ಕನ್ನಡಪ್ರಭ ವಾರ್ತೆ ಮಂಡ್ಯ
ನಗರದ ಶ್ರೀಅನಂತನಾಥಸ್ವಾಮಿ (ದಿಗಂಬರ ಜೈನ ಸಮಾಜ) ದೇವಾಲಯದಿಂದ ಮಹಾವೀರ ಜಯಂತಿ ಅಂಗವಾಗಿ ನಡೆದ ಭಗವಾನ್ ಮಹಾವೀರರ ಮೆರವಣಿಗೆಯಲ್ಲಿ ಭಾಗವಹಿಸಿ ಮಾತನಾಡಿ, ಜೈನ ಧರ್ಮದ ಕೊನೆಯ ಆಧ್ಯಾತ್ಮಿಕ ಗುರುವಿನ ಸ್ಮರಣಾರ್ಥ ವಿಶ್ವಾದ್ಯಂತ ಜೈನ ಸಮುದಾಯವು ಮಹಾವೀರ ಜಯಂತಿ ಆಚರಿಸುತ್ತಿದೆ ಎಂದರು.
ಒಬ್ಬ ಸಂರಕ್ಷಕ, ಶ್ರೇಷ್ಠ ಪ್ರವಾದಿ, ಸಮಾಜ ಸುಧಾಕರ, ಸಂತ ಮತ್ತು ಭೂಮಿ ಮೇಲಿನ ದೇವರು, ದೇವಿಕ ಚೈತನ್ಯವನ್ನು ವಿವರಿಸಲು ವಿಭಿನ್ನ ಮಾರ್ಗಗಳನ್ನು ಅನುಸರಿಸಿದವರು ಮಹಾವೀರರು. ವಿಶ್ವದಲ್ಲಿ ಶಾಂತಿ ಮತ್ತು ಸಂತೋಷವನ್ನು ತರಲು, ಸದಾಚಾರದ ಹಾದಿಯಲ್ಲಿ ನಡೆಯಲು ಭಗವಾನ್ ಮಹಾವೀರರು ಪ್ರತಿಯೊಬ್ಬರನ್ನೂ ಪ್ರೇರೇಪಿಸಿದರು. ಅವರ ದೈವಿಕ ಬೋಧನೆಗಳನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು ಎಂದರು.ಭಗವಾನ್ ಮಹಾವೀರರು ಕ್ರಿ.ಪೂ 599ರಲ್ಲಿ ಇಂದಿನ ಭಾರತದ ಬಿಹಾರದಲ್ಲಿ ಜನಿಸಿದರು. ಅವರು 30ನೇ ವಯಸ್ಸಿನಲ್ಲಿ ತಮ್ಮ ರಾಜ ಜೀವನವನ್ನು ತೊರೆದು ತಪಸ್ಸು ಮತ್ತು ಧ್ಯಾನದ ಜೀವನವನ್ನು ನಡೆಸಿದರು. ಮುಂದಿನ 12 ವರ್ಷ ಗಳನ್ನು ಅವರು ಕಠಿಣ ಪರಿಶ್ರಮ ಮತ್ತು ವಿವಿಧ ಧಾರ್ಮಿಕ ಗ್ರಂಥಗಳನ್ನು ಅಧ್ಯಯನ ಮಾಡಿದರು ಎಂದರು.
ಮೆರವಣಿಗೆಯಲ್ಲಿ ಜೈನ ಸಮಾಜದ ಮುಖಂಡರಾದ ಎಂ.ಬಿ.ಶ್ರೀಧರ್, ಮಾಜಿ ಅಧ್ಯಕ್ಷ ಎಂ.ಎಲ್. ಶಾಂತಿಪ್ರಸಾದ್, ಉಪಾಧ್ಯಕ್ಷ ವಿನಯ್ಕುಮಾರ್, ಖಜಾಂಚಿ ಮಹೇಂದ್ರಬಾಬು, ಡಾ. ಅನಂತರಾಜ್ ಇತರರು ಪಾಲ್ಗೊಂಡಿದ್ದರು.