ಪರಿಸರಪ್ರೇಮಿ ವೈದ್ಯರಿಂದ ದೇಶ ವಿದೇಶಗಳಿಗೆ ಹಕ್ಕಿಗಳ ಚಿತ್ರ ಪ್ರಸಾರ

KannadaprabhaNewsNetwork |  
Published : Oct 11, 2025, 12:03 AM IST
ವೀರಾಜಪೇಟೆಯಿಂದ ಜಗದಗಲ ಹಾರಿದ ದೇವನಕ್ಕಿ - ವೈದ್ಯರ ಪರಿಸರ ಕಾಳಜಿಗೆ 41 ವಷ೯!( ವನ್ಯಜೀವಿ ಸಪ್ತಾಹದ ಅಂಗವಾಗಿ ಪ್ರತೀವಷ೯ ಪಕ್ಷಿ ಸಂದೇಶ ರವಾನಿಸುವ ಡಾ.ನರಸಿಂಹನ್ - ಅಪರೂಪದ ಸಂದೇಶವಾಹಕನ ಕಾಯ೯ಕ್ಕೆ 4 ದಶಕಗಳ ಹಿರಿಮೆ | Kannada Prabha

ಸಾರಾಂಶ

ವನ್ಯಜೀವಿ ಸಪ್ತಾಹದ ಅಂಗವಾಗಿ ಪ್ರತೀ ವರ್ಷ ವಿರಾಜಪೇಟೆಯ ಪಕ್ಷಿ ತಜ್ಞ ಡಾ. ಎಸ್‌ ವಿ. ನರಸಿಂಹನ್‌ ಪಕ್ಷಿಗಳ ಚಿತ್ರಗಳನ್ನು ದೇಶ ವಿದೇಶಗಳಿಗೆ ರವಾನಿಸುತ್ತಾರೆ.

ವಿಶೇಷ ವರದಿ

ಕನ್ನಡಪ್ರಭವಾರ್ತೆ ವಿರಾಜಪೇಟೆ

ವನ್ಯಜೀವಿ ಸಪ್ತಾಹದ ಅಂಗವಾಗಿ ಪ್ರತೀವರ್ಷ ವಿರಾಜಪೇಟೆಯ ಪಕ್ಷಿ ತಜ್ಞ ಡಾ.ಎಸ್. ವಿ. ನರಸಿಂಹನ್‌ ಪಕ್ಷಿಗಳ ಚಿತ್ರಗಳನ್ನು ದೇಶ, ವಿದೇಶಗಳಿಗೆ ರವಾನಿಸುತ್ತಾರೆ. ಡಾ. ನರಸಿಂಹನ್ ಅವರು ಇದುವರೆಗೆ ರವಾನಿಸಿರುವ ವೈವಿಧ್ಯಮಯ ಚಿತ್ರಗಳ ಸಂಖ್ಯೆ 16640!. ಈ ವರ್ಷ ಕಳುಹಿಸಿರುವ ಪಕ್ಷಿ ಸಂದೇಶದ ಚಿತ್ರಗಳ ಸಂಖ್ಯೆ 1,208.

ಅಕ್ಟೋಬರ್ ಮೊದಲ ವಾರದಲ್ಲಿ ಜರುಗುವ ವನ್ಯಜೀವಿ ಸಪ್ತಾಹ ಅಂಗವಾಗಿ ವಿರಾಜಪೇಟೆಯ ಪಕ್ಷಿ ತಜ್ಞ ಡಾ.ಎಸ್. ವಿ. ನರಸಿಂಹನ್‌ ಅವರು ಪಕ್ಷಿಗಳ ಚಿತ್ರಗಳನ್ನು ದೇಶ, ವಿದೇಶಗಳಿಗೆ ಕಳುಹಿಸುತ್ತಾರೆ. ಇವರ ಈ ಪರಿಸರ ಕಾರ್ಯಕ್ರಮ ಕಳೆದ 41 ವರ್ಷಗಳಿಂದ ನಡೆಯುತ್ತಿದೆ.

ಡಾ.ನರಸಿಂಹನ್ ಪರಿಸರ ಕಾರ್ಯಕ್ರಮಕ್ಕೆ ಲಿಮ್ಕಾ ಬುಕ್ ಆಫ್ ವಲ್ಡ್ ರೆಕಾರ್ಡ್‌, ಅತ್ಯಧಿಕ ಸಂಖ್ಯೆಯಲ್ಲಿ ವನ್ಯಜೀವಿಗಳ ಚಿತ್ರಗಳ ಕಾಡ್೯ ರಚಿಸುವ ಕಲಾವಿದ ಎಂಬ ಪ್ರತಿಷ್ಠಿತ ದಾಖಲೆ ಪತ್ರ ನೀಡಿದೆ.

ಡಾ. ನರಸಿಂಹನ್ ಪ್ರತೀ ವರ್ಷ ಕೂಡ ಸಂದೇಶದ ಪಕ್ಷಿಗಳನ್ನು ಆಯ್ಕೆಗೊಳಿಸಿ ಪಕ್ಷಿಗಳ ಹಿನ್ನೆಲೆ ಸಂದೇಶ ಪತ್ರಗಳಲ್ಲಿ ರವಾನಿಸುತ್ತಾರೆ. ಪ್ರಸಕ್ತ ವರ್ಷ ಬಾಲದ ದೇವನಕ್ಕಿ ಪಕ್ಷಿಯನ್ನು ಆಯ್ಕೆ ಮಾಡಿದ್ದಾರೆ.

ಏಷ್ಯಾ ಖಂಡದಲ್ಲಿ ಬಾಲದ ದೇವನಕ್ಕಿ ಕಾಣಸಿಗುತ್ತದೆ. ಸರೋವರಗಳಲ್ಲಿ ವಾಸ ಮಾಡುತ್ತದೆ. ನೋಡಲು ತುಂಬಾ ಆಕರ್ಷಕವಾಗಿದ್ದು ಸಲಭದಲ್ಲಿ ಗುರುತಿಸಬಹುದು. ಈ ವರ್ಷ ಸಂದೇಶದ ಪಕ್ಷಿಯಾಗಿ ಬಾಲದ ದೇವನಕ್ಕಿ ಆಯ್ಕೆಮಾಡಿದ್ದಾರೆ.

ಪ್ರತೀ ವರ್ಷವೂ ವನ್ಯಜೀವಿ ವಿಶೇಷ ಸಂದೇಶಗಳ ಅಂಚೆ ಕಾರ್ಡ್‌ಗಳನ್ನು ಡಾ.ನರಸಿಂಹನ್ ರವಾನಿಸುತ್ತಾರೆ. ವನ್ಯಜೀವಿಗಳ ಚಿತ್ರ ಬಿಡಿಸಿ ಅಕ್ಟೋಬರ್‌ನಲ್ಲಿ ಅಂಚೆಯಲ್ಲಿ ಚಿತ್ರಗಳನ್ನು ಕಳುಹಿಸುತ್ತಾರೆ. ಕೊಡಗಿನ ಖಗರತ್ನಗಳು ನರಸಿಂಹನ್‌ ರಚಿಸಿರುವ ಒಂದು ಅದ್ಭುತ ಕೃತಿಯಾಗಿದೆ.

ಪರಿಸರ ಕುರಿತು ತಿಳುವಳಿಕೆ ಮೂಡಿದಾಗ ಪಯತ್ನಕ್ಕೆ ತೃಪ್ತಿ ಲಭಿಸುತ್ತದೆ. ಈ ಹಿನ್ನೆಲೆ ಪ್ರತಿ ವರ್ಷವೂ ಸಂದೇಶದ ಕಾರ್ಡ್‌ಗಳನ್ನು ರವಾನಿಸುತ್ತಿದ್ದೇನೆ ಎಂದು ಪಕ್ಷಿ ತಜ್ಞ ಡಾ.ಎಸ್. ವಿ. ನರಸಿಂಹನ್ ತಿಳಿಸಿದರು.

PREV

Recommended Stories

ಸಂಪುಟ ಪುನರ್‌ ರಚನೆ ಸುಳಿವು : ದಲಿತ ಸಚಿವರ ಸಭೆ!
ಶೂದ್ರ ಶ್ರೀನಿವಾಸ್‌ ಸೇರಿ ಐವರಿಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ