ಪ್ರತಿಯೊಬ್ಬರೂ ಬಸವತತ್ವ ಅಳವಡಿಸಿಕೊಳ್ಳಿ: ತೋಂಟದ ಸಿದ್ಧರಾಮ ಶ್ರೀ

KannadaprabhaNewsNetwork |  
Published : Jan 20, 2026, 02:45 AM IST
ಪೋಟೊ ಕ್ಯಾಪ್ಸನ್:ಡಂಬಳ ತೋಂಟದಾರ್ಯ ಮಠದ 286ನೇ ಜಾತ್ರಾ ಮಹೋತ್ಸವದ ಅಂಗವಾಗಿ ತೋಂಟದ ಡಾ.ಸಿದ್ದರಾಮ ಮಹಾಸ್ವಾಮಿಗಳು ರಥಕ್ಕೆ ಪೂಜೆ ಸಲ್ಲಿಸುವ ಮೂಲಕ ವಿಧ್ಯುಕ್ತವಾಗಿ ಚಾಲನೆ ನೀಡಿದರು. | Kannada Prabha

ಸಾರಾಂಶ

ಬಸವಣ್ಣನವರ ಸಮಾನತೆ, ಕಾಯಕ ಮತ್ತು ದಾಸೋಹ ತತ್ವಗಳು ಇಂದಿನ ಸಮಾಜಕ್ಕೆ ಅತ್ಯಂತ ಮೌಲ್ಯಯುತವಾದ ವಿಚಾರಗಳು. ಈ ತತ್ವಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವುದೇ ನಿಜವಾದ ಸಮಾಜ ಸುಧಾರಣೆಯಾಗಿದೆ.

ಡಂಬಳ: ಬಸವಣ್ಣನವರ ವಿಚಾರಗಳಡಿ ಜಾತಿ ಮತ ಪಂಥ ಹೊಡೆದೋಡಿಸುವ ಜಾತ್ಯತೀತವಾಗಿ ಜರುಗುವ ಸಾಮಾಜಿಕ ಪರಿವರ್ತನೆಯ ತೋಂಟದಾರ್ಯ ಮಠದ ಜಾತ್ರೆ ಆಚರಿಸಿಕೊಂಡು ಬರಲಾಗುತ್ತಿದೆ ಎಂದು ಡಾ. ತೋಂಟದಾರ್ಯ ಸಿದ್ಧರಾಮ ಸ್ವಾಮಿಗಳು ತಿಳಿಸಿದರು.

ಗ್ರಾಮದ ಜಗದ್ಗುರು ತೋಂಟದಾರ್ಯ ಮಠದ 286ನೇ ಜಾತ್ರಾ ಮಹೋತ್ಸವ ಪ್ರಯುಕ್ತ ಫೆ. 3ರಂದು ಮಹಾರಥೋತ್ಸವ ಮತ್ತು ಫೆ. 4ರಂದು ಲಘು ರಥೋತ್ಸವ ಜರುಗಲಿರುವ ಹಿನ್ನೆಲೆ ಸೋಮವಾರ ಬೆಳಗ್ಗೆ ರಥಕ್ಕೆ ಪೂಜೆ ಸಲ್ಲಿಸುವ ಮೂಲಕ ವಿಧ್ಯುಕ್ತವಾಗಿ ಚಾಲನೆ ನೀಡಿ ಮಾತನಾಡಿದರು.

ಬಸವಣ್ಣನವರ ಸಮಾನತೆ, ಕಾಯಕ ಮತ್ತು ದಾಸೋಹ ತತ್ವಗಳು ಇಂದಿನ ಸಮಾಜಕ್ಕೆ ಅತ್ಯಂತ ಮೌಲ್ಯಯುತವಾದ ವಿಚಾರಗಳು. ಈ ತತ್ವಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವುದೇ ನಿಜವಾದ ಸಮಾಜ ಸುಧಾರಣೆಯಾಗಿದೆ. ರಥೋತ್ಸವವು ಕೇವಲ ಧಾರ್ಮಿಕ ಆಚರಣೆಯಲ್ಲ, ಅದು ಮಾನವೀಯ ಮೌಲ್ಯಗಳನ್ನು ಬೆಳೆಸುವ ಸಾಮಾಜಿಕ ಚಳವಳಿಯಾಗಿದೆ ಎಂದರು.

ಎಲ್ಲ ವರ್ಗ, ಜಾತಿ, ಸಮುದಾಯದ ಜನರು ಒಂದೇ ರಥವನ್ನು ಎಳೆದು ಭಾಗವಹಿಸುವ ಮೂಲಕ ಸಮಾನತೆ ಮತ್ತು ಸಹಬಾಳ್ವೆಯ ಸಂದೇಶವನ್ನು ಶಾಂತಿ, ಸೌಹಾರ್ದತೆ ಹಾಗೂ ಸಹೋದರತ್ವವನ್ನು ಗಟ್ಟಿಗೊಳಿಸುವ ಜಾತ್ರೆಯಲ್ಲಿ ಪ್ರತಿಯೊಬ್ಬರೂ ಪಾಲ್ಗೊಳ್ಳುವುದರ ಮೂಲಕ ಯುವಜನತೆ ಬಸವಣ್ಣನವರ ವಿಚಾರಧಾರೆಗಳನ್ನು ಅರಿತು ಅನುಸರಿಸುವ ಮೂಲಕ ಸಾಮಾಜಿಕ ಪರಿವರ್ತನೆಯ ದಿಕ್ಕಿನಲ್ಲಿ ಮುನ್ನಡೆಯಬೇಕು ಎಂದರು.

ಈ ಸಂದರ್ಭದಲ್ಲಿ ಜಿ.ವಿ. ಹಿರೇಮಠ, ರೊಟ್ಟಿ ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷ ಯಲ್ಲಪ್ಪ ದಂಡಿನ, ಉಪಾಧ್ಯಕ್ಷ ಯಂಕಣ್ಣ ಗಡಗಿ, ಕಾರ್ಯದರ್ಶಿ ಬಡ್ನೆಸಾಬ ಅತ್ತಾರ, ಖಜಾಂಚಿ ತಿಮ್ಮಣ್ಣ ವಡ್ಡರ, ಮುದಕಪ್ಪ ಮೇವುಂಡಿ, ಭೀಮಪ್ಪ ಗದಗಿನ, ಎ.ಪಿ. ಮಾನೆ,‌ ಗೌಸಿದ್ಧಪ್ಪ ಬಿಸನಳ್ಳಿ, ಮಲ್ಲಿಕಾರ್ಜುನ ಪ್ಯಾಟಿ, ಮರಿತೇಮಪ್ಪ ಆದಮ್ಮನವರ, ವಿರುಪಾಕ್ಷಪ್ಪ ಲಕ್ಕುಂಡಿ, ಮುತ್ತಣ್ಣ ಕೊಂತಿಕಲ್ಲ, ಮಹೇಶ ಗಡಗಿ, ಮರಿಯಪ್ಪ ಸಿದ್ಧಣ್ಣವರ, ದುರಗಪ್ಪ ಹರಿಜನ, ಸಿದ್ದಣ್ಣ ನಂಜಪ್ಪನವರ, ಗೌಸಿದ್ದಪ್ಪ ಹಳ್ಳಾಕಾರ, ಭೀಮಪ್ಪ ಪೂಜಾರ, ಯಂಕಣ್ಣ ಯರಾಶಿ, ಜಾತ್ರಾ ಸಮಿತಿ ಸದಸ್ಯರು, ಗ್ರಾಮದ ಹಿರಿಯರು, ಯುವಕರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎಸ್‌ಐಆರ್‌ನಿಂದ ಅರ್ಹರಿಗೆ ಅನ್ಯಾಯ ಆಗಬಾರ್ದು: ಸಿಎಂ
ದಾವೋಸ್‌ ಶೃಂಗಕ್ಕೆ ಡಿಸಿಎಂ ಡಿಕೆಶಿ ಇಂದು ಪ್ರಯಾಣ - ಎಲ್ಲರ ಸಲಹೆ ಮೇರೆಗೆ ಭೇಟಿ