ಹುಬ್ಬಳ್ಳಿ:
ನಗರದಲ್ಲಿ ಬುಧವಾರ ಆಯೋಜಿಸಿದ್ದ ಸೇವಾ ಭಾರತಿ ರಜತ ಮಹೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಪಾಲ್ಗೊಂಡು ಅವರು ಮಾತನಾಡಿದರು.ಎಲ್ಲ ವರ್ಗದ ಜನರನ್ನು ಸೇವೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಸಮಾನತೆ, ಸಾಮರಸ್ಯ ತರಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಸೇವಾ ಭಾರತಿ ಸಂಸ್ಥೆಯು ಮಹತ್ವದ ಹೆಜ್ಜೆ ಇಡಲಿ ಎಂದು ಸಲಹೆ ಮಾಡಿದರು.
ಭಾರತ ಸಾಕಷ್ಟು ಬದಲಾವಣೆ ಕಂಡಿದ್ದರೂ ಸಮಾಜದಲ್ಲಿ ಮೇಲ್ಜಾತಿ, ಕೆಳ ಜಾತಿ ಎಂಬ ತಾರತಮ್ಯ ಭಾವನೆ ಎಲ್ಲೆಡೆ ಕಂಡು ಬರುತ್ತಿದೆ. ಅಸ್ಪೃಶ್ಯತೆಯು ಇನ್ನೂ ಜೀವಂತವಾಗಿದೆ ಎಂದ ಅವರು, ರಾಜ್ಯದ ತಾಲೂಕುವೊಂದರ ಗ್ರಾಪಂ ಅಧ್ಯಕ್ಷ ಸ್ಥಾನ ಪರಿಶಿಷ್ಟ ಮಹಿಳೆಗೆ ಮೀಸಲಾಗಿದ್ದ ಕಾರಣಕ್ಕೆ, ಪಂಚಾಯಿತಿಯ 19 ಸದಸ್ಯರು ಆ ಮಹಿಳೆಯ ಹೆಸರನ್ನು ಸೂಚಿಸಲಿಲ್ಲ. ಸದಸ್ಯರು ಹೆಸರು ಸೂಚಿಸದ ಕಾರಣಕ್ಕೆ ಪ್ರಕರಣ ಕೋರ್ಟ್ ಮೆಟ್ಟಿಲೇರಿತು. ಪರಿಶಿಷ್ಟ ಮಹಿಳೆಗೆ ಎರಡೂವರೆ ವರ್ಷ ಅಧಿಕಾರ ಅವಧಿಯನ್ನು ಕೋರ್ಟ್ ಐದು ವರ್ಷದವರೆಗೆ ನೀಡಿತ್ತು ಎಂದು ಸಮಾಜದಲ್ಲಿ ಇನ್ನು ಅಸ್ಪೃಶ್ಯತೆ ಇದೆ ಎಂಬುದನ್ನು ಉದಾಹರಣೆ ಸಮೇತ ವಿವರಿಸಿದರು.ಅವಕಾಶ ವಂಚಿತರಿಗೆ ನೆರವಾಗಬೇಕು. ದುರ್ಬಲರನ್ನು ಸಬಲರನ್ನಾಗಿಸಬೇಕು. ನೊಂದು ಬೆಂದಂತಹ ಜನರನ್ನು ಸಮಾಜದ ಮುಖ್ಯ ವಾಹಿನಿಗೆ ತರುವ ಕೆಲಸ ಆಗಬೇಕಿದೆ. ಇದಕ್ಕೆ ಆರ್ಎಸ್ಎಸ್ ಸದಾ ಬೆನ್ನೆಲುಬಾಗಿ ನಿಲ್ಲಲ್ಲಿದೆ ಎಂದು ತಿಳಿಸಿದರು.
ಕೋರೊನಾ ಅವಧಿಯಲ್ಲಿ ಅತ್ಯುತ್ತಮ ಕೆಲಸ ಮಾಡಿರುವ ಸೇವಾ ಭಾರತಿ, ದೀನ ದಲಿತರು, ವಿಶೇಷಚೇತನರು, ಕೊಳಚೆ ಪ್ರದೇಶದ ಬಡವರ ಬಳಿಗೆ ತೆರಳಿ ಅವರ ಸಮಸ್ಯೆಗಳಿಗೆ ಕಿವಿಯಾಗಿ ಸ್ವಾವಲಂಬಿಗಳನ್ನಾಗಿಸಲು ಇನ್ನು ಹೆಚ್ಚಿನ ರಚನಾತ್ಮಕ ಯೋಜನೆಗಳನ್ನು ಹಮ್ಮಿಕೊಳ್ಳಬೇಕು. ಇದಕ್ಕೆ ಎಲ್ಲ ರೀತಿಯ ಸಹಕಾರ, ಬೆಂಬಲ ನೀಡುವುದಾಗಿ ವಾಗ್ದಾನ ಮಾಡಿದರು.
ಉದ್ಯಮಿಗಳಾದ ಡಾ. ಸಿ.ಎಚ್. ವಿ.ಎಸ್.ವಿ. ಪ್ರಸಾದ, ಎಚ್.ಎನ್. ನಂದಕುಮಾರ, ಗೋವಿಂದ ಜೋಶಿ, ಮಹಾದೇವ ಕರಮರಿ, ಜಿತೇಂದ್ರ ಮಜೇಥಿಯಾ, ಕೆಎಸ್ಎಸ್ ಶಿಕ್ಷಣ ಸಂಸ್ಥೆ ಚೇರಮನ್ ರವಿ ದಂಡಿನ ಸೇರಿದಂತೆ ಹಲವಾರು ಗಣ್ಯರು ವಿಶೇಷ ಆಹ್ವಾನಿತರಾಗಿ ಪಾಲ್ಗೊಂಡಿದ್ದರು.
ರಜಮಹೋತ್ಸವ ಅಂಗವಾಗಿ ಸೇವಾ ಭಾರತಿಯು ತನ್ನ ಲಾಂಛನವನ್ನು ಹೊಸದಾಗಿ ರೂಪಿಸಿದ್ದು, ಬೊಗಸೆಯಲ್ಲಿ ಶಿಕ್ಷಣ, ಸ್ವಾವಲಂಬನೆ, ಸ್ವಾಸ್ಥ್ಯ, ಸಾಮಾಜಿಕ ಎಂಬ ಧ್ಯೇಯವಾಕ್ಯ ಒಳಗೊಂಡು ಬೆಳಕು ಚೆಲ್ಲುವ ಹೊಸ ಲಾಂಛನವನ್ನು ಬಿಡುಗಡೆಗೊಳಿಸಲಾಯಿತು.