ಶಶಿಕಾಂತ ಮೆಂಡೆಗಾರ
ಈ ಬಾರಿಯ ತೀವ್ರ ಬರಗಾಲಕ್ಕೆ ಜಲಮೂಲಗಳೆಲ್ಲ ಬರಿದಾಗಿ ಜನ-ಜಾನುವಾರು, ಪ್ರಾಣಿ-ಪಕ್ಷಿಗಳು ಪರಿತಪಿಸುತ್ತಿವೆ. ಇದರೊಟ್ಟಿಗೆ ಬೇಸಿಗೆಯಲ್ಲಿ ಈಜುಪ್ರಿಯರಿಗೆ ಹಿತಾನುಭವು ನೀಡುತ್ತಿದ್ದ ನಗರದ ಬಹುತೇಕ ಈಜುಗೊಳದಲ್ಲಿ ನೀರಿಲ್ಲದೇ ಭಣಗುಡುತ್ತಿದೆ. ಇದರಲ್ಲಿ ನಗರದ ಕನಕದಾಸ ಬಡಾವಣೆಯಲ್ಲಿರುವ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ನಿರ್ಮಿಸಲಾದ ಒಳಾಂಗಣ ಈಜುಗೊಳ ಕೂಡ ಇದೆ ಪರಿಸ್ಥಿತಿಯಲ್ಲಿದೆ.
ಕಳೆದ ಮೂರು ವರ್ಷಗಳ ಹಿಂದೆ ಆರಂಭವಾಗಿರುವ ಈಜುಗೊಳಕ್ಕೆ ಪುರುಷರು, ಸ್ತ್ರೀಯರು, ಮಕ್ಕಳು ಸೇರಿದಂತೆ ಪ್ರತಿದಿನ 130 ರಿಂದ 150 ಜನ ಸ್ವಿಮ್ಮಿಂಗ್ ಮಾಡಲು ಬರುತ್ತಿದ್ದಾರೆ. ಆದರೆ ಇದೀಗ ಬೇಸಿಗೆ ಸಮಯ ಇರುವುದರಿಂದ ಈಜಾಡಲು ಬರುವವರ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ. ಇಂತಹ ಸಮಯದಲ್ಲಿ ಈಜುಗೊಳಕ್ಕೆ ಜಲಮೂಲದ ಕೊರತೆ ಎದುರಾಗಿದೆ. ಕಳೆದ ಎಂಟತ್ತು ದಿನಗಳಿಂದ ಇಲ್ಲಿ ಸರಿಯಾದ ಪ್ರಮಾಣದಲ್ಲಿ ನೀರಿಲ್ಲ. ಈಜುಗೊಳದಲ್ಲಿ ಇರಬೇಕಿದ್ದ ನಿಗದಿತ ಎತ್ತರ ಮಟ್ಟದಲ್ಲಿ (ಕಪ್ಪು ಬಣ್ಣದ ಟಿ ಆಕಾರದ ಗುರುತಿನ ಮೇಲೆ ನೀರು ಇರಬೇಕು) ನೀರು ಇಲ್ಲದಿರುವುದರಿಂದ ಇದ್ದಷ್ಟು ನೀರಿನಲ್ಲಿಯೇ ಈಜಾಡುವ ಸ್ಥಿತಿ ಇಲ್ಲಿನ ಜನರಿಗೆ ಬಂದಿದೆ.ನಿಯಮಗಳ ಪಾಲನೆಗೂ ನೀರಿಲ್ಲ:
ಎಲ್ಲವೂ ಖಾಲಿ ಖಾಲಿ:
ಸಾಂಕ್ರಾಮಿಕ ಕಾಯಿಲೆಗೆ ದಾರಿ:
---
ಈಜುಗೊಳದಲ್ಲಿ ನೀರಿನ ಪ್ರಮಾಣ ಕಡಿಮೆ ಇರುವುದರಿಂದ ಸಾರ್ವಜನಿಕರಿಗೆ ಈಜಾಡಲು ತೊಂದರೆ ಆಗುತ್ತಿದೆ. ನೀರನ್ನು ಫಿಲ್ಟರ್ ಮಾಡಿ ನೀರು ಸಂಗ್ರಹಿಸಲು 2 ಅಥವಾ 3ದಿನಕ್ಕೊಮ್ಮೆ 1 ಲಕ್ಷ ಲೀಟರ್ ನೀರು ಅವಶ್ಯವಿದ್ದು, ನೀರು ಸರಬರಾಜು ಮಾಡುವಂತೆ ಕರ್ನಾಟಕ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಗೆ ಮಾರ್ಚ್ 11ರಂದು ಪತ್ರ ಬರೆಯಲಾಗಿದೆ.
ಕೋಟ್....
-ಡಾ.ವಿರೇಂದ್ರ ಬಿರಾದಾರ, ಈಜು ಪ್ರಿಯರು
---ಕಳೆದ 10ದಿನಗಳಿಂದ ಈಜುಗೊಳದಲ್ಲಿ ಸಮಸ್ಯೆ ಆಗಿದೆ, ಈಗಾಗಲೇ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಗೆ ಪತ್ರ ಬರೆಯಲಾಗಿದ್ದು, ತಕ್ಕಮಟ್ಟಿಗೆ ನೀರು ಒದಗಿಸುತ್ತಿದ್ದಾರೆ. ಹೆಚ್ಚಿನ ಪ್ರಮಾಣದಲ್ಲಿ ನೀರು ಒದಗಿಸುವಂತೆ ಮನವಿ ಮಾಡಲಾಗಿದೆ, ಜೊತೆಗೆ ಒಂದು ಸ್ವಂತ ಬೋರ್ವೆಲ್ ಕೊರೆಸುವ ಯೋಜನೆಯೂ ನಡೆದಿದೆ. ಏನಾದರೂ ವ್ಯವಸ್ಥೆ ಮಾಡಿ ಆದಷ್ಟು ಶೀಘ್ರದಲ್ಲಿ ಈಜುಗೊಳದ ನೀರಿನ ಸಮಸ್ಯೆ ಬಗೆಹರಿಸಲಾಗುವುದು.
-ಎಸ್.ಜಿ.ಲೋಣಿ, ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ.---
ಇಲಾಖೆಯವರ ಮನವಿ ಮೇರೆಗೆ ಈ ಹಿಂದೆಯೂ ಒಮ್ಮೆ ಈಜುಗೊಳಕ್ಕೆ ನೀರು ಒದಗಿಸಲಾಗಿದೆ. ಅಲ್ಲದೇ ಎರಡು ನಲ್ಲಿಗಳ ಸಂಪರ್ಕ ಕಲ್ಪಿಸಲಾಗಿದ್ದು, ಏರಿಯಾಗೆ ನೀರು ಬಿಟ್ಟ ಸಮಯದಲ್ಲಿ ಸ್ವಿಮ್ಮಿಂಗ್ ಫೂಲ್ಗೂ ನೀರು ಬರುತ್ತದೆ. ಹೆಚ್ಚಿನ ನೀರು ಬೇಕಾದಲ್ಲಿ ಬೇಸಿಗೆ ಇರುವುದರಿಂದ ಬಡಾವಣೆಗಳಲ್ಲಿ ಮೊದಲು ಕುಡಿಯುವ ನೀರಿಗೆ ಆಧ್ಯತೆ ಕೊಟ್ಟ ಬಳಿಕ, ನೀರಿನ ಪೂರೈಕೆ ನೋಡಿಕೊಂಡು ಒದಗಿಸಲಾಗುವುದು.-ಮಹೇಶ ಹೊನ್ನಾಕಟ್ಟಿ, ಎಇಇ, ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ.