ಸರ್ಕಾರಿ ಶಾಲೆಗೆ ಮಕ್ಕಳ ದಾಖಲಿಸಿ ಭವಿಷ್ಯ ಉಜ್ವಲಗೊಳಿಸಿ: ರಜನೀಕಾಂತ ದೇಸಾಯಿ

KannadaprabhaNewsNetwork |  
Published : May 28, 2026, 02:15 AM IST
ಕಾರ್ಯಕ್ರಮದಲ್ಲಿ ವರ್ತಕ ರಜನಿಕಾಂತ ದೇಸಾಯಿ ಮಾತನಾಡಿದರು. | Kannada Prabha

ಸಾರಾಂಶ

ಜಿಪಂ ಮಾಜಿ ಉಪಾಧ್ಯಕ್ಷ ಶೋಭಾ ಮೇಟಿ, ಶಾಲಾ ಭೂದಾನಿ ಡಾ. ಬಸವರಾಜ ಮೇಟಿ ಮಾತನಾಡಿ, ಸರ್ಕಾರಿ ಶಾಲೆಯಲ್ಲಿ ಓದಿ ಕಲಿತಿರುವುದರಿಂದ ಆ ಋಣವನ್ನು ತೀರಿಸುವುದಕ್ಕಾಗಿ 2 ಎಕರೆ ಜಮೀನು ದಾನ ನೀಡಲಾಗಿದೆ ಎಂದರು.

ಮುಂಡರಗಿ: ಗ್ರಾಮೀಣ ಪ್ರದೇಶಗಳ ಸರ್ಕಾರಿ ಶಾಲೆಗಳಲ್ಲಿ ಓದಿದವರೇ ಹೆಚ್ಚಿನ ಸಾಧನೆ ಮಾಡುವ ಮೂಲಕ ರಾಜ್ಯ ಹಾಗೂ ದೇಶ ಮಟ್ಟದಲ್ಲಿ ಉನ್ನತ ಹುದ್ದೆಯನ್ನೇರಿ ಕಾರ್ಯನಿರ್ವಹಿಸುತ್ತಿದ್ದಾರೆ. ಹೀಗಾಗಿ ಪಾಲಕರು ಆಡಂಬರಕ್ಕೆ ಮಾರುಹೋಗದೇ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ದಾಖಲಿಸುವ ಮೂಲಕ ಅವರ ಭವಿಷ್ಯವನ್ನು ಉಜ್ವಲಗೊಳಿಸಬೇಕು ಎಂದು ವರ್ತಕ ರಜನಿಕಾಂತ ದೇಸಾಯಿ ಮನವಿ ಮಾಡಿದರು.

ಮಂಗಳವಾರ ಸಂಜೆ ಪಟ್ಟಣದ ಹೆಸರೂರು ರಸ್ತೆಯ ಭೀಮಾಂಬಿಕಾ ನಗರದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ, ಡಾ. ಬಸವರಾಜ ಶಿವಪ್ಪ‌ ಮೇಟಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಆಶ್ರಯದಲ್ಲಿ ಜರುಗಿದ ವಿಶೇಷ ದಾಖಲಾತಿ ಆಂದೋಲನ ಕಾರ್ಯಕ್ರಮದಲ್ಲಿ ಮಗುವಿಗೆ ದಾಖಲಾತಿ ಅರ್ಜಿ ನಮೂನೆ ವಿತರಿಸಿ ಚಾಲನೆ ನೀಡಿ ಮಾತನಾಡಿದರು.

ಶಾಲೆಯಲ್ಲಿ ಗ್ರಾಮೀಣ ಭಾಗದ ಮಕ್ಕಳ ಕಲಿಕೆಗೆ ಪೂರಕವಾಗುವ ವಾತಾವರಣವನ್ನು ಇಲ್ಲಿನ ಮುಖ್ಯೋಪಾಧ್ಯಾಯ ಬಸವರಾಜ ಹೆಬ್ಲಿ ಅವರು ನಿರ್ಮಾಣ ಮಾಡಿದ್ದು, ಮಗುವಿನ ಕಲಿಕೆಗೆ ತಕ್ಕಂತೆ ಪಾಲಕರು ಶಾಲೆಗೆ ದಾಖಲಿಸಬೇಕು. ಜತೆಗೆ ಆಗಾಗ್ಗೆ ಶಾಲೆಗೆ ತೆರಳಿ ಕಲಿಕೆಯ ಬಗ್ಗೆ ಪರಿಶೀಲನೆ ನಡೆಸಬೇಕು ಎಂದರು.

ಜಿಪಂ ಮಾಜಿ ಉಪಾಧ್ಯಕ್ಷ ಶೋಭಾ ಮೇಟಿ, ಶಾಲಾ ಭೂದಾನಿ ಡಾ. ಬಸವರಾಜ ಮೇಟಿ ಮಾತನಾಡಿ, ಸರ್ಕಾರಿ ಶಾಲೆಯಲ್ಲಿ ಓದಿ ಕಲಿತಿರುವುದರಿಂದ ಆ ಋಣವನ್ನು ತೀರಿಸುವುದಕ್ಕಾಗಿ 2 ಎಕರೆ ಜಮೀನು ದಾನ ನೀಡಲಾಗಿದೆ ಎಂದರು.

ಸಿಆರ್‌ಪಿಗಳಾದ ಐ.ಎಸ್. ಮುಲ್ಲಾ, ಎಸ್.ಎಚ್. ಇಟಗಿ ಮಾತನಾಡಿ, 6 ವರ್ಷ ತುಂಬಿದ ಮಗುವನ್ನು 1ನೇ ತರಗತಿಗೆ ದಾಖಲು ಮಾಡಿಕೊಳ್ಳಲಾಗುತ್ತಿದೆ ಎಂದರು.

ತಾಲೂಕು ಶಿಕ್ಷಕರ ಸಂಘದ ಅಧ್ಯಕ್ಷ ಎಂ.ಪಿ. ಶೀರನಹಳ್ಳಿ, ದೇವು ಹಡಪದ, ಮೋಹನ್ ದೇಸಾಯಿ ಸೇರಿದಂತೆ ಅನೇಕರು ಮಾತನಾಡಿದರು. ಎಸ್‌ಡಿಎಂಸಿ ಅಧ್ಯಕ್ಷ ಮೈನುದ್ದೀನ ಕವಲೂರ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಧರ್ಮಪ್ಪ, ಪುರಸಭೆ ಮಾಜಿ ಅಧ್ಯಕ್ಷೆ ಅನ್ನಪೂರ್ಣ ದೇಸಾಯಿ, ಪುರಸಭೆ ಮಾಜಿ ಸದಸ್ಯೆ ರೇಖಾ ದೇಸಾಯಿ, ಹಿರಿಯರಾದ ಶಂಭುಲಿಂಗನಗೌಡ ಹಕ್ಕಂಡಿ, ಶರಣು ಸೊಲಗಿ, ಶಿವು ವಾಲಿಕಾರ, ಲಕ್ಷ್ಮಿ ದೇಸಾಯಿ, ಎಂ.ಎಚ್. ಬಿಚಗತ್ತಿ, ಹಾಜಿಸಾಬ್ ಸದರಬಾಯಿ ಇತರರು ಇದ್ದರು. ಮುಖ್ಯೋಪಾಧ್ಯಾಯ ಬಸವರಾಜ ಹೆಬ್ಲಿ ನಿರೂಪಿಸಿ, ಎಸ್.ಕೆ. ರಾಜೂರ ವಂದಿಸಿದರು.ಸರ್ಕಾರಿ ಶಾಲೆಗೆ ದಾಖಲಿಸಿದರೆ ₹1 ಸಾವಿರ ಎಫ್‌ಡಿ

ಈಗಾಗಲೇ ತಾಲೂಕಿನ ಕೆಲೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಪಟ್ಟಣದ ಎಸ್.ಎಸ್. ಪಾಟೀಲ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರು ತಮ್ಮ ಸರ್ಕಾರಿ ಶಾಲೆಗಳಿಗೆ 1ನೇ ತರಗತಿಗೆ ದಾಖಲಾಗುವ ಮಗುವಿನ ಹೆಸರಿನಲ್ಲಿ ₹1 ಸಾವಿರ ಎಫ್‌ಡಿ ಮಾಡುವುದಾಗಿ ಘೋಷಿಸಿದ್ದರು. ಅದರಂತೆ ಮಂಗಳವಾರ ಸಂಜೆ ಜರುಗಿದ ಭೀಮಾಂಬಿಕಾ ನಗರದ ದಾಖಲಾತಿ ಕಾರ್ಯಕ್ರಮದಲ್ಲಿ ಸಿಆರ್‌ಪಿ ಐ.ಎಸ್. ಮುಲ್ಲಾ ಇಲ್ಲಿನ ಶಾಲೆಗೆ ದಾಖಲಾಗುವ ಪ್ರತಿ ಮಗುವಿನ ಹೆಸರಿನಲ್ಲಿ ₹1 ಸಾವಿರ ಎಫ್‌ಡಿ ಇಡುವುದಾಗಿ ಘೋಷಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

₹2 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಮೀನು ಮಾರುಕಟ್ಟೆ ನಿರ್ಮಾಣ: ಶಾಸಕ ಗವಿಯಪ್ಪ
ಕಲ್ಯಾಣ ಕರ್ನಾಟಕ ಭಾಗದಲ್ಲಿ ಶಿಕ್ಷಣಕ್ಕೆ ಆದ್ಯತೆ ಕೊಡಿ