ಕನ್ನಡಪ್ರಭ ವಾರ್ತೆ ಮಧುಗಿರಿ
ಜಿಲ್ಲಾಡಳಿತ, ಜಿಪಂ, ತಾಪಂ ಮಧುಗಿರಿ ಹಾಗೂ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಜಂಟಿ ಆಶ್ರಯದಲ್ಲಿ ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಬುಧವಾರ ಏರ್ಪಡಿಸಿದ್ದ ಗಂಗಾ ಕಲ್ಯಾಣ ಯೋಜನೆಯ ಫಲಾನುಭವಿಗಳಿಗೆ ಪಂಪ್ ಮೋಟಾರ್ ಹಾಗೂ ಪರಿಕರಗಳನ್ನು ವಿತರಿಸಿ ಮಾತನಾಡಿದರು.
ಸರ್ಕಾರದಿಂದ ಕೊಡುವ ಸಾಮಗ್ರಿಗಳ ಪೈಕಿ ರೈತರಿಗೆ ಕಳಪೆ ಪರಿಕರಗಳನ್ನು ನೀಡಿದರೆ ಆರ್ಥಿಕ ಹೊರೆ ಅವರ ಮೇಲೆ ಬೀಳುತ್ತದೆ. ಆದ ಕಾರಣ ಅಧಿಕಾರಿಗಳು ಮುತುವರ್ಜಿ ವಹಿಸಿ ಫಲಾನುಭವಿಗಳಇಗೆ ಅತ್ಯಂತ ಗುಣ ಮಟ್ಟದ ಮೋಟಾರಗಳು, ಪೈಪ್ಗಳು, ಹಾಗೂ ಹೆವಿ ಡ್ಯೂಟಿ ಕಾಲರ್ ಗಳನ್ನು ಒದಗಿಸಬೇಕು. ನಾನು 2004ರಲ್ಲಿ ಬೆಳ್ಳಾವಿ ಶಾಸಕನಾಗಿದ್ದಾಗ ವಿತರಿಸಿದ್ದ ಮೋಟಾರಗಳು ಇಂದಿಗೂ ಸುಸ್ಥಿತಿಯಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಅದೇ ನಂಬಿಕೆಯನ್ನು ನಾವು ಈಗಲೂ ಮುಂದುವರಿಸಿದ್ದೇವೆ ಎಂದರು.ಬೋರವೆಲ್ ಮೋಟಾರಗಳು ಸುರಕ್ಷತೆಯ ಬಗ್ಗೆ ರೈತರಿಗೆ ಜಾಗೃತಿ ಮೂಡಿಸಿದ ಅವರು, ಶೇ.99 ರಷ್ಟು ಮೋಟಾರ್ಗಳು ಸುಟ್ಟು ಹೋಗಲು ಕಳಪೆ ಸ್ಟಾರ್ಟರ್ ಹಾಗೂ ಲೂಸ್ ಕಾಂಟ್ಯಾಕ್ಟಗಳೇ ಮುಖ್ಯ ಕಾರಣ ಲೂಸ್ ಕಾಂಟ್ಯಾಕ್ಟ್ ಇದ್ದಾಗ ವಿದ್ಯುತ್ ವ್ಯತ್ಯಯದಿಂದಾಗಿ ಕಾಯಿಲ್ ಕಾಯ್ದು ಮೋಟಾರ್ ಸುಟ್ಟು ಹೋಗುತ್ತದೆ. ಹೀಗಾಗಿ ರೈತರು ಮೊದಲು ಸ್ಟಾರ್ಟರ್ ದೋಷಗಳನ್ನು ಜಾಗರೂಕತೆಯಿಂದ ಸರಿಪಡಿಸಿಕೊಂಡು ನಂತರ ಮೋಟಾರ್ ಬಳಕೆ ಮಾಡಬೇಕು ಎಂದು ರೈತರಿಗೆ ಸಲಹೆ ನೀಡಿದರು.
ರೈತರು ಕೇವಲ ಸಾಂಪ್ರದಾಯಿಕ ಬೆಳೆಗಳಿಗೆ ಸೀಮಿಕವಾಗದೆ ಜಮೀನುಗಳಲ್ಲಿ ಹಸಿರು ಮೇವು ಬೆಳೆದು ಹಸುಗಳನ್ನು ಸಾಕಿ ಡೈರಿಗೆ ಹಾಲು ಸರಬರಾಜು ಮಾಡುವ ನಿಟ್ಟನಲ್ಲಿ ಆರ್ಥಿಕ ಸ್ವಾಲಂಬನೆ ಸಾಧಿಸುವ ಮೂಲಕ ರೈತರು ತಮ್ಮ ಜೀವನ ಮಟ್ಟ ಸುಧಾರಣೆ ಮಾಡಿಕೊಳ್ಳುವಂತೆ ಶಾಸಕ ಕೆ.ಎನ್.ರಾಜಣ್ಣ ಸಲಹೆ ನೀಡಿದರು.
ಕೋಟ್...
- ಕೆ.ಎನ್.ರಾಜಣ್ಣ ಶಾಸಕರು ,ಮಧುಗಿರಿ