ಧರ್ಮ ಬೇರೆಯಾದರೂ ನಾವೆಲ್ಲ ಒಂದೇ ಎಂಬ ಭಾವನೆ ಇರಲಿ: ಶಿವಸುಜ್ಞಾನ ತೀರ್ಥ ಸ್ವಾಮೀಜಿ

KannadaprabhaNewsNetwork |  
Published : Apr 21, 2024, 02:17 AM IST
ಹರಿಹರಪುರದಲ್ಲಿ ಬ್ರಹ್ಮೋತ್ಸವದ ಪ್ರಯುಕ್ತ ಶನಿವಾರ ನಡೆದ ಧರ್ಮಸಭೆಯನ್ನು  ಅರೆಮಾದನಹಳ್ಳಿಯ ವಿಶ್ವಕರ್ಮ ಜಗದ್ಗುರು ಶ್ರೀ ಶಿವಸುಜ್ಞಾನ ತೀರ್ಥ ಮಹಾಸ್ವಾಮೀಜಿ ಉದ್ಘಾಟಿಸಿದರು. ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಮಹಾಸ್ವಾಮೀಜಿ, ಶ್ರೀ ಸರ್ಪ ಭೂಷಣ ಮಠದ ಪೀಠಾಧಿಪತಿ ಶ್ರೀ ನಿರಂಜನ ಪ್ರಣವ ಮಲ್ಲಿಕಾರ್ಜುನ ಮಹಾಸ್ವಾಮೀಜಿ ಇದ್ದರು. | Kannada Prabha

ಸಾರಾಂಶ

ಧರ್ಮ, ಪಂಥಗಳು ಬೇರೆ ಬೇರೆಯಾಗಿದ್ದರೂ ನಾವೆಲ್ಲಾ ಒಂದು ಎನ್ನುವ ಭಾವನೆ ಬರಬೇಕು ಎಂದು ಅರಕಲಗೂಡಿನ ಅರೆಮಾದನಹಳ್ಳಿಯ ವಿಶ್ವಕರ್ಮ ಜಗದ್ಗುರು ಪೀಠದ ಪೀಠಾಧಿಪತಿ ಶಿವಸುಜ್ಞಾನ ತೀರ್ಥ ಮಹಾಸ್ವಾಮೀಜಿ ನುಡಿದರು.

ಹರಿಹರಪುರದಲ್ಲಿ ಬ್ರಹ್ಮೋತ್ಸವದ ಪ್ರಯುಕ್ತ 2ನೇ ದಿನದ ಧರ್ಮಸಭೆ ಉದ್ಘಾಟನೆಕನ್ನಡಪ್ರಭ ವಾರ್ತೆ, ಹರಿಹರಪುರ (ಚಿಕ್ಕಮಗಳೂರು)

ಧರ್ಮ, ಪಂಥಗಳು ಬೇರೆ ಬೇರೆಯಾಗಿದ್ದರೂ ನಾವೆಲ್ಲಾ ಒಂದು ಎನ್ನುವ ಭಾವನೆ ಬರಬೇಕು ಎಂದು ಅರಕಲಗೂಡಿನ ಅರೆಮಾದನಹಳ್ಳಿಯ ವಿಶ್ವಕರ್ಮ ಜಗದ್ಗುರು ಪೀಠದ ಪೀಠಾಧಿಪತಿ ಶಿವಸುಜ್ಞಾನ ತೀರ್ಥ ಮಹಾಸ್ವಾಮೀಜಿ ನುಡಿದರು.

ಹರಿಹರಪುರದಲ್ಲಿ ಬ್ರಹ್ಮೋತ್ಸವದ ಪ್ರಯುಕ್ತ 2ನೇ ದಿನವಾದ ಶನಿವಾರ ನಡೆದ ಧರ್ಮಸಭೆ ಉದ್ಘಾಟಿಸಿ ಆಶೀರ್ವಚನ ನೀಡಿದ ಶ್ರೀಗಳು, ನಮ್ಮಲ್ಲಿ ಧರ್ಮ ಸಂಘರ್ಷಗಳು ನಡೆಯುತ್ತಿವೆ. ಅದನ್ನು ತಾಳ್ಮೆಯಿಂದ ನಿವಾರಣೆ ಮಾಡಬೇಕು. ಧರ್ಮ, ಪಂಥ ಆಚರಣೆ ಮಾಡಿ, ಆದರೆ, ನಾವೆಲ್ಲಾ ಒಂದು ಎಂಬ ಭಾವನೆ ಮರೆಯಬಾರದು ಎಂದರು.

ಮುಖ್ಯ ಅತಿಥಿಯಾಗಿದ್ದ ಬೆಂಗಳೂರಿನ ಶ್ರೀ ಸರ್ಪ ಭೂಷಣ ಮಠದ ಪೀಠಾಧಿಪತಿ ಶ್ರೀ ನಿರಂಜನ ಪ್ರಣವ ಮಲ್ಲಿಕಾರ್ಜುನ ಸ್ವಾಮೀಜಿ ಆಶೀರ್ವಚನ ನೀಡಿ, ಮನುಷ್ಯ ಜನ್ಮ ಎಲ್ಲಾ ಜನ್ಮಕ್ಕಿಂತಲೂ ಶ್ರೇಷ್ಠವೆಂದು ಪ್ರತಿಯೊಬ್ಬರು ಪ್ರತಿಪಾದಿಸಿದ್ದಾರೆ. ಸಾಧನೆಯಿಂದ ಮಾತ್ರ ಜನ್ಮ ಶ್ರೇಷ್ಠವಾಗಲು ಸಾಧ್ಯ. ಹಾಗಾಗಿ ಮನುಷ್ಯ ಏನು ಸಾಧನೆ ಮಾಡಬೇಕು. ಹೇಗೆ ಸಾಧನೆ ಮಾಡಬೇಕು. ಆ ಮಾರ್ಗವನ್ನು ಅವಲೋಕಿಸುತ್ತಾ ಯಾವುದು ಸತ್ಯ, ಯಾವುದು ಮಿತ್ಯ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.

ಪರಮಾತ್ಮ ಯಾವ ಸ್ವರೂಪದಲ್ಲಿದ್ದಾನೆ ಎಂದು ತಿಳಿಯುವ ವಿವೇಕ ನಮ್ಮಲ್ಲಿ ಇರಬೇಕು. ಮನುಷ್ಯ ಶ್ರೇಷ್ಠತೆ ಹೊಂದಲು ಆಂತರಿಕ ಸಾಧನೆ ಮಾಡಬೇಕು. ಸಂಸ್ಕಾರದಿಂದ ಜ್ಞಾನ ಬರಲು ಸಾಧ್ಯ. ಸಂಸ್ಕಾರದಿಂದ ಜೀವನ ಮುಕ್ತಿ ಆಗುತ್ತದೆ. ಜೀವನದಲ್ಲಿ ಶಿಸ್ತಿನ ಪಥ ಬಿಡಬಾರದು. ಭಾರತೀಯ ಧರ್ಮವನ್ನು ವಿಶ್ವಕ್ಕೆ ಸಾರಿ ಸಾರಿ ಹೇಳಬೇಕು ಎಂದರು.

ಶ್ರೀ ಸ್ವಯ ಪ್ರಕಾಶ ಸಚ್ಚಿದಾನಂದ ಸ್ವಾಮೀಜಿ ಮಾತನಾಡಿ, ನಾವು ಮೂವರು ಯತಿಗಳ ದೇಹ ಮಾತ್ರ ಬೇರೆಯಾದರೂ ಆತ್ಮದಲ್ಲಿ ನಾವೆಲ್ಲರೂ ಒಬ್ಬರೇ ಆಗಿದ್ದೇವೆ. ನಮ್ಮೆಲ್ಲರ ಚಿಂತನೆ ಒಂದೇ . ಜಾತಿ ಭೇದ ಅಳಿಸಿ ಎಲ್ಲರನ್ನೂ ಒಂದಾಗಿ ಸಮಾನವಾಗಿ ಕಾಣುತ್ತಾ, ಪರಸ್ಪರ ಪ್ರೀತಿ, ವಾತ್ಸಲ್ಯ, ಸ್ನೇಹ, ಸೌಹಾರ್ದ ದಿಂದ ಬಾಳುವಂತಹ ಸದೃಢ ಸನಾತನ ಹಿಂದೂ ಸಮಾಜವನ್ನು ಕಟ್ಟುವುದು ನಮ್ಮೆಲ್ಲರ ಧ್ಯೇಯ ಎಂದು ಘೋಷಿಸಿದರು. ಜಗಜ್ಯೋತಿ ಬಸವಣ್ಣ, ವಿಶ್ವಕರ್ಮರು, ಆದಿ ಶಂಕರಾಚಾರ್ಯ ಭಗವತ್ಪಾದರು ಎಲ್ಲರೂ ಸಮಾನರು ಎಂಬ ಅಂಶದ ಬಗ್ಗೆ ಸಮಾಜದಲ್ಲಿ ಅರಿವು ಮೂಡಿಸಿದ್ದರು. ನಮ್ಮ ಅಭಿಪ್ರಾಯವೂ ಸಮಾನತೆ ಸಮಾಜದ ನಿರ್ಮಾಣವೇ ಆಗಿದೆ ಎಂದು ಹೇಳಿದರು.

ಬೆಳಿಗ್ಗೆ ಶ್ರೀಮಠದಲ್ಲಿ ಮಾತೆಯರಿಂದ ಕುಂಕುಮಾರ್ಚನೆ ನಡೆಯಿತು. ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪತ್ರಕರ್ತ ಶಾಮ್ ಸುದರ್ಶನ್, ತೆಲುಗು ಚಿತ್ರರಂಗದ ನಿರ್ಮಾಪಕ ಕೊರ್ರಾ ಪಾಟಿ ಸಾಯಿರವರು ಪಾಲ್ಗೊಂಡಿದ್ದರು. ಸಾಹಿತಿ ಕಲ್ಕಟ್ಟೆ ನಾಗರಾಜ್, ಕೃಷಿಕ ಕಳಸಾದ ಬಿ.ಕೆ. ಮಂಜಪ್ಪಯ್ಯ, ಹರಿಹರಪುರ ಮಠದ ಆಸ್ಥಾನ ವಿಶ್ವಕರ್ಮ ನಾಗರಾಜ್ ಆಚಾರ್ ರನ್ನು ಸನ್ಮಾನಿಸಲಾಯಿತು. ಶ್ರೀಮಠದ ಆಡಳಿತಾಧಿಕಾರಿ ಡಾ. ಬಿ.ಎಸ್. ರವಿಶಂಕರ್‌ ಮಾತನಾಡಿದರು.

20 ಕೆಸಿಕೆಎಂ 6ಹರಿಹರಪುರದಲ್ಲಿ ಬ್ರಹ್ಮೋತ್ಸವದ ಪ್ರಯುಕ್ತ ಶನಿವಾರ ನಡೆದ ಧರ್ಮಸಭೆಯನ್ನು ಅರೆಮಾದನಹಳ್ಳಿಯ ವಿಶ್ವಕರ್ಮ ಜಗದ್ಗುರು ಶ್ರೀ ಶಿವಸುಜ್ಞಾನ ತೀರ್ಥ ಮಹಾಸ್ವಾಮೀಜಿ ಉದ್ಘಾಟಿಸಿದರು. ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಮಹಾಸ್ವಾಮೀಜಿ, ಶ್ರೀ ಸರ್ಪ ಭೂಷಣ ಮಠದ ಪೀಠಾಧಿಪತಿ ಶ್ರೀ ನಿರಂಜನ ಪ್ರಣವ ಮಲ್ಲಿಕಾರ್ಜುನ ಮಹಾಸ್ವಾಮೀಜಿ ಇದ್ದರು.

PREV

Recommended Stories

79 ವರ್ಷಗಳ ನಂತ್ರ ಅಥಣಿಗೆ ಸರ್ಕಾರಿ ಪ್ರೌಢಶಾಲೆ!
ಪ್ರಜಾಪ್ರಭುತ್ವ ಉಳಿವಿಗೆ ಹೋರಾಟ ಅನಿವಾರ್ಯ