ಮುಂಡರಗಿ: ಗ್ರಾಮೀಣ ಗ್ರಂಥಾಲಯಗಳಲ್ಲಿ ಮಕ್ಕಳಿಗೆ ಪೂರಕವಾದ ವಾತಾವರಣ ಇರಬೇಕು. ಕಥೆ, ಕಾದಂಬರಿ, ಗಟ್ಟಿ ಓದು, ಚೆಸ್, ಕೇರಂ ಆಟಗಳ ಮೂಲಕ ಮಕ್ಕಳ ಸಾಮರ್ಥ್ಯ ಹೆಚ್ಚಿಸುವಂತಾಗಬೇಕು ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ವಿಶ್ವನಾಥ ಹೊಸಮನಿ ಹೇಳಿದರು.
ವಿವಿಧ ಸೌಲಭ್ಯಗಳಿಂದ ಮಕ್ಕಳಿಗೆ ಗ್ರಂಥಾಯದ ಕಡೆ ಆಕರ್ಷಣೆಯಾಗುವ ಹಾಗೆ ತಾವು ಕಾರ್ಯನಿರ್ವಹಿಸಬೇಕು. ಈ ತರಬೇತಿಯ ಮಹತ್ವವನ್ನು ಸರಿಯಾಗಿ ತಿಳಿದುಕೊಳ್ಳಬೇಕು ಎಂದರು.
ಸಂಸ್ಥೆಯ ವೀಕೇಂದ್ರೀಕೃತ ತರಬೇತಿ ಸಂಯೋಜಕ ಮಂಜುನಾಥ ಮುಧೋಳ ಮಾತನಾಡಿ, ಮಕ್ಕಳಿಗೆ ಗಟ್ಟಿ ಓದು ಕಲಿಸುವುದರಿಂದ ಅವರಲ್ಲಿ ಅಕ್ಷರಗಳ ಮಹತ್ವ ವಿಷಯಗಳ ಅರಿವು, ಸಂವಹನ ಕೌಶಲ್ಯ ಹಾಗೂ ಮಕ್ಕಳಿಗೆ ನಾಗರಿಕ ಪ್ರಜ್ಞೆ ಮೂಡಿಸುವ ಹಾಗೆ ಗ್ರಂಥಾಲಯಗಳ ಮೇಲ್ವಿಚಾರಕರ ಪಾತ್ರ ಕುರಿತು ಮಾತನಾಡಿದರು.ಶಿಕ್ಷಣ ಫೌಂಡೇಶನ್ ಬಸವರಾಜ ಬಡಿಗೇರ, ವಿಷಯ ನಿರ್ವಾಹಕ ಶಾಬೂದ್ದೀನ್ ನದಾಫ್, ತರಬೇತಿ ಸುಗಮಗಾರ ಅಂದಪ್ಪ ತುರಕಾಣಿ, ತಾಲೂಕಿನ ಗ್ರಂಥಾಲಯಗಳ ಮೇಲ್ವಿಚಾರಕರು ತರಬೇತಿಯಲ್ಲಿ ಭಾಗವಹಿಸಿದ್ದರು.