- ಯುಪಿಎಸ್ಸಿ, ಕೆಪಿಎಸ್ಸಿ, ಕೆಇಎಗೂ ಸಂಕಲ್ಪ-2ನಡಿ ತರಬೇತಿಗೆ ಆನ್ಲೈನ್ ನೋಂದಣಿ ಪ್ರಕ್ರಿಯೆ: ಡಾ.ಪ್ರಭಾ ಮಾಹಿತಿ - - -
ಎಸ್.ಎಸ್. ಕೇರ್ ಟ್ರಸ್ಟ್, ದಾವಣಗೆರೆ ವಿ.ವಿ. ಹಾಗೂ ಬೆಂಗಳೂರಿನ ಐಎಎಸ್ ಬಾಬಾ ಸಹಯೋಗದಲ್ಲಿ ಸಂಕಲ್ಪ-2 ಯೋಜನೆಯಡಿ ದಾವಣಗೆರೆಯ ಸಂಕಲ್ಪ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದಿಂದ ಉಚಿತ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿಗೆ ನೋಂದಣಿ ಪ್ರಕ್ರಿಯೆ ಆರಂಭಿಸಲಾಗಿದೆ ಎಂದು ಸಂಸದೆ, ಎಸ್.ಎಸ್. ಕೇರ್ ಟ್ರಸ್ಟ್ ಮುಖ್ಯಸ್ಥೆ ಡಾ.ಪ್ರಭಾ ಮಲ್ಲಿಕಾರ್ಜುನ ತಿಳಿಸಿದರು.
ನಗರದ ಸಂಕಲ್ಪ ಸ್ಪರ್ಧಾತ್ಮಕ ತರಬೇತಿ ಕೇಂದ್ರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಸ್ಪರ್ಧಾತ್ಮಕ ಪರೀಕ್ಷಾ ಆಕಾಂಕ್ಷಿಗಳಿಗೆ ಜು.26ರಿಂದ 31ರವರೆಗೆ ಗೂಗಲ್ ಫಾರಂ ನೋಂದಣಿಗೆ ಅವಕಾಶ ಇದೆ. ಆ.3ರ ಬೆಳಗ್ಗೆ 10.30 ಗಂಟೆಗೆ ಇಲ್ಲಿನ ಬಿಐಇಟಿ ಕಾಲೇಜಿನಲ್ಲಿ ಪ್ರವೇಶ ಪರೀಕ್ಷೆ ನಡೆಸಿ, ಆ.5ರಂದು ಪ್ರವೇಶ ಪರೀಕ್ಷೆಯ ಫಲಿತಾಂಶ ಪ್ರಕಟಿಸಲಾಗುವುದು ಎಂದರು.ಆ.5 ಮತ್ತು 6ರಂದು ಸಂದರ್ಶನ ಮೂಲಕ ಮೆರಿಟ್ ಆಧಾರದಲ್ಲಿ 300 ವಿದ್ಯಾರ್ಥಿಗಳಿಗೆ ಆಯ್ಕೆ ಮಾಡಿ, ಸಂಕಲ್ಪದಲ್ಲಿ ಉಚಿತ ತರಬೇತಿ ನೀಡಲಾಗುವುದು. ಆ.8ರಂದು ಬೆಳಿಗ್ಗೆ 11ಕ್ಕೆ ಬಿಐಇಟಿ ಕಾಲೇಜಿನ ಎಸ್ಸೆಸ್ ಮಲ್ಲಿಕಾರ್ಜುನ ಸಾಂಸ್ಕೃತಿಕ ಕೇಂದ್ರದಲ್ಲಿ ಸಂಕಲ್ಪ-2 ರೆಗ್ಯುಲರ್ ತರಗತಿಗಳಿಗೆ ಚಾಲನೆ ನೀಡಲಾಗುವುದು. ಯುಪಿಎಸ್ಸಿಗೆ ಮಾತ್ರವಲ್ಲದೇ, ಕೆಪಿಎಸ್ಸಿ, ಕೆಇಎ ಪರೀಕ್ಷೆಗಳಿಗೂ ಸಂಕಲ್ಪ-2 ಮೂಲಕ ತರಬೇತಿ ನೀಡಲಾಗುವುದು ಎಂದು ಅವರು ಹೇಳಿದರು.
ಸಂಕಲ್ಪ-1 ತರಬೇತಿ ಯೋಜನೆಗೆ ವಿದ್ಯಾರ್ಥಿಗಳಿಗೆ ಸ್ಪಂದನೆ ಸಿಕ್ಕಿದ್ದು, 1541 ವಿದ್ಯಾರ್ಥಿಗಳು ಪ್ರವೇಶ ಪರೀಕ್ಷೆ ಬರೆದಿದ್ದರು. ದರಲ್ಲಿ 300 ವಿದ್ಯಾರ್ಥಿಗಳು ಆಯ್ಕೆಯಾಗಿದ್ದು, ತರಬೇತಿ ಪಡೆದ ಹಲವಾರು ವಿದ್ಯಾರ್ಥಿಗಳು ಅನೇಕ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ಇದೇ ಯಶಸ್ಸಿನ ಹಿನ್ನೆಲೆಯಲ್ಲಿ ಸಂಕಲ್ಪ-2 ಯೋಜನೆಯನ್ನು ಮತ್ತಷ್ಚು ವಿಸ್ತೃತಗೊಳಿಸಿ, ಆರಂಭಿಸುತ್ತಿದ್ದೇವೆ. ಸರ್ಕಾರ 72 ಸಾವಿರಕ್ಕೂ ಅದಿಕ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ತರಬೇತಿ ಅವಕಾಶ ಸದ್ಭಳಕೆ ಮಾಡಿಕೊಳ್ಳಬೇಕು ಎಂದು ಸಂಸದೆ ಡಾ.ಪ್ರಭಾ ತಿಳಿಸಿದರು.
- - -
* ಸರ್ಕಾರಿ ಶಾಲೆಗಳಿಗೆ ಕಾರ್ಗಿಲ್ ಯುದ್ಧ ಪುಸ್ತಕ ಹಂಚಿಕೆ
ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವೀರಚಕ್ರ ಪುರಸ್ಕೃತ ಕರ್ನಲ್ ಎಂ.ಬಿ. ರವೀಂದ್ರನಾಥ ಕಾರ್ಗಿಲ್ ಯುದ್ಧದ ಕುರಿತಂತೆ ಅತ್ಯದ್ಭುತ ಪುಸ್ತಕ ತಂದಿದ್ದು, ತಮ್ಮ ಅನುಭವ, ಯುದ್ಧದ ಸನ್ನಿವೇಶನಗಳು, ಪ್ರತಿಕೂಲ ಪರಿಸ್ಥಿತಿಯಲ್ಲೂ ನಮ್ಮ ವೀರಯೋಧರ ದೇಶಪ್ರೇಮ, ಶತೃಗಳನ್ನು ಸದೆಬಡಿಯುವ ಕೆಚ್ಚು ಹೀಗೆ ಎಲ್ಲವನ್ನೂ ಒಳಗೊಂಡಿದೆ. ಇಂತಹ ಅಪರೂಪದ ಪುಸ್ತಕವನ್ನು ಪ್ರತಿಯೊಬ್ಬರೂ ಓದಬೇಕಿದೆ ಎಂದರು.
- - -
ದಾವಣಗೆರೆಯಲ್ಲಿ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಸಂಕಲ್ಪ-2 ಯೋಜನೆ ಕುರಿತಂತೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.