ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಸರ್.ಎಂ.ವಿ ಪ್ರತಿಮೆಗೆ ಪೂಜೆ ಸಲ್ಲಿಸಿ ಪಷ್ಪಾರ್ಚನೆ ಮಾಡಿದ ನಂತರ ನಿಗಮದ ಸಹಾಯಕ ಕಾರ್ಯಪಾಲಕ ಅಭಿಯಂತರೆ ಶ್ವೇತಾ ಮಾತನಾಡಿ, ಸರ್ ಎಂ.ವಿಶ್ವೇಶ್ವರಯ್ಯ ನಿರ್ಮಿಸಿದ ಅನೇಕ ಯೋಜನೆಗಳು ನಮಗೆ ಮಾದರಿಯಾಗಿವೆ. ಅವರ ತಂತ್ರಜ್ಞಾನದ ಈ ಅಣೆಕಟ್ಟೆಯಲ್ಲಿ ನಾವು ಎಂಜಿನಿಯರ್ಗಳಾಗಿ ಕೆಲಸ ಮಾಡುತ್ತಿರುವುದು ನಮಗೆ ಹೆಮ್ಮೆ ಅನಿಸಿದೆ. ಇಲ್ಲಿ ಕೆಲಸ ಮಾಡುವ ಎಲ್ಲ ಸಿಬ್ಬಂದಿಗೂ ಇದು ಪ್ರೇರಣೆಯಾಗಿದೆ ಎಂದರು.
ನಂತರ ನಿಗಮದ ಸಹಾಯಕ ಅಭಿಯಂತರ ವೇಣುಗೋಪಾಲ್ ಮಾತನಾಡಿ, ಸರ್.ಎಂ.ವಿಶ್ವೇಶ್ವರಯ್ಯ ದೂರ ದೃಷ್ಟಿಯುಳ್ಳವರು. ಕಡು ಬಡದತನದಿಂದ ವಿದ್ಯಾಭ್ಯಾಸ ಮುಗಿಸಿ ನಂತರ ದೇಶದ ವಿವಿಧೆಡೆ ಕೆಲಸ ನಿರ್ವಹಿಸಿ ಮೆಚ್ಚುಗೆ ಪಡೆದರು. ಅವರು ಎಂದೂ ಸ್ವಾರ್ಥಕ್ಕೆ ಕೆಲಸ ಮಾಡಿದವರಲ್ಲ, ದೇಶದ ಅಭಿವೃದ್ಧಿ ಸಲುವಾಗಿ ದೇಶದ ವಿವಿಧೆಡೆ ಅನೇಕ ಜನಪರ ಕೆಲಸ ಮಾಡಿದ್ದಾರೆ ಎಂದು ಶ್ಲಾಘಿಸಿದರು.ಸಿವಿಲ್ ಎಂಜಿನಿಯರ್ ಆಗಿದ್ದರೂ ಕೂಡ ಆರ್ಥಿಕ ತಜ್ಞರಂತೆ ಕೆಲಸ ನಿರ್ವಹಿಸಿದ್ದರು. ಅದರ ಪೂರ್ವ ದೃಷ್ಟಿಯ ಫಲವಾಗಿ ಇಂದು ವಿಶ್ವ ವಿಖ್ಯಾತ ಕೆ.ಆರ್.ಸಾಗರ ಅಣೆಕಟ್ಟೆ ಸೇರಿದಂತೆ ಹಲವು ಅಣೆಕಟ್ಟೆಗಳು, ಬ್ಯಾಂಕ್ಗಳು, ಅನೇಕ ಕಾರ್ಖನೆಗಳು ಸೇರಿದಂತೆ ಹಲವು ಯೋಜನೆಗಳು ನಿರ್ಮಾಣವಾಗಿದೆ. ದೇಶದ ಆರ್ಥಿಕತೆ ಬೆಳೆಯಲು ಅವರು ಶ್ರಮಿಸುತ್ತಿದ್ದರು. ಅವರ ತಂತ್ರಜ್ಙಾನದ ಫಲವಾಗಿ ಅವರಿಗೆ ಭಾರತರತ್ನ ಪ್ರಶಸ್ತಿ ಸಿಕ್ಕಿದೆ. ಅವರು ಬಳಸಿದ ತಂತ್ರಜ್ಞಾನಗಳು ನಮ್ಮೆಲ್ಲ ಎಂಜಿನಿಯರ್ಗಳ ಪ್ರೇರಣೆ ಮತ್ತು ಮಾದರಿಯಾಗಿದ್ದಾರೆ ಎಂದರು.
ಸಿ.ಎಸ್.ಸುರೇಂದ್ರಗೆ ಪಿಎಚ್.ಡಿಕೆ.ಎಂ.ದೊಡ್ಡಿ:ಭಾರತೀನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಗ್ರಂಥಪಾಲಕರಾಗಿ ಸೇವೆ ಸಲ್ಲಿಸುತ್ತಿರುವ ಸಿ.ಎಸ್.ಸುರೇಂದ್ರ ಅವರು