ಭಗವಾನ್ ಮಹಾವೀರರ ಮೌಲ್ಯಗಳನ್ನು ಪ್ರತಿಯೊಬ್ಬರು ಅಳಸಿಕೊಳ್ಳಬೇಕು: ಎಂ.ವಿ.ಧರಣೇಂದ್ರಯ್ಯ

KannadaprabhaNewsNetwork |  
Published : Mar 31, 2026, 02:00 AM IST
30ಕೆಎಂಎನ್ ಡಿ17 | Kannada Prabha

ಸಾರಾಂಶ

ಒಬ್ಬ ಸಂರಕ್ಷಕ, ಶ್ರೇಷ್ಠ ಪ್ರವಾದಿ, ಸಮಾಜ ಸುಧಾಕರ, ಸಂತ ಮತ್ತು ಭೂಮಿ ಮೇಲಿನ ದೇವರು, ದೇವಿಕ ಚೈತನ್ಯವನ್ನು ವಿವರಿಸಲು ವಿಭಿನ್ನ ಮಾರ್ಗಗಳನ್ನು ಅನುಸರಿಸಿದವರು ಮಹಾವೀರರು. ವಿಶ್ವದಲ್ಲಿ ಶಾಂತಿ ಮತ್ತು ಸಂತೋಷವನ್ನು ತರಲು, ಸದಾಚಾರದ ಹಾದಿಯಲ್ಲಿ ನಡೆಯಲು ಭಗವಾನ್ ಮಹಾವೀರರು ಪ್ರತಿಯೊಬ್ಬರನ್ನೂ ಪ್ರೇರೇಪಿಸಿದರು.

ಕನ್ನಡಪ್ರಭ ವಾರ್ತೆ ಮಂಡ್ಯ

ಭಗವಾನ್ ಮಹಾವೀರರು ಬೋಧಿಸಿದ ಕರುಣೆ ಮತ್ತು ವಿಶ್ವಬಂಧುತ್ವದ ಮೌಲ್ಯಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಂಡು ಅಜ್ಞಾನದ ಕತ್ತಲೆ ಸರಿದು ಜ್ಞಾನದ ಬೆಳಕು ಎಡೆ ಪಸರಿಸುವಂತಾಗಲಿ ಎಂದು ಕಸಾಪ ಮಾಜಿ ಅಧ್ಯಕ್ಷ ಎಂ.ವಿ.ಧರಣೇಂದ್ರಯ್ಯ ತಿಳಿಸಿದರು.

ನಗರದ ಶ್ರೀಅನಂತನಾಥಸ್ವಾಮಿ (ದಿಗಂಬರ ಜೈನ ಸಮಾಜ) ದೇವಾಲಯದಿಂದ ಮಹಾವೀರ ಜಯಂತಿ ಅಂಗವಾಗಿ ನಡೆದ ಭಗವಾನ್ ಮಹಾವೀರರ ಮೆರವಣಿಗೆಯಲ್ಲಿ ಭಾಗವಹಿಸಿ ಮಾತನಾಡಿ, ಜೈನ ಧರ್ಮದ ಕೊನೆಯ ಆಧ್ಯಾತ್ಮಿಕ ಗುರುವಿನ ಸ್ಮರಣಾರ್ಥ ವಿಶ್ವಾದ್ಯಂತ ಜೈನ ಸಮುದಾಯವು ಮಹಾವೀರ ಜಯಂತಿ ಆಚರಿಸುತ್ತಿದೆ ಎಂದರು.

ಒಬ್ಬ ಸಂರಕ್ಷಕ, ಶ್ರೇಷ್ಠ ಪ್ರವಾದಿ, ಸಮಾಜ ಸುಧಾಕರ, ಸಂತ ಮತ್ತು ಭೂಮಿ ಮೇಲಿನ ದೇವರು, ದೇವಿಕ ಚೈತನ್ಯವನ್ನು ವಿವರಿಸಲು ವಿಭಿನ್ನ ಮಾರ್ಗಗಳನ್ನು ಅನುಸರಿಸಿದವರು ಮಹಾವೀರರು. ವಿಶ್ವದಲ್ಲಿ ಶಾಂತಿ ಮತ್ತು ಸಂತೋಷವನ್ನು ತರಲು, ಸದಾಚಾರದ ಹಾದಿಯಲ್ಲಿ ನಡೆಯಲು ಭಗವಾನ್ ಮಹಾವೀರರು ಪ್ರತಿಯೊಬ್ಬರನ್ನೂ ಪ್ರೇರೇಪಿಸಿದರು. ಅವರ ದೈವಿಕ ಬೋಧನೆಗಳನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು ಎಂದರು.

ಭಗವಾನ್ ಮಹಾವೀರರು ಕ್ರಿ.ಪೂ 599ರಲ್ಲಿ ಇಂದಿನ ಭಾರತದ ಬಿಹಾರದಲ್ಲಿ ಜನಿಸಿದರು. ಅವರು 30ನೇ ವಯಸ್ಸಿನಲ್ಲಿ ತಮ್ಮ ರಾಜ ಜೀವನವನ್ನು ತೊರೆದು ತಪಸ್ಸು ಮತ್ತು ಧ್ಯಾನದ ಜೀವನವನ್ನು ನಡೆಸಿದರು. ಮುಂದಿನ 12 ವರ್ಷ ಗಳನ್ನು ಅವರು ಕಠಿಣ ಪರಿಶ್ರಮ ಮತ್ತು ವಿವಿಧ ಧಾರ್ಮಿಕ ಗ್ರಂಥಗಳನ್ನು ಅಧ್ಯಯನ ಮಾಡಿದರು ಎಂದರು.

ಭಗವಾನ್ ಮಹಾವೀರರ ಬೋಧನೆಗಳು ಪ್ರಪಂಚದ ಮೇಲೆ ಆಳವಾದ ಪ್ರಭಾವ ಬೀರಿವೆ ಮತ್ತು ಅವರ ತತ್ವಗಳು ಪ್ರಪಂಚದಾದ್ಯಂತ ಲಕ್ಷಾಂತರ ಜನರಿಗೆ ಸ್ಫೂರ್ತಿ ನೀಡುತ್ತಿವೆ. ಅವರು ಅಹಿಂಸೆ, ಸತ್ಯತೆ, ಬ್ರಹ್ಮಚರ್ಯ ಮತ್ತು ಸ್ವಾಧೀನವಿಲ್ಲದಿರುವಿಕೆಯ ತತ್ವಗಳನ್ನು ಕಲಿಸಿದರು. ಎಲ್ಲಾ ಜೀವಿಗಳು ಸಮಾನರು ಮತ್ತು ಅವುಗಳನ್ನು ಗೌರವ ಮತ್ತು ದಯೆಯಿಂದ ನಡೆಸಿಕೊಳ್ಳಬೇಕು ಎಂದು ಭಗವಾನ್ ಮಹಾವೀರರು ನಂಬಿದ್ದರು. ಸರಳ ಮತ್ತು ಆಧ್ಯಾತ್ಮಿಕ ಜೀವನವನ್ನು ನಡೆಸುವ ಮತ್ತು ಆತ್ಮಸಾಕ್ಷಾತ್ಕಾರದ ಮಾರ್ಗವನ್ನು ಅನುಸರಿಸುವ ಮಹತ್ವವನ್ನು ತಿಳಿಸಿದ್ದಾರೆ ಎಂದು ವಿವರಿಸಿದರು.

ಮೆರವಣಿಗೆಯಲ್ಲಿ ಜೈನ ಸಮಾಜದ ಮುಖಂಡರಾದ ಎಂ.ಬಿ.ಶ್ರೀಧರ್, ಮಾಜಿ ಅಧ್ಯಕ್ಷ ಎಂ.ಎಲ್. ಶಾಂತಿಪ್ರಸಾದ್, ಉಪಾಧ್ಯಕ್ಷ ವಿನಯ್‌ಕುಮಾರ್, ಖಜಾಂಚಿ ಮಹೇಂದ್ರಬಾಬು, ಡಾ. ಅನಂತರಾಜ್ ಇತರರು ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಮಾಜಕ್ಕೆ ತಿಗಳ ಸಮುದಾಯದ ಕೊಡುಗೆ ಅಪಾರ
ಸಮಾಜದಲ್ಲಿ ಮಹಿಳೆಯರ ಸಾಧನೆ ಗಮನಾರ್ಹ