನದ ಕಟ್ಟಡಗಳ ನಿರ್ಮಾಣಕ್ಕೆ ಪೂರಕವಾದ ರಾಜ್ಯ ಮಟ್ಟದ ಸಿವಿಟೇಕ್ ಸಮ್ಮಿಟ್-2025 ಸಮ್ಮೇಳನಕ್ಕೆ ಚಲನಚಿತ್ರ ನಟ ರಮೇಶ ಅರವಿಂದ ಚಾಲನೆ ನೀಡಿದರು.

ಹುಬ್ಬಳ್ಳಿ: ಎಂಜಿನಿಯರ್‌ಗಳು ಸಮಾಜದ ಶಕ್ತಿಕೇಂದ್ರಳಾಗಿದ್ದಾರೆ ಎಂದು ಚಲನಚಿತ್ರ ನಟ ರಮೇಶ ಅರವಿಂದ ಹೇಳಿದರು.

ನಗರದ ಎಸ್‌ಡಿಎಂ ಕಾಲೇಜ್‌ನಲ್ಲಿ ಆಯೋಜಿಸಿದ್ದ ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಎಂಜಿನಿಯರ್ಸ್‌, ಲೋಕಲ್ ಸೆಂಟರ್‌ ಹಾಗೂ ಎಸ್‌ಡಿಎಂ ಕಾಲೇಜ್ ಆಫ್ ಎಂಜಿನಿಯರಿಂಗ್ ಮತ್ತು ಟೆಕ್ನಾಲಜಿ, ಮತ್ತು ಟರ್ಬೋ ಸ್ಟೀಲ್‌ಗಳ ಸಹಯೋಗದಲ್ಲಿ ಉತ್ತರ ಕರ್ನಾಟಕದಲ್ಲಿ ಮೊಟ್ಟಮೊದಲ ಬಾರಿಗೆ ಆಧುನಿಕ ತಂತ್ರಜ್ಞಾನದ ಕಟ್ಟಡಗಳ ನಿರ್ಮಾಣಕ್ಕೆ ಪೂರಕವಾದ ರಾಜ್ಯ ಮಟ್ಟದ ಸಿವಿಟೇಕ್ ಸಮ್ಮಿಟ್-2025 ಸಮ್ಮೇಳನಕ್ಕೆ ಚಾಲನೆ ನೀಡಿ ಮಾತನಾಡಿದರು.

ಜನರ ಜೀವ, ಆರೋಗ್ಯ, ಆಸ್ತಿ, ಆರ್ಥಿಕ ಹಿತಾಸಕ್ತಿ, ಸಾರ್ವಜನಿಕ ಕಲ್ಯಾಣ ಮತ್ತು ಪರಿಸರವನ್ನು ರಕ್ಷಿಸುವುದು ಸೇರಿದಂತೆ ಸಮಾಜದ ವಿಶಾಲ ಹಿತಾಸಕ್ತಿ ಮನಸ್ಸಿನಲ್ಲಿಟ್ಟುಕೊಂಡು ಎಂಜಿನಿಯರ್‌ಗಳು ಕಾರ್ಯ ಮಾಡುತ್ತಾರೆ. ಹಾಗಾಗಿ, ಎಂಜಿನಿಯರ್‌ಗಳು ಸಮಾಜದ ಶಕ್ತಿ ಕೇಂದ್ರಬಿಂದುಗಳಾಗಿದ್ದಾರೆ ಎಂದರು.

ಮುಖ್ಯ ಅತಿಥಿ ಟರ್ಬೊ ಸ್ಟೀಲ್‌ನ ವ್ಯವಸ್ಥಾಪಕ ನಿರ್ದೇಶಕ ಆರ್. ಪ್ರವೀಣಚಂದ್ರ ಮಾತನಾಡಿ, ಟರ್ಬೋ ಸ್ಟೀಲ್‌ನ ಕ್ಷಮತೆ ಮತ್ತು ರಚನೆಯ ಬಳಕೆ ಹೀಗೆ ಕಟ್ಟಡಗಳ ಬಗ್ಗೆ ಹಲವಾರು ವಿಷಯಗಳನ್ನು ಹಾಗೂ ಸ್ಟೀಲ್‌ನ ಗುಣಮಟ್ಟದ ಕುರಿತು ತಿಳಿಸಿದರು.

ಅಧ್ಯಕ್ಷತೆಯನ್ನು ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಎಂಜಿನಿಯರ್ಸ್‌ ಅಧ್ಯಕ್ಷ ಸುನೀಲ ಬಾಗೆವಾಡಿ ವಹಿಸಿದ್ದರು.

ಕೋಶಾಧ್ಯಕ್ಷ ಕಬೀರ ನದಾಫ್‌, ಎಸ್‌ಡಿಎಂ ಕಾಲೇಜಿನ ಕಾರ್ಯದರ್ಶಿ ಜೀವಂಧರ ಕುಮಾರ, ವಿದ್ಯಾರ್ಥಿ ಕಲ್ಯಾಣ ವಿಭಾಗದ ಮುಖ್ಯಸ್ಥ ಡಾ. ವಾಸುದೇವ ಪರ್ವತಿ, ಉಪಾಧ್ಯಕ್ಷ ಅರುಣಕುಮಾರ ಶೀಲವಂತ, ವಿಜಯೇಂದ್ರ ಪಾಟೀಲ, ನಿರ್ದೇಶಕ ಪವನಕುಮಾರ ಬೇಟಗೇರಿ ಮತ್ತಿತರರು ಇದ್ದರು.

ನಟ ರಮೇಶ ಅರವಿಂದ ಅವರನ್ನು ಮೆರವಣಿಗೆ ಮೂಲಕ ವೇದಿಕೆಗೆ ಕರೆತರಲಾಯಿತು. ಕಲಘಟಗಿಯ ದ್ಯಾಮಣ್ಣ ಲಮಾಣಿ ಅವರ ತಂಡದ ಡೊಳ್ಳು ಕುಣಿತದ ಮೂಲಕ ಸ್ವಾಗತಿಸಿದರು.

ಸಂಯೋಜಕ ದಾಮೋದರ ಹೆಗಡೆ ಪ್ರಾರ್ಥಿಸಿದರು. ಎಸ್‌ಡಿಎಂ ಕಾಲೇಜಿನ ಪ್ರಾಚಾರ್ಯ ಡಾ. ರಮೇಶ ಚಕ್ರಸಾಲಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಸಿದ್ದನಗೌಡ ಪಾಟೀಲ ವಂದಿಸಿದರು. ಕಾರ್ಯಕ್ರಮದ ಸಂಯೋಜನೆಯ ಅಧ್ಯಕ್ಷ ವಿಜಯ ತೋಟಗೇರ ಸ್ವಾಗತಿಸಿದರು. ಜಗದೀಶ ಮಳಗಿ ನಿರೂಪಿಸಿದರು.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...