ವಿದ್ಯಾರ್ಥಿ ಜೀವನದ ಅನುಭವ ಮುಂದಿನ ಜೀವನಕ್ಕೆ ದಾರಿದೀಪ: ರಾಜೇಗೌಡ

KannadaprabhaNewsNetwork |  
Published : Jan 16, 2024, 01:49 AM IST
ಲೋಕನಾಥಪುರ ಪ್ರೌಢಶಾಲೆಯಲ್ಲಿ ವಿಜ್ಞಾನ ಪ್ರಯೋಗಾಲಯ ಉದ್ಘಾಟನೆ | Kannada Prabha

ಸಾರಾಂಶ

ಶಿಕ್ಷಣ ಪಡೆದ ಮಕ್ಕಳು ಸಮಾಜಮುಖಿಯಾಗಿ ಬದುಕಬೇಕು. ವಿದ್ಯಾರ್ಥಿ ಜೀವನದ ಅನುಭವಗಳು ಅವರ ಮುಂದಿನ ಜೀವನಕ್ಕೆ ದಾರಿದೀಪವಾಗುತ್ತವೆ ಎಂದ ಶಾಸಕ ಟಿ.ಡಿ ರಾಜೇಗೌಡ ವಿದ್ಯಾರ್ಥಿಗಳ ಜೀವನದಲ್ಲಿ ಶಿಕ್ಷಣ ಬಹಳ ಮುಖ್ಯವಾದುದು. ಜೊತೆಗೆ ಮಕ್ಕಳು ಜಾತ್ಯಾತೀತ ಮನೋಭಾವನೆಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ತಿಳಿಸಿದರು.

- ಲೋಕನಾಥಪುರ ಪ್ರೌಢಶಾಲೆಯಲ್ಲಿ ವಿಜ್ಞಾನ ಪ್ರಯೋಗಾಲಯ ಉದ್ಘಾಟನೆ

ಕನ್ನಡಪ್ರಭ ವಾರ್ತೆ, ಕೊಪ್ಪ

ವಿದ್ಯಾರ್ಥಿಗಳ ಜೀವನದಲ್ಲಿ ಶಿಕ್ಷಣ ಬಹಳ ಮುಖ್ಯವಾದುದು. ಜೊತೆಗೆ ಮಕ್ಕಳು ಜಾತ್ಯಾತೀತ ಮನೋಭಾವನೆಗಳನ್ನು ಮೈಗೂಡಿಸಿಕೊಳ್ಳಬೇಕು. ಶಿಕ್ಷಣ ಪಡೆದ ಮಕ್ಕಳು ಸಮಾಜಮುಖಿಯಾಗಿ ಬದುಕಬೇಕು. ವಿದ್ಯಾರ್ಥಿ ಜೀವನದ ಅನುಭವಗಳು ಅವರ ಮುಂದಿನ ಜೀವನಕ್ಕೆ ದಾರಿದೀಪವಾಗುತ್ತವೆ ಎಂದು ಶಾಸಕ ಟಿ.ಡಿ ರಾಜೇಗೌಡ ಹೇಳಿದರು.

ಬೆಂಗಳೂರಿನ ಅಭ್ಯುದಯ ಟ್ರಸ್ಟ್ ಮತ್ತು "ಸುಂದರ ಭಾರತ ಪ್ರತಿಷ್ಠಾನ " ನಿರ್ಮಿಸಿದ "ಸ್ಟೆಮ್ ಲ್ಯಾಬ್ " ಮತ್ತು ವಿಜ್ಞಾನ ಪ್ರಯೋಗಾಲಯ ಉದ್ಘಾಟಿಸಿ ಮಾತನಾಡಿದ ಅವರು ಶಾಲೆಯ ಯಾವುದೇ ಕೊರತೆ ಮಕ್ಕಳ ಶೈಕ್ಷಣಿಕ ಜೀವನಕ್ಕೆ, ಕಲಿಕೆಗೆ ಅಡ್ಡಿಯಾಗಬಾರದು. ಈ ಶಾಲೆ ಅಭಿವೃದ್ಧಿ, ಪ್ರತಿವರ್ಷ ಸಾಧಿಸುತ್ತಿರುವ ಸಾಧನೆ ನಿಜಕ್ಕೂ ಸಂತೋಷ ತರುವಂತದ್ದು. ಗ್ರಾಮೀಣ ಭಾಗದ ಈ ಶಾಲೆಯ ಸಾಧನೆ ಉಳಿದೆಲ್ಲ ಶಾಲೆಗಳಿಗೂ ಮಾದರಿ. ಈ ಸಾಧನೆಗೆ ಕಾರಣಕರ್ತರಾದ ಎಲ್ಲರಿಗೂ ಅಭಿನಂದನೆ ತಿಳಿಸಿದ ಅವರು ಬೆಂಗಳೂರಿನ ಅಭ್ಯುದಯ ಟ್ರಸ್ಟ್ ಮತ್ತು "ಸುಂದರ ಭಾರತ ಪ್ರತಿಷ್ಠಾನ " ಮಕ್ಕಳ ಕಲಿಕೆಗೆ ಅನುಕೂಲವಾಗಲು ಸುಮಾರು ಒಂದೂವರೆ ಲಕ್ಷಕ್ಕೂ ಹೆಚ್ಚು ಹಣ ಖರ್ಚು ಮಾಡಿ ಸ್ಟೆಮ್ ಲ್ಯಾಬ್ ಮತ್ತು ವಿಜ್ಞಾನ ಪ್ರಯೋಗಾಲಯ ಕಟ್ಟಿಸಿಕೊಟ್ಟಿದ್ದಾರೆ. ದಾನಿಗಳು ನೀಡಿದ ಈ ಸೌಲಭ್ಯ ಸದುಪಯೋಗಪಡಿಸಿಕೊಳ್ಳಬೇಕು ಎಂದರು.

ಶಾಲೆ ಮುಖ್ಯ ಶಿಕ್ಷಕ ಪದ್ಮನಾಬ್ ಮಾತನಾಡಿ ಶಾಲಾ ಬೇಡಿಕೆಗಳನ್ನು ಈಡೇರಿಸಿಕೊಡುವಂತೆ ಶಾಸಕರಿಗೆ ಮನವಿ ಮಾಡಿದರು.

ತುಳುವಿನ ಕೊಪ್ಪ ಗ್ರಾಮಸ್ಥರ ಪರವಾಗಿ ಶಾಸಕರಿಗೆ ಅಭಿನಂದನಾ ಕಾರ್ಯಕ್ರಮ ಏರ್ಪಡಿಸಲಾಯಿತು. ಭಾಷಾ ಶಿಕ್ಷಕ ಆರ್.ಡಿ.ರವೀಂದ್ರ, ಮಾಜಿ ಜಿಪಂ ಅಧ್ಯಕ್ಷ ಸತೀಶ್ ಎಚ್.ಎಂ, ಚಿಂತನ್ ಬೆಳಗೊಳ, ಗ್ರಾಪಂ ಅಧ್ಯಕ್ಷೆ ಜಾನಕಿ, ತಾಲೂಕು ಅಕ್ರಮ ಸಕ್ರಮ ಸಮಿತಿ ಸದಸ್ಯೆ ಅನ್ನಪೂರ್ಣ ನರೇಶ್, ಜಯಪುರ ಗ್ರಾಪಂ ಸದಸ್ಯ ಫಣಿರಾಜ್, ಶಿಕ್ಷಕಿ ಅಂಬಿಕ, ಆಶಾ, ರವಿಕುಮಾರ್ ಮುಂತಾದವರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಾತಿಗಳಲ್ಲಿ ಮೇಲು ಕೀಳು ಎಂಬುವುದಿಲ್ಲ
ಗೃಹ ರಕ್ಷಕರಿಗೆ ಪೂರ್ಣಾವಧಿ ಕರ್ತವ್ಯ ನೀಡಿ