ಪ್ರದೀಪ್ ಈಶ್ವರ್ ವಿರುದ್ಧ ಜೆಡಿಎಸ್‌ ಶಾಸಕ ಬಿ.ಎನ್. ರವಿಕುಮಾರ್ ವಾಗ್ದಾಳಿ

KannadaprabhaNewsNetwork |  
Published : Jun 27, 2026, 01:45 AM IST
ಸಿಕೆಬಿ-2 ಸುದ್ದಿಗೋಷ್ಠಿಯಲ್ಲಿ ಶಾಸಕ ಬಿ.ಎನ್.ರವಿಕುಮಾರ್ ಮಾತನಾಡಿದರು | Kannada Prabha

ಸಾರಾಂಶ

ಶಾಸಕ ಪ್ರದೀಪ್ ಈಶ್ವರ್ ಅವರೇ ನೀವು ಶಾಸಕರಾಗಿದ್ದು ಕೇವಲ ಕಾಂಗ್ರೆಸ್ ಮತಗಳಿಂದ ಅಲ್ಲ. ಜೆ.ಡಿ.ಎಸ್ ಮತಗಳಿಂದ ಎಂಬುದನ್ನು ಮರೆಯಬೇಡಿ, ಶಾಸಕರಾಗುವ ಮೊದಲು ನಿಮ್ಮ ಆಸ್ತಿ ಎಷ್ಟಿತ್ತು. ಈಗ ಎಷ್ಟು ಇದೆ. ಕುಮಾರಣ್ಣ ಮತ್ತು ಅವರ ಕುಟುಂಬದ ವಿರುದ್ಧ ಮಾತನಾಡುವ ನೀವು 2028 ಕ್ಕೆ ನಿಮ್ಮ ಕ್ಷೇತ್ರದಲ್ಲಿ ಎನ್ ಡಿಎ ಅಭ್ಯರ್ಥಿ ವಿರುದ್ಧ ಗೆದ್ದರೆ ನಾನು ನಿಮ್ಮ ಮನೆ ಮುಂದೆ ವಾಚ್ ಮನ್ ಆಗಿ ದುಡಿತೀನಿ. ನೀವು ಸೋತರೆ ಕುಮಾರಣ್ಣ ಮನೆ ಮುಂದೆ ಸೆಕ್ಯೂರಿಟಿಯಾಗಿ ಕೆಲಸ ಮಾಡಬೇಕು ಎಂದು ಶಿಡ್ಲಘಟ್ಟ ಜೆಡಿಎಸ್ ಶಾಸಕ ಬಿ.ಎನ್. ರವಿಕುಮಾರ್ ಬಹಿರಂಗ ಸವಾಲು

ಕನ್ನಡಪ್ರಭ ವಾರ್ತೆ, ಚಿಕ್ಕಬಳ್ಳಾಪುರ

ಶಾಸಕ ಪ್ರದೀಪ್ ಈಶ್ವರ್ ಅವರೇ ನೀವು ಶಾಸಕರಾಗಿದ್ದು ಕೇವಲ ಕಾಂಗ್ರೆಸ್ ಮತಗಳಿಂದ ಅಲ್ಲ. ಜೆ.ಡಿ.ಎಸ್ ಮತಗಳಿಂದ ಎಂಬುದನ್ನು ಮರೆಯಬೇಡಿ, ಶಾಸಕರಾಗುವ ಮೊದಲು ನಿಮ್ಮ ಆಸ್ತಿ ಎಷ್ಟಿತ್ತು. ಈಗ ಎಷ್ಟು ಇದೆ. ಕುಮಾರಣ್ಣ ಮತ್ತು ಅವರ ಕುಟುಂಬದ ವಿರುದ್ಧ ಮಾತನಾಡುವ ನೀವು 2028 ಕ್ಕೆ ನಿಮ್ಮ ಕ್ಷೇತ್ರದಲ್ಲಿ ಎನ್ ಡಿಎ ಅಭ್ಯರ್ಥಿ ವಿರುದ್ಧ ಗೆದ್ದರೆ ನಾನು ನಿಮ್ಮ ಮನೆ ಮುಂದೆ ವಾಚ್ ಮನ್ ಆಗಿ ದುಡಿತೀನಿ. ನೀವು ಸೋತರೆ ಕುಮಾರಣ್ಣ ಮನೆ ಮುಂದೆ ಸೆಕ್ಯೂರಿಟಿಯಾಗಿ ಕೆಲಸ ಮಾಡಬೇಕು ಎಂದು ಶಿಡ್ಲಘಟ್ಟ ಜೆಡಿಎಸ್ ಶಾಸಕ ಬಿ.ಎನ್. ರವಿಕುಮಾರ್ ಬಹಿರಂಗ ಸವಾಲು ಹಾಕಿದ್ದಾರೆ.

ನಗರದ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ಇಲ್ಲ ಸಲ್ಲದ ಆರೋಪ ಮಾಡಿರುವ ಶಾಸಕ ಪ್ರದೀಪ್‌ ಈಶ್ವರ್‌ ಅವರನ್ನುಏಕವಚನದಲ್ಲೇ ಹಿಗ್ಗಾಮುಗ್ಗಾ ತರಾಟೆಗೆ ತಗೆದುಕೊಂಡರು.

ಕುಮಾರಣ್ಣ ನ್ಯಾಯಾಲಯ ನೀಡಿದ ನೋಟಿಸನ್ನಷ್ಟೆ ಜೆಡಿಎಸ್ ಪಕ್ಷದ ಪೇಜಿನಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆಯೇ ಹೊರತು ಅವರು ಎಲ್ಲಿಯೂ ಪ್ರದೀಪ್ ಈಶ್ವರ್ ಹೆಸರು ಉಲ್ಲೇಖ ಮಾಡಿಲ್ಲ. ಆದರೆ ಪ್ರದೀಪ್ ಈಶ್ವರ್ ರವರು ಕುಮಾರಸ್ವಾಮಿ, ದೇವೇಗೌಡರ ಕುಟುಂಬದ ವಿರುದ್ಧ ಮನಸ್ಸಿಗೆ ಬಂದಂತೆ ಮಾತನಾಡಿದ್ದಾರೆ ಎಂದು ಆರೋಪಿಸಿದರು.

ಆಸ್ತಿಪಾಸ್ತಿ, ವಾಚುಗಳ ಬಗ್ಗೆ ಮಾತನಾಡಿದ್ದಾರೆ. ಬದನೆಕಾಯಿ ಮಾರಿ ಸಂಪಾದನೆ ಮಾಡಿದ್ದೀರಾ ಎಂದು ಮಾತನಾಡಿದ್ದಾರೆ. ನಾನೊಬ್ಬ ಓಬಿಸಿ ಹುಡುಗ ಎಂದಿದ್ದಾರೆ. ನೀವು ಶಾಸಕರಾಗುವ ಮೊದಲು ಎಷ್ಟು ಆಸ್ತಿ ಇತ್ತು?. ಈಗ ಎಷ್ಟು ಆಸ್ತಿ ಮಾಡಿದ್ದೀರಿ? ಲೆಕ್ಕಕೊಡಿ, ಒಬ್ಬ ನೀಟ್ ವಿದ್ಯಾರ್ಥಿಗೆ ಬೇರೆ ಕಡೆ 1.5 ಲಕ್ಷ ರು. ತೆಗೆದು ಕೊಂಡರೆ ನೀವು ಮೂರು ಲಕ್ಷ ತಗೋತೀರಿ. ನೀವೊಬ್ಬ ಓಬಿಸಿ ನನ್ನ ಏಳಿಗೆ ಸಹಿಸೋದಿಲ್ಲ ಎಂದಿದ್ದೀರಿ. ನೀವೊಬ್ಬ ಬಲಜಿಗ, ನಾನು ಬಲಿಜಿಗ ಮುಖಂಡರಾದ ಸಿ.ವಿ. ವೆಂಕಟರಾಯಪ್ಪ, ಕೆ.ವಿ. ನವೀನ್ ಕಿರಣ್, ಸಂಸದ ಪಿ.ಸಿ. ಮೋಹನ್. ಎಂ ಎಸ್. ರಾಮಯ್ಯ ಮತ್ತು ಅವರ ಕುಟುಂಬ ಹಾಗೂ ಕಾಲಜ್ಞಾನಿ ಕೈವಾರ ತಾತಯ್ಯ ಸೇರಿದಂತೆ ವಂಶಸ್ಥರಲ್ಲಿ ಸಾಕಷ್ಟು ಮಂದಿಯನ್ನು ಕಂಡಿದ್ದೇನೆ ಹಾಗೂ ಅವರ ಬಗ್ಗೆ ಕೇಳಿದ್ದೇನೆ. ಅವರು ಯಾರೂ ಹೀಗೆ ಅಹಂಭಾವದಿಂದ ಮಾತಾಡಿಲ್ಲ. ನನಗೆ ನೀವು ಬಲಿಜಿಗನೇ ಅಲ್ಲವೋ ಎಂಬ ಬಗ್ಗೆ ಅನುಮಾನ ಇದೆ. ಇಷ್ಟೆಲ್ಲಾ ಮಾತಾಡೋಕೆ ಮತ್ತು ಶಾಸಕರಾಗೋಕೆ ನಿಮಗೆ ಅವಕಾಶ ಮಾಡಿಕೊಟ್ಟಿದ್ದೆ ಜೆ.ಡಿ.ಎಸ್ ಕಾರ್ಯಕರ್ತರು ಅನ್ನೋದು ಮರೀಬೇಡಿ. ನಿಮ್ಮ ಮುಖ ನೋಡಿ ಯಾರೂ ಓಟಾಕಿಲ್ಲ ಎಂದು ಏಕವಚನದಲ್ಲೇ ವಾಗ್ದಾಳಿ ನಡೆಸಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಜೆಡಿಎಸ್ ಕಾರ್ಯಾಧ್ಯಕ್ಷ ಕೆ.ಆರ್. ರೆಡ್ಡಿ, ಚಿಮುಲ್ ನಿರ್ದೇಶಕ ಬಂಕ್ ಮುನಿಯಪ್ಪ, ಜಿಪಂ ಮಾಜಿ ಸದಸ್ಯ ತಾದೂರು ರಘು, ಪುರಸಭಾ ಮಾಜಿ ಸದಸ್ಯ ಸದಾಶಿವ, ಮುಖಂಡರಾದ ಮೇಲೂರು ಮಂಜುನಾಥ್, ವಿಜಯ್ ಕುಮಾರ್, ಶಾಂತಮೂರ್ತಿ, ನರಸಿಂಹಮೂರ್ತಿ ಮತ್ತಿತರರು ಇದ್ದರು.

ಸಿಕೆಬಿ-2 ಸುದ್ದಿಗೋಷ್ಠಿಯಲ್ಲಿ ಶಾಸಕ ಬಿ.ಎನ್. ರವಿಕುಮಾರ್ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮುತ್ತತ್ತಿಯಲ್ಲಿ ಆಯುರ್ವೇದ ವೈದಾಧಿಕಾರಿ ಆತ್ಮಹತ್ಯೆ
ವಿಧಾನಸೌಧ ವ್ಯಾಪಾರಿ ಕೇಂದ್ರವಾಗಿ ಪರಿವರ್ತನೆ: ಹೆಚ್.ವಿಶ್ವನಾಥ್