ಅಭಿವೃದ್ಧಿಯಲ್ಲಿ ಎಂಜಿನಿರ್‌ಗಳ ಕೊಡುಗೆ ಅನನ್ಯ: ಯು.ಟಿ.ಖಾದರ್

KannadaprabhaNewsNetwork |  
Published : Apr 29, 2026, 04:00 AM IST
ಮಂಗಳೂರು: ಕೃತಜ್ಞತಾ ಸಮರ್ಪಣಾ ಸಮಾರಂಭ ನಡೆಯಿತು | Kannada Prabha

ಸಾರಾಂಶ

ಎಂಜಿನಿಯರ್‌ಗಳು ಈ ಸಮಾಜಕ್ಕೆ, ದೇಶಕ್ಕೆ ಕೊಟ್ಟ ಕೊಡುಗೆಯನ್ನು ಮರೆಯುವಂತಿಲ್ಲ. ಅಭಿವೃದ್ಧಿ, ನಗರದ ಸೌಂದರ್ಯತೆಗೆ ಎಂಜಿನಿಯರ್‌ಗಳ ಕೊಡುಗೆ ಅನನ್ಯವಾದುದು ಎಂದು ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್ ಹೇಳಿದರು.

ಮಂಗಳೂರು: ಎಂಜಿನಿಯರ್‌ಗಳು ಈ ಸಮಾಜಕ್ಕೆ, ದೇಶಕ್ಕೆ ಕೊಟ್ಟ ಕೊಡುಗೆಯನ್ನು ಮರೆಯುವಂತಿಲ್ಲ. ಅಭಿವೃದ್ಧಿ, ನಗರದ ಸೌಂದರ್ಯತೆಗೆ ಎಂಜಿನಿಯರ್‌ಗಳ ಕೊಡುಗೆ ಅನನ್ಯವಾದುದು ಎಂದು ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್ ಹೇಳಿದರು.

ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಸೋಮವಾರ ಎಂಸಿಸಿ ರಿಜಿಸ್ಟರ್ಡ್ ಡಿಪ್ಲೊಮಾ ಸಿವಿಲ್ ಎಂಜಿನಿಯರ್ಸ್ ಹಾಗೂ ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಎಂಜಿನಿಯರ್ಸ್ ಮಂಗಳೂರು ಕೇಂದ್ರದ ಸಹಯೋಗದೊಂದಿಗೆ ನಡೆದ ಕೃತಜ್ಞತಾ ಸಮರ್ಪಣಾ ಸಮಾರಂಭ ಉದ್ಘಾಟಿಸಿ, ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.ತಳ ಮಟ್ಟದಿಂದ ನಡೆಯುವ ಅಭಿವೃದ್ಧಿಗೆ ಮಾರ್ಗದರ್ಶನ ನೀಡುವವರು ಎಂಜಿನಿಯರ್‌ಗಳು. ಕೆಲಸದಲ್ಲಿ ಸ್ಕಿಲ್ ಅತಿ ಅಗತ್ಯ. ಡಿಪ್ಲೊಮಾ ಎಂಜಿನಿಯರ್‌ಗಳಲ್ಲಿ ಸ್ಕಿಲ್‌ ಇರುತ್ತದೆ ಎಂಬುದು ಅವರ ಕೊಡುಗೆಗಳಿಂದ ಕಾಣಬಹುದು. ಬಿಇ ಕಲಿತವರ ಜ್ಞಾನವೂ ಬೇಕು, ತಳಮಟ್ಟದಿಂದ ಕಲಿತವರೂ ಬೇಕು ಎಂದರು. ಡಿಪ್ಲೊಮಾ ಎಂಜಿನಿಯರ್‌ಗಳಿಗೆ ಎದುರಾಗಿದ್ದ ಸಮಸ್ಯೆಗಳನ್ನು ನಾವೆಲ್ಲರೂ ಸೇರಿ ಸರಕಾರದ ಹಂತದಲ್ಲಿ ಬಗೆಹರಿಸಿದ್ದೇವೆ. ಅದು ನಮ್ಮ ಕರ್ತವ್ಯ. ನಿಮ್ಮಿಂದ ಜನರಿಗೆ ಪ್ರಯೋಜನ ಆಗಬೇಕು, ನಿಮಗೆ ಸಿಕ್ಕ ಅವಕಾಶದಲ್ಲಿ ಜನರಿಗಾಗಿ ಕೆಲಸ ಮಾಡಿ ಎಂದರು.

ಶಾಸಕ ಡಿ.ವೇದವ್ಯಾಸ ಕಾಮತ್ ಸನ್ಮಾನ ಸ್ವೀಕರಿಸಿ ಮಾತನಾಡಿ, ನಿಮ್ಮೆ ಬೇಡಿಕೆ ಈಡೇರಿಸುವ ಮೂಲಕ ನಾವು ನಮ್ಮ ಕರ್ತವ್ಯ ಮಾಡಿದ್ದೇವೆ. ಮಾಡಿದ ಕೆಲಸವನ್ನು ಜನರಿಗೆ ತಿಳಿಸಿ ಗೌರವಿಸಿದ ಕಾರ್ಯಕ್ರಮ ಉತ್ತಮವಾದುದು, ಅಭಿನಂದನೀಯ ಎಂದರು.ವೃತ್ತಿಪರ ಡಿಪ್ಲೊಮಾ ಸಿವಿಲ್ ಎಂಜಿನಿಯರ್ಸ್‌ಗಳ ಅರ್ಹತೆ ಮತ್ತು ಸಾಮರ್ಥ್ಯದಲ್ಲಿ ಆದ ಅನ್ಯಾಯದ ವಿರುದ್ಧ ಹೋರಾಟದಲ್ಲಿ ಕೈಜೋಡಿಸಿ, ಈ ಹಿಂದಿನ ಸ್ಥಾನಮಾನ ಪುನರ್‌ಸ್ಥಾಪಿಸಿ ನ್ಯಾಯ ಒದಗಿಸಿಕೊಡುವಲ್ಲಿ ಸಹಕರಿಸಿದ ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್, ಶಾಸಕ ವೇದವ್ಯಾಸ ಕಾಮತ್ ಸೇರಿದಂತೆ ಸಹಕರಿಸಿದ ಅಧಿಕಾರಿಗಳು, ಜನಪ್ರತಿನಿಧಿಗಳು, ಸಹಕರಿಸಿದ ಪ್ರಮುಖರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಿ, ಗೌರವಿಸಲಾಯಿತು.ಎಂಸಿಸಿ ರಿಜಿಸ್ಟರ್ಡ್ ಡಿಪ್ಲೊಮಾ ಸಿವಿಲ್ ಎಂಜಿನಿಯರ್ಸ್ ಸಂಚಾಲಕ ಜಿ. ಯೋಗೀಶ್ ಪೈ ಅಧ್ಯಕ್ಷತೆ ವಹಿಸಿದ್ದರು. ಮೂಡ ಆಯುಕ್ತ ಮಹಮ್ಮದ್ ನಝೀರ್, ಎಸಿಸಿಇಐ ರಾಷ್ಟ್ರೀಯ ಅಧ್ಯಕ್ಷ ರಾಜೇಂದ್ರ ಕಲ್ಬಾವಿ, ಮನಪಾ ನಿಕಟಪೂರ್ವ ಮಹಾಪೌರ ಮನೋಜ್ ಕುಮಾರ್, ಮನಪಾ ನಿಕಟಪೂರ್ವ ಪ್ರತಿಪಕ್ಷ ನಾಯಕ ಅನಿಲ್ ಕುಮಾರ್, ಎಸಿಸಿಇಐ ಮಂಗಳೂರು ಅಧ್ಯಕ್ಷ ಎನ್.ಅರುಣ್, ಕರ್ನಾಟಕ ರಾಜ್ಯ ಡಿಪ್ಲೊಮಾ ಸಿವಿಲ್ ಎಂಜಿನಿಯರ್ಸ್ ಒಕ್ಕೂಟದ ಸಂಚಾಲಕ ಪ್ರಶಾಂತ್ ಲೋಕಾಪುರ್ ಮತ್ತಿತರರು ಇದ್ದರು. ಎಂಸಿಸಿ ರಿಜಿಸ್ಟರ್ಡ್ ಡಿಪ್ಲೊಮಾ ಸಿವಿಲ್ ಎಂಜಿನಿಯರ್ಸ್‌ ಸಂಚಾಲಕ ಜಿ. ಯೋಗೀಶ್ ಪೈ ಸ್ವಾಗತಿಸಿದರು. ಅವಿನಾಶ್ ಕಾಮತ್ ನಿರೂಪಿಸಿದರು. ಕಾರ್ಯಕ್ರಮದ ಆರಂಭದಲ್ಲಿ ರವೀಂದ್ರ ಪ್ರಭು ಮತ್ತು ಮಾಲಿನಿ ಕೇಶವ ಪ್ರಸಾದ್‌ ಅವರಿಂದ ಸುಗಮ ಸಂಗೀತ ಮತ್ತು ಗಝಲ್ ಕಾರ್ಯಕ್ರಮ ನಡೆಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಟಾಪರ್‌ ರ್‍ಯಾಂಕ್‌ ಕೊಟ್ಟ ಶಾಲೆಯಲ್ಲಿ ಸೌಲಭ್ಯಗಳೇ ಇಲ್ಲ
ಕುಡಿಯುವ ನೀರಿಗೆ ಅಧಿಕಾರಿಗಳು ತುರ್ತು ಸ್ಪಂದಿಸಿ