ದಾಬಸ್ಪೇಟೆ: ದೇಶದ ಭದ್ರತೆಯ ವಿಚಾರದಲ್ಲಿ ಪ್ರತಿಯೊಬ್ಬರ ಕರ್ತವ್ಯಗಳನ್ನು ನೆನಪಿಸಿಕೊಂಡು ಪಾಲಿಸಬೇಕು ಎಂದು ಕನ್ಯಾಕುಮಾರಿ ಎನ್ಐಸಿಹೆಚ್ಇ ಉಪಕುಲಪತಿ ವಿಜ್ಞಾನಿ ಡಾ.ಟೆಸ್ಸಿ ಥಾಮಸ್ ತಿಳಿಸಿದರು.
ಹರ್ಷ ಸಮೂಹ ಸಂಸ್ಥೆ ಸಹಕಾರ್ಯದರ್ಶಿ ಯಶಸ್ ಶಿವಕುಮಾರ್ ಮಾತನಾಡಿ, ವಿಶ್ವಮಟ್ಟದಲ್ಲಿ ಸಾಧನೆ ಮಾಡಿರುವ ಸಾಧಕರನ್ನು ಕರೆಸಿ ವಿದ್ಯಾರ್ಥಿಗಳಿಗೆ ಅವರ ಅನುಭವ ಹಾಗೂ ಮಾರ್ಗದರ್ಶನ ಮಾಡುವ ಸದುದ್ದೇಶದಿಂದ ವಿಶ್ವದರ್ಶಿ ಎಂಬ ಕಾರ್ಯಕ್ರಮವನ್ನು ಹರ್ಷ ಸಮೂಹ ಸಂಸ್ಥೆಯಿಂದ ಆರಂಭಿಸಿದ್ದು ಏರೋನಾಟಿಕಲ್ ಸಿಸ್ಟಮ್ಸ್ ಮಾಜಿ ಮಹಾನಿರ್ದೇಶಕರಾಗಿ ಹಾಗೂ ಪ್ರಸ್ತುತ ಕನ್ಯಾಕುಮಾರಿ ಎನ್ಐಸಿಹೆಚ್ಇನ ಉಪಕುಲಪತಿಯಾಗಿರುವ ಡಾ.ಟೆಸ್ಸಿ ಥಾಮಸ್ರವರು ಲೋಕಾರ್ಪಣೆಗೊಳಿಸಿದ್ದಾರೆ. ಇದರಿಂದ ವಿದ್ಯಾರ್ಥಿಗಳ ಭವಿಷ್ಯಕ್ಕೆ ಬಹಳಷ್ಟು ಅನುಕೂಲವಾಗಲಿದೆ ಎಂದರು.
ವಿದ್ಯಾರ್ಥಿಗಳ ಜತೆ ಸಂವಾದ: ಹರ್ಷ ಸಮೂಹ ಸಂಸ್ಥೆ ವಿದ್ಯಾರ್ಥಿಗಳು, ತುಮಕೂರಿನ ಸರ್ವೋದಯ ಕಾಲೇಜು, ಮಹೇಶ್ಪಿಯು ಕಾಲೇಜು, ಕದಂಬ ಕಾಲೇಜು ವಿದ್ಯಾರ್ಥಿಗಳ ಜತೆ ಭಾರತದ ರಕ್ಷಣಾ ವಲಯ ಹಾಗೂ ವಿವಿಧ ಭದ್ರತಾ ವಿಚಾರಗಳ ಬಗ್ಗೆ ಸಂವಾದ ನಡೆಸಿದ ಡಾ.ಟೆಸ್ಸಿ ಥಾಮಸ್ರವರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದ ಜತೆ ಅನೇಕ ಸಲಹೆ ಸೂಚನೆಗಳನ್ನು ನೀಡಿದರು. ಭಾರತದ ರಕ್ಷಣಾ ವಲಯದ ಶ್ರೇಷ್ಟತೆಯ ಬಗ್ಗೆಯೂ ಸಹ ಮಾಹಿತಿ ನೀಡಿದರು.ಈ ಸಂದರ್ಭದಲ್ಲಿ ಹರ್ಷ ಸಂಸ್ಥೆಯ ಅಧ್ಯಕ್ಷ ಶಿವಕುಮಾರ್, ಉಪಾಧ್ಯಕ್ಷೆ ಗಿರಿಜಾಶಿವಕುಮಾರ್, ಕಾಯದರ್ಶಿ ಹರ್ಷ ಶಿವಕುಮಾರ್, ಆರೋಗ್ಯ ಸಂಸ್ಥೆ ನಿರ್ದೇಶಕ ವಸಂತ್ಕುಮಾರ್, ಹರ್ಷ ಸಂಸ್ಥೆ ಪ್ರಾಂಶುಪಾಲರು ಸೇರಿದಂತೆ ವಿವಿಧ ಕಾಲೇಜಿನ ಶಿಕ್ಷಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.
ವಿದ್ಯಾರ್ಥಿಗಳಲ್ಲಿ ಆತ್ಮಸ್ಥೆರ್ಯ ಮೂಡಿಸಲು ಹಾಗೂ ಕ್ರಿಯಾಶೀಲತೆ ಹೆಚ್ಚಿಸಿಕೊಳ್ಳಲು ಹರ್ಷ ಸಂಸ್ಥೆ ವಿಶ್ವದರ್ಶಿ ಕಾರ್ಯಕ್ರಮ ಆರಂಭಿಸಿದೆ. ಕ್ಷಿಪಣಿ ತಂತ್ರಜ್ಞಾನದಲ್ಲಿ ಭಾರತದ ಹೆಮ್ಮೆಯ ಅಗ್ನಿ4, ಅಗ್ನಿ5 ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಭಾರತಕ್ಕೆ ಸಮರ್ಪಿಸಿದ ಮಿಸೈಲ್ ವುಮೆನ್, ಹಿರಿಯ ವಿಜ್ಞಾನಿ ಡಾ.ಟೆಸ್ಸಿ ಥಾಮಸ್ ಅವರು ವಿದ್ಯಾರ್ಥಿಗಳಿಗೆ ಸಲಹೆ, ಮಾರ್ಗದರ್ಶನ ನೀಡಿರುವುದು ಸಂತೋಷವಾಗಿದೆ.
ಪೋಟೋ 4 :