ಇಂದಿನ ಮೊಬೈಲ್ ಯುಗದಲ್ಲಿಯೂ ಜಾನಪದ ಕಲೆಗೆ ಪ್ರಾಮುಖ್ಯವಿದೆ-ಕಸವಾಳ

KannadaprabhaNewsNetwork |  
Published : Dec 02, 2025, 02:15 AM IST
ಫೋಟೊ ಶೀರ್ಷಿಕೆ: 1ಆರ್‌ಎನ್‌ಆರ್5ರಾಣಿಬೆನ್ನೂರಿನ ಮಾರುತಿ ನಗರದ ಶ್ರೀ ಮರುಳ  ಸಿದ್ದೇಶ್ವರ ದೇವಸ್ಥಾನ ಸಭಾ ಭವನದಲ್ಲಿ 70ನೇ ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ಏರ್ಪಡಸಿದ್ದ ಜಾನಪದ ಸಂಭ್ರಮ ಕಾರ್ಯಕ್ರಮವನ್ನು ನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಚೋಳಪ್ಪ ಕಸವಾಳ ಉದ್ಘಾಟಿಸಿದರು.  | Kannada Prabha

ಸಾರಾಂಶ

ಪೌರಾಣಿಕ ಯುಗದಿಂದ ಇಂದಿನ ಮೊಬೈಲ್ ಯುಗದವರೆಗೂ ಜಾನಪದ ಕಲೆಗೆ ಪ್ರಾಮುಖ್ಯವಿದೆ ಎಂದು ನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಚೋಳಪ್ಪ ಕಸವಾಳ ಹೇಳಿದರು.

ರಾಣಿಬೆನ್ನೂರು: ಪೌರಾಣಿಕ ಯುಗದಿಂದ ಇಂದಿನ ಮೊಬೈಲ್ ಯುಗದವರೆಗೂ ಜಾನಪದ ಕಲೆಗೆ ಪ್ರಾಮುಖ್ಯವಿದೆ ಎಂದು ನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಚೋಳಪ್ಪ ಕಸವಾಳ ಹೇಳಿದರು.

ಇಲ್ಲಿನ ಮಾರುತಿ ನಗರದ ಶ್ರೀ ಮರುಳ ಸಿದ್ದೇಶ್ವರ ದೇವಸ್ಥಾನ ಸಭಾ ಭವನದಲ್ಲಿ ಯಕಲಾಸಪುರದ ಜನನಿ ಜಾನಪದ ಕಲಾ ವೇದಿಕೆ, ಸ್ಥಳೀಯ ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆ, ಎನ್.ಎಸ್. ಸ್ನೇಹಜ್ಯೋತಿ ನಗರ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ, ಯಲ್ಲಾಪುರದ ಶ್ರೀ ಹಿರೇಮಠ ಸೇವಾ ಟ್ರಸ್ಟ್ ಸಂಯುಕ್ತಾಶ್ರಯದಲ್ಲಿ 70ನೇ ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ಏರ್ಪಡಿಸಿದ್ದ ಜಾನಪದ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತಾನಾಡಿದರು.

ಹಿಂದಿನ ಕಾಲದಲ್ಲಿ ಹೊಲ ಗದ್ದೆಯಲ್ಲಿ, ಕೃಷಿ ಮಾಡುವಾಗ, ಮದುವೆ, ಜಾತ್ರೆ, ಮನೆಯಲ್ಲಿ ನಡೆಯುವ ಶುಭ ಸಮಾರಂಭದಲ್ಲಿ ಜಾನಪದ ಹಾಡು ಹೇಳಿಕೊಂಡು ಕೆಲಸ ಮಾಡುತ್ತಿದ್ದರು. ಇಂದಿನ ಕಾಲಘಟ್ಟದಲ್ಲಿ ಅವುಗಳು ಮರೆಯಾಗುತ್ತಿರುವ ಹಿನ್ನೆಲೆಯಲ್ಲಿ ಜಾನಪದ ಮೂಲ ಸೊಗಡುಗಳನ್ನು ಪ್ರತಿಬಿಂಬಿಸುವ ಕಲೆಗಳಿಗೆ ಪ್ರೋತ್ಸಾಹ ಕೊಡಬೇಕು ಎಂದರು.

ಯಕಲಾಸಪುರದ ಜನನಿ ಜಾನಪದ ಕಲಾ ವೇದಿಕೆ ಮುಖ್ಯಸ್ಥ, ಜಾನಪದ ಕಲಾವಿದ ಪರಶುರಾಮ ಬಣಕಾರ ಮಾತನಾಡಿದರು. ತಾಲೂಕು ಕಸಾಪ ಅಧ್ಯಕ್ಷ ಪ್ರಭಾಕರ ಶಿಗ್ಲಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಬಿ.ಪಿ. ಶಿಡೇನೂರ, ಶಿವಕುಮಾರ ಜಾಧವ್, ರಾಜು ಸೂರ್ವೆ, ಉದಯರಾಜ್ ಕೊಳಜಿ, ಮಣಿಕಂಠ ಬಣಕಾರ, ಗಂಗಾ ಮೊಟೇಬೆನ್ನೂರು, ಪ್ರಕಾಶ ಗಚ್ಚಿನಮಠ, ಈರಣ್ಣ ಅಟವಾಳಗಿ, ಕುಮಾರ ಧಾರವಾಡ, ಬಸವರಾಜ ಕೋಪರ್ಡೆ, ಸಿ.ಸಿ. ಪಾಟೀಲ, ಶಾರದ ಕಸವಾಳ, ಕೊಟ್ರೇಶಪ್ಪ ಎಮ್ಮಿ, ಚಂದ್ರಪ್ಪ ಬಣಕಾರ, ಮಲ್ಲಿಕಾರ್ಜುನ ಸಾವಕ್ಕಳವರ ಮತ್ತಿತರರಿದ್ದರು. ನಂತರ ಜನನಿ ಜಾನಪದ ಕಲಾ ವೇದಿಕೆ ಕಲಾವಿದರು ವೈವಿಧ್ಯಮಯ ಜಾನಪದ ಸಂಗೀತ ಪ್ರಸ್ತುತ ಪಡಿಸಿದರು.

ಹಿಂದಿನ ಕಾಲದಲ್ಲಿ ಹೊಲ ಗದ್ದೆಯಲ್ಲಿ, ಕೃಷಿ ಮಾಡುವಾಗ, ಮದುವೆ, ಜಾತ್ರೆ, ಮನೆಯಲ್ಲಿ ನಡೆಯುವ ಶುಭ ಸಮಾರಂಭದಲ್ಲಿ ಜಾನಪದ ಹಾಡು ಹೇಳಿಕೊಂಡು ಕೆಲಸ ಮಾಡುತ್ತಿದ್ದರು. ಇಂದಿನ ಕಾಲಘಟ್ಟದಲ್ಲಿ ಅವುಗಳು ಮರೆಯಾಗುತ್ತಿರುವ ಹಿನ್ನೆಲೆಯಲ್ಲಿ ಜಾನಪದ ಮೂಲ ಸೊಗಡುಗಳನ್ನು ಪ್ರತಿಬಿಂಬಿಸುವ ಕಲೆಗಳಿಗೆ ಪ್ರೋತ್ಸಾಹ ಕೊಡಬೇಕು ಎಂದು ನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಚೋಳಪ್ಪ ಕಸವಾಳ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಾರತೀಯರ ಕರೆತರಲು ವಿಶೇಷ ವಿಮಾನ ಮಾಡಿ: ಮೋದಿಗೆ ಸಿಎಂ ಸಿದ್ದು ಪತ್ರ
100ಕ್ಕೂ ಕನ್ನಡಿಗರ ಹೊತ್ತು ಬಂತು ಮೊದಲ ವಿಮಾನ