)
-ಪಾರದರ್ಶಕತೆ, ಆದಾಯ ಸೋರಿಕೆ ತಡೆಗೆ ಈ ವ್ಯವಸ್ಥೆ । ಕೆ.ಆರ್.ಮಾರ್ಕೆಟ್ 4 ಪ್ರವೇಶ ದ್ವಾರಗಳ ಬಳಿ ಟೋಲ್ಗೇಟ್ ಅಳವಡಿಕೆಗೆ ಪಾಲಿಕೆ ನಿರ್ಧಾರ
ಕೆ.ಆರ್.ಮಾರುಕಟ್ಟೆಗೆ ಪ್ರವೇಶಿಸುವ ತರಕಾರಿ, ಹೂವು, ಹಣ್ಣು ಮತ್ತಿತರ ಸರಕು ಸಾಗಣೆ ವಾಹನಗಳ ಶುಲ್ಕ ಸಂಗ್ರಹ ವ್ಯವಸ್ಥೆಯಲ್ಲಿ ಪಾರದರ್ಶಕತೆಯನ್ನು ತರಲು ಪ್ರವೇಶ ಸ್ಥಳದಲ್ಲಿ ಟೋಲ್ ಗೇಟ್ ಮೂಲಕ ಶುಲ್ಕ ಸಂಗ್ರಹ ವ್ಯವಸ್ಥೆಯನ್ನು ಪರಿಚಯಿಸಲು ಕೇಂದ್ರ ನಗರ ಪಾಲಿಕೆ ಮುಂದಾಗಿದೆ.
ಮಾರುಕಟ್ಟೆಗೆ ಹಣ್ಣು, ತರಕಾರಿ, ಹೂವು, ಮೊಟ್ಟೆ, ಮಾಂಸ ತರುವ ವಾಹನಗಳಿಗೆ ಮೊದಲಿಂದಲು ಶುಲ್ಕ ವಿಧಿಸಲಾಗುತ್ತಿದೆ. ಹಾಲಿ ದಿನಕ್ಕೆ ಒಟ್ಟು ನಾಲ್ಕು ಸಾವಿರ ರು. ಮಾತ್ರ ಶುಲ್ಕ ಸಂಗ್ರಹವಾಗುತ್ತಿದೆ. ಆದಾಯ ಸೋರಿಕೆ ತೀವ್ರವಾಗಿತ್ತು. ಶುಲ್ಕ ಸಂಗ್ರಹ ವ್ಯವಸ್ಥೆಯಲ್ಲಿ ಪಾರದರ್ಶಕತೆ ಇರಲಿಲ್ಲ. ಹೀಗಾಗಿ, ಪಾರದರ್ಶಕತೆ ಮತ್ತು ಆದಾಯ ಸೋರಿಕೆಯನ್ನು ತಡೆಗಟ್ಟಲು ವ್ಯವಸ್ಥಿತ ಟೋಲ್ ಗೇಟ್ ವ್ಯವಸ್ಥೆ ಅನುಷ್ಠಾನಗೊಳಿಸಲಾಗುತ್ತದೆ. ಇದರಿಂದ ದೈನಂದಿನ ಆದಾಯ 10 ಸಾವಿರ ರು. ದಾಟುವ ನಿರೀಕ್ಷೆ ಇದೆ ಎಂದು ಪಾಲಿಕೆ ಆಯುಕ್ತ ಜಿ.ಜಗದೀಶ್ ‘ಕನ್ನಡಪ್ರಭ’ಕ್ಕೆ ತಿಳಿಸಿದರು.ನೂತನ ವ್ಯವಸ್ಥೆಯಡಿ ಮಾರುಕಟ್ಟೆಯ ನಾಲ್ಕು ಪ್ರವೇಶ ದ್ವಾರಗಳ ಬಳಿ ಟೋಲ್ ಗೇಟ್ ಅಳವಡಿಸಲಾಗುತ್ತದೆ. ಒಳ ಪ್ರವೇಶಿಸುವ ವ್ಯಾಪಾರಿಗಳು, ಮಧ್ಯವರ್ತಿಗಳ ವಾಹನಗಳಲ್ಲಿನ ಲೋಡ್ ಆಧಾರದ ಮೇಲೆ ಶುಲ್ಕ ವಿಧಿಸಲಾಗುತ್ತದೆ. ಟ್ರಕ್, 6 ಚಕ್ರ ಅಥವಾ ಅದಕ್ಕಿಂತ ದೊಡ್ಡ ವಾಹನಗಳಿಗೆ 350 ರು. 4 ಚಕ್ರ ವಾಹನಗಳಿಗೆ 100 ರು. ಹಾಗೂ ತ್ರಿಚಕ್ರ ವಾಹನಗಳಿಗೆ 75 ರು. ವಿಧಿಸಲಾಗುತ್ತದೆ. ಪ್ರತಿ ಚೀಲ, ಬಾಕ್ಸ್ ಸರಕಿಗೆ 5 ರು. ಶುಲ್ಕವನ್ನು ವಿಧಿಸಲಾಗುತ್ತದೆ ಎಂದು ಜಗದೀಶ್ ತಿಳಿಸಿದರು.
ರೈತರಿಗೆ ಯಾವುದೇ ಶುಲ್ಕ ಇಲ್ಲ
-ಟ್ರಕ್ / 6 ಚಕ್ರ ಹಾಗೂ ಅದಕ್ಕಿಂತ ದೊಡ್ಡ ವಾಹನ- ₹350
-3 ಚಕ್ರಗಳ ಸರಕು ವಾಹನಗಳು- ₹75ಸರಕು ಶುಲ್ಕ
- ಮೊಟ್ಟೆ 1 ಬಾಕ್ಸ್ (10 ಟ್ರೇಗಳವರೆಗೆ) - ₹10