ಪರಿಸರ ಸಂರಕ್ಷಣೆ ಎಲ್ಲರ ಕರ್ತವ್ಯ: ಮನೋಜ ಮಾಣಿಕ ಹುಬ್ಬಳ್ಳಿ

KannadaprabhaNewsNetwork |  
Published : Nov 01, 2024, 12:00 AM IST
ಫೋಟೊಪೈಲ್- ೩೧ಎಸ್ಡಿಪಿ೨- ಸಿದ್ದಾಪುರದಲ್ಲಿ ಲಯನ್ಸ ಕ್ಲಬ್ ನ ಪರಿಸರ ಜ್ಯೋತಿ ಕಾರ್ಯಕ್ರಮದಲ್ಲಿ ಪರಿಸರ ರಕ್ಷಣೆಗೆ ಸಂಬAಧಿಸಿದ ಬಟ್ಟೆ ಚೀಲವನ್ನು ಬಿಗುಡೆಗೊಳಿಸಲಾಯಿತು. | Kannada Prabha

ಸಾರಾಂಶ

ಹಸಿರು ಬೆಳೆಯಿರಿ, ಪ್ಲಾಸ್ಟಿಕ್ ನಿರ್ಮೂಲನೆಗೊಳಿಸಿ ಇ- ತ್ಯಾಜ್ಯ ಸಂಗ್ರಹಿಸಿ ಎಂಬ ಪರಿಸರ ಜ್ಯೋತಿ ಕಾರ್ಯಕ್ರಮ ನಡೆಯಿತು.

ಸಿದ್ದಾಪುರ: ಪರಿಸರ ಸಂರಕ್ಷಣೆ ಎಲ್ಲರ ಕರ್ತವ್ಯ. ಪರಿಸರಕ್ಕೆ ಹಾನಿಯನ್ನು ಉಂಟು ಮಾಡಬೇಡಿ. ನಿರುಪಯುಕ್ತ ವಸ್ತುಗಳನ್ನು ಯಾರಿಗೂ ತೊಂದರೆಯಾಗದ ಸ್ಥಳದಲ್ಲಿ ಚೆಲ್ಲಿ, ಮರುಬಳಕೆಗೆ ಬಂದರೆ ಉಪಯೋಗಿಸಿ, ಪ್ಲಾಸ್ಟಿಕ್ ಮುಕ್ತ ವಾತಾವರಣವನ್ನು ಕಾಯ್ದುಕೊಳ್ಳಿ ಎಂದು ಲಯನ್ಸ್ ಜಿಲ್ಲಾ ಗವರ್ನರ್ ಮನೋಜ ಮಾಣಿಕ ಹುಬ್ಬಳ್ಳಿ ತಿಳಿಸಿದರು.ಲಯನ್ಸ್ ಜಿಲ್ಲೆ ೩೧೭ ಬಿ ವತಿಯಿಂದ ಸಿದ್ದಾಪುರ ಲಯನ್ಸ್ ಕ್ಲಬ್ ಸಹಯೋಗದಲ್ಲಿ ಬಾಲಭವನದಲ್ಲಿ ಹಸಿರು ಬೆಳೆಯಿರಿ, ಪ್ಲಾಸ್ಟಿಕ್ ನಿರ್ಮೂಲನೆಗೊಳಿಸಿ. ಇ- ತ್ಯಾಜ್ಯ ಸಂಗ್ರಹಿಸಿ ಎಂಬ ಪರಿಸರ ಜ್ಯೋತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಡಾ. ಎಂ.ಪಿ. ಶೆಟ್ಟಿ ಸ್ಮರಣೀಯ ಭವನಕ್ಕೆ ಅಡಿಗಲ್ಲನ್ನು ಇಟ್ಟರು. ಈ ಸಂದರ್ಭದಲ್ಲಿ ನೂತನ ಸದಸ್ಯರನ್ನಾಗಿ ಸೇರ್ಪಡೆಗೊಂಡ ಕೆ.ಆರ್. ವಿನಾಯಕ ಕೋಲಸಿರ್ಸಿ, ಎಂ.ವಿ. ನಾಯ್ಕ, ಗಣೇಶ ಪೈ, ನವೀನ ಪೈ ಅವರಿಗೆ ಲಯನ್ಸ್ ಸದಸ್ಯತ್ವ ವಿಧಿ ಬೋಧಿಸಿದರು.ಮಾಜಿ ಮಲ್ಟಿಪಲ್ ಜಿಲ್ಲಾ ಚೇರ‍್ಮನ್ ಅಗ್ನೆಲೊ ಅಲ್ಕೋಸಿಸ್ ಬಟ್ಟೆಯ ಕೈಚೀಲವನ್ನು ಬಿಡುಗಡೆಗೊಳಿಸಿ ಪ್ಲಾಸ್ಟಿಕ್ ಮುಕ್ತಗೊಳಿಸಲು ಕರೆ ನೀಡಿದರು.

ಮಾಜಿ ಜಿಲ್ಲಾ ಗವರ್ನರ್‌ಗಳಾದ ಪ್ರದೀಪ ಕುಲಕರ್ಣಿ ಗೋವಾ, ಜಿ.ಎನ್. ನಾಯಕ ಗೋಕರ್ಣ, ಡಾ. ರವಿ ಹೆಗಡೆ ಹೂವಿನಮನೆ, ರೀಜನಲ್ ಚೇರ‍್ಮನ್ ಆರ್.ಎಚ್. ನಾಯಕ, ಜಿಲ್ಲಾ ಸಂಪುಟ ಕಾರ್ಯದರ್ಶಿ ವಿನೋದ ಜೈನ್, ಇ- ವೇಸ್ಟ್ ವಿಭಾಗದ ಜಿಲ್ಲಾ ಚೇರ‍್ಮನ್ ಉಳ್ಳಾಗಡ್ಡಿಮಠ, ವಲಯ ಅಧ್ಯಕ್ಷ ಅಶೋಕ ಹೆಗಡೆ ಶಿರಸಿ ಮಾತನಾಡಿದರು. ಅಧ್ಯಕ್ಷತೆಯನ್ನು ಸ್ಥಳೀಯ ಲಯನ್ಸ ಕ್ಲಬ್ ಅಧ್ಯಕ್ಷ ಎ.ಜಿ. ನಾಯ್ಕ ವಹಿಸಿದ್ದರು. ಅರ್ಚನಾ ಹೆಗಡೆ ಪ್ರಾರ್ಥಿಸಿದರು. ವಲಯಾಧ್ಯಕ್ಷೆ ಶ್ಯಾಮಲಾ ಹೆಗಡೆ ಹೂವಿನಮನೆ ಸ್ವಾಗತಿಸಿದರು. ನಾಗರಾಜ ದೋಶೆಟ್ಟಿ ಧ್ವಜವಂದನೆ ಸಲ್ಲಿಸಿದರು. ಜಿ.ಜಿ. ಹೆಗಡೆ ಬಾಳಗೋಡ, ವೀಣಾ ಶೇಟ ಪರಿಚಯಿಸಿದರು. ಆಕಾಶ ಹೆಗಡೆ ಗುಂಜಗೋಡ ನಿರೂಪಿಸಿದರು. ಕುಮಾರ ಗೌಡರ್ ವಂದಿಸಿದರು.

ಇಂದು ಉಸ್ತುವಾರಿ ಸಚಿವರಿಂದ ಧ್ವಜಾರೋಹಣ

ಕಾರವಾರ: ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ಎಸ್. ವೈದ್ಯ ಅವರು ಗುರುವಾರ ರಾಜ್ಯೋತ್ಸವ ದಿನಾಚರಣೆ ಪ್ರಯುಕ್ತ ಇಲ್ಲಿನ ಪೊಲೀಸ್ ಪರೇಡ್ ಮೈದಾನದಲ್ಲಿ ನಡೆಯುವ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.ಸಚಿವರು ಗುರುವಾರ ಬೆಳಗ್ಗೆ 8 ಗಂಟೆಗೆ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಹಲ್ಮಿಡಿ ಶಾಸನದ ಪ್ರತಿಕೃತಿ ಅನಾವರಣ ಮಾಡಲಿದ್ದಾರೆ. 8.10ಕ್ಕೆ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಕನ್ನಡಾಂಬೆ ಭಾವಚಿತ್ರಕ್ಕೆ ಪೂಜೆ ಹಾಗೂ ಮೆರವಣಿಗೆಗೆ ಚಾಲನೆ ನೀಡುವರು. 9 ಗಂಟೆಗೆ ಪೊಲೀಸ್ ಪರೇಡ್ ಮೈದಾನದಲ್ಲಿ, ಕರ್ನಾಟಕ ರಾಜ್ಯೋತ್ಸವ ದಿನಾಚರಣೆಯ ಪ್ರಯುಕ್ತ ನಡೆಯುವ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಭಾಗವಹಿಲಿದ್ದಾರೆ.

PREV

Recommended Stories

3ನೇ ಮಹಡಿಯಿಂದ ಆಯತಪ್ಪಿಬಿದ್ದು ಪಿಯು ವಿದ್ಯಾರ್ಥಿನಿ ಸಾವು
ಜೈಲೊಳಗೆ ಡ್ರಗ್ಸ್ ಸಾಗಿಸಲುಯತ್ನ: ವಾರ್ಡನ್ ಬಂಧನ