ಕನ್ನಡಪ್ರಭ ವಾರ್ತೆ ಟೇಕಲ್
ಟೇಕಲ್ನ ತಿರುಮಲಹಟ್ಟಿ ಮಹಿಳಾ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಸಂಜೀವಿನಿ ಯೋಜನೆ ಹಂತ 4 ರ ಅಡಿಯಲ್ಲಿ 14 ಮಂದಿ ಹಾಲು ಉತ್ಪಾದಕರಿಗೆ ತಲಾ 47 ಸಾವಿರ ರೂಪಾಯಿಯಂತೆ ಹಸು ಕೊಂಡುಕೊಳ್ಳಲು ರು ಸಾಲ ಯೋಜನೆಯ ಚೆಕ್ ವಿತರಿಸಿ ಅವರು ಮಾತನಾಡಿದರು.
ಸಂಘಗಳ ಸಂಖ್ಯೆ ಹೆಚ್ಚಾಗಬೇಕುಮಾಲೂರು ತಾಲೂಕಿನಲ್ಲಿ 316 ಹಳ್ಳಿಗಳಿಗಳಿದ್ದರೂ ಹಾಲು ಉತ್ಪಾದಕರ ಕೇವಲ179 ಸಂಘಗಳಿವೆ. ಉಳಿದ ಹಳ್ಳಿಗಳಿಗೆ ಹಾಲು ಉತ್ಪಾದಕ ಸಹಕಾರ ಸಂಘಗಳನ್ನು ಸ್ಥಾಪಿಸಿದರೆ ಇನ್ನೂ ಯಥೇಚ್ಛವಾದ ಹಾಲು ಸಿಗುವಂತೆ ಆಗುತ್ತದೆ. ಇದೀಗ ಚಿಕ್ಕಬಳ್ಳಾಪುರ ಕೋಲಾರನಿಂದ ಬೇರೆಯಾಗಿದ್ದು ಕೋಲಾರ ಒಕ್ಕೂಟದಲ್ಲಿ 7 ಲಕ್ಷ ಹಾಲು ಉತ್ಪಾದನೆಯಾಗುತ್ತಿದೆ. ಅದನ್ನು 10 ಲಕ್ಷಕ್ಕೆ ಹೆಚ್ಚಿಸಬೇಕು ಎಂದರು.
ಮಹಿಳಾ ಸಂಘಗಳನ್ನು ಸ್ಥಾಪಿಸಿ
ಈ ಸಂದರ್ಭದಲ್ಲಿ ಮಹಿಳಾ ಸಂಘದ ಅಧ್ಯಕ್ಷರು, ನಿರ್ದೇಶಕರು ಗ್ರಾಮದ ಮುಖಂಡರಾದ ಟಿ.ವಿ.ತಿಮ್ಮೇಗೌಡ, ದೇವರಾಜ್, ಬಾಬು, ಮಾಜಿ ಗ್ರಾ.ಪಂ.ಅಧ್ಯಕ್ಷ ಸತೀಶ್ರಾಜಣ್ಣ, ಮಾಲೂರು ಶಿಬಿರ ಕಛೇರಿ ಉಪವ್ಯವಸ್ಥಾಪಕ ಡಾ|| ಲೋಹಿತ್, ವಿಸ್ತರಣಾಧಿಕಾರಿ ಹುಲ್ಲೂರಪ್ಪ, ಗಂಗಾಧರ್ ಮುಂತಾದವರು ಉಪಸ್ಥಿತರಿದ್ದರು.16 ಕ.ಟಿ.ಇ.ಕೆ ಚಿತ್ರ 4 : ಟೇಕಲ್ನ ಕೊಮ್ಮನಹಳ್ಳಿ ಶಾಸಕ ಕೆ.ವೈ.ನಂಜೇಗೌಡ ಅವರು ಫಲಾನುಭವಿಗಳಿಗೆ ರಾಸುಗಳ ಸಾಲ ಯೋಜನೆಯ ಚೆಕ್ ವಿತರಿಸಿದರು.