ಮುಳಗುಂದ: ಪರಿಸರ ಸಮತೋಲನ ಕಾಪಾಡುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದ್ದು, ಮರಗಳ ಸಂರಕ್ಷಣೆ, ಪ್ಲಾಸ್ಟಿಕ್ ಬಳಕೆ ನಿಯಂತ್ರಣ ಹಾಗೂ ಸ್ವಚ್ಛ ಪರಿಸರ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕೆಂದು ಪ್ರಾ. ಎ.ಎಂ. ಅಂಗಡಿ ತಿಳಿಸಿದರು.
ಗದಗ: ನಾವು ಮನೆಯನ್ನಷ್ಟೇ ಸ್ವಚ್ಛವಾಗಿಟ್ಟುಕೊಳ್ಳದೇ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಂಡು ಗದಗ- ಬೆಟಗೇರಿ ನಗರಸಭೆಯಿಂದ ಜರುಗುತ್ತಿರುವ ಹೊಸ ಘನತ್ಯಾಜ್ಯ ನಿರ್ವಹಣಾ ನಿಯಮ ಕುರಿತು ಜಾಗೃತಿ ಕಾರ್ಯಕ್ರಮಕ್ಕೆ ಕೈಜೋಡಿಸುವ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸೋಣ ಎಂದು ಸಂಪನ್ಮೂಲ ವ್ಯಕ್ತಿ ಕವಿತಾ ದಂಡಿನ ತಿಳಿಸಿದರು.ಗದಗ- ಬೆಟಗೇರಿ ನಗರಸಭೆಯಿಂದ ಆಯ್ದ ಶಾಲೆಗಳಾದ ಸಿದ್ಧಲಿಂಗ ನಗರದ 15ನೇ ನಂಬರ ಶಾಲೆಯ ಹೊರಗಿನ ಗೋಡೆಗಳಿಗೆ ಚಿತ್ರಗಳನ್ನು ಬಿಡಿಸಿ ಮಕ್ಕಳಿಗೆ ಸ್ವಚ್ಛತೆಯ ಅರಿವು, ಹೊಸ ಘನತ್ಯಾಜ್ಯ ನಿರ್ವಹಣಾ ನಿಯಮ- 2026 ಕುರಿತು ಮಾಹಿತಿ ನೀಡುತ್ತಿರುವ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಾವೆಲ್ಲರೂ ಪರಿಸರ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಮನೆಕಸ ಸಂಗ್ರಹಣೆಯಲ್ಲಿ ಕಸವನ್ನು ಬೇರೆ ಮಾಡಿ ಕಾಂಪೋಸ್ಟ್ ಮಾಡುವ ವಿಧಾನದೊಂದಿಗೆ ನಾವು ಕಸದಿಂದ ರಸವನ್ನು ಕಂಡುಕೊಳ್ಳಬಹುದು. ಗದಗ- ಬೆಟಗೇರಿ ನಗರಸಭೆಯ ಪೌರಾಯುಕ್ತರು ವಿಶೇಷ ಕಾರ್ಯಕ್ರಮ ಮೂಲಕ ತಮ್ಮ ತಂಡದೊಂದಿಗೆ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿರುವುದು ಸಂತಸ ತಂದಿದೆ ಎಂದರು.ಶಿಕ್ಷಣ ಸಂಯೋಜಕ ಮುರಳಿ ಸೋಲ್ಲಾಪೂರ ಮಾತನಾಡಿ, ಈ ಕಾರ್ಯಕ್ರಮವು ಅತ್ಯಂತ ಉಪಯುಕ್ತವಾಗಿದ್ದು, ಶಾಲೆಯ ಮಕ್ಕಳಿಗೆ ಉದಾಹರಣೆ ಸಮೇತ ಕಸ ವಿಲೇವಾರಿ, ಸ್ವಚ್ಛತೆ, ವಿಂಗಡಣೆ, ಕಸದಿಂದ ಸಂಪನ್ಮೂಲ ಸೃಷ್ಟಿಯಾಗಿ ತೊಂದರೆ ಆಗುವುದು. ಅದಕ್ಕಾಗಿ ಸಾರ್ವಜನಿಕರು ತಮ್ಮ ಮನೆಗಳಲ್ಲಿ ಕಸವನ್ನು ವಿಂಗಡಣೆ ಮಾಡಿ ಪೌರಕಾರ್ಮಿಕರಿಗೆ ನೀಡಿ ಅವರ ಶ್ರಮಕ್ಕೆ ಕೈಜೋಡಿಸೋಣ ಎಂದರು.