ಸಮಸ್ಯೆ, ಸವಾಲು ಎದುರಿಸಿ ಗುರಿ ತಲುಪಿ: ರಂಭಾಪುರಿ ಶ್ರೀ

KannadaprabhaNewsNetwork |  
Published : Jul 13, 2026, 02:30 AM IST
12 ಬೀರೂರು 3ಬೀರೂರು ಸಮೀಪದ ಮುಂಡ್ರೆ ಗ್ರಾಮದಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ರಂಭಾಪುರಿ ಪೀಠದ ಪ್ರಸನ್ನ ರೇಣುಕ ವೀರಸೋಮೇಶ್ವರ ರಾಜ ದೇಶೀಕೇಂದ್ರ ಸ್ವಾಮೀಜಿ ಆಶೀರ್ವಚನ ನೀಡಿದರು. ಸಿ.ಟಿ. ರವಿ ಭಾಗವಹಿಸಿದ್ದರು | Kannada Prabha

ಸಾರಾಂಶ

ಜೀವನದಲ್ಲಿ ಎದುರಾಗುವ ಸಮಸ್ಯೆ ಹಾಗೂ ಸವಾಲುಗಳನ್ನು ಧೈರ್ಯದಿಂದ ಎದುರಿಸಿ ಗುರಿ ಸಾಧಿಸಬೇಕು ಬಾಳೆಹೊನ್ನೂರು ರಂಭಾಪುರಿ ಪೀಠದ ಜಗದ್ಗುರು ಪ್ರಸನ್ನ ರೇಣುಕ ವೀರಸೋಮೇಶ್ವರ ರಾಜ ದೇಶೀಕೇಂದ್ರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

ಕನ್ನಡಪ್ರಭ ವಾರ್ತೆ ಬೀರೂರು

ಜೀವನದಲ್ಲಿ ಎದುರಾಗುವ ಸಮಸ್ಯೆ ಹಾಗೂ ಸವಾಲುಗಳನ್ನು ಧೈರ್ಯದಿಂದ ಎದುರಿಸಿ ಗುರಿ ಸಾಧಿಸಬೇಕು ಬಾಳೆಹೊನ್ನೂರು ರಂಭಾಪುರಿ ಪೀಠದ ಜಗದ್ಗುರು ಪ್ರಸನ್ನ ರೇಣುಕ ವೀರಸೋಮೇಶ್ವರ ರಾಜ ದೇಶೀಕೇಂದ್ರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

ಸಮೀಪದ ಮುಂಡ್ರೆ ಗ್ರಾಮದಲ್ಲಿ ನಡೆದ ಧರ್ಮಸಭೆಯಲ್ಲಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ, ಮಾನವನ ತಾನೊಂದು ಬಗೆದರೆ ವಿಧಿ ಇನ್ನೊಂದು ಎಣಿಸಿರುತ್ತದೆ ಎಂಬ ಅರಿವಿನೊಂದಿಗೆ ಬದುಕನ್ನು ಎದುರಿಸಬೇಕು ಎಂದರು.

ಪರಮಾತ್ಮನಿಂದ ಭಿನ್ನವಾಗಿ ಬಂದ ಜೀವಾತ್ಮ ಮತ್ತೆ ಪರಮಾತ್ಮನಲ್ಲಿ ಲೀನವಾಗುವುದು ಸಹಜ ಪ್ರಕ್ರಿಯೆ. ಪಂಚಭೂತ ಹಾಗೂ ಪಂಚತತ್ವಗಳಿಲ್ಲದೆ ಮನುಷ್ಯನ ಅಸ್ತಿತ್ವ ಸಾಧ್ಯವಿಲ್ಲ. ಭಗವಂತನು ಹುಟ್ಟು ಮತ್ತು ಸಾವಿನ ಪುಟಗಳನ್ನು ಬರೆದು ನಮ್ಮನ್ನು ಕಳುಹಿಸುತ್ತಾನೆ. ಆದರೆ ನಡುವಿನ ಬದುಕಿನ ಪುಟಗಳನ್ನ ಅರ್ಥಪೂರ್ಣಗೊಳಿಸುವ ಜವಾಬ್ದಾರಿ ನಮ್ಮದೇ ಆಗಿದೆ ಎಂದು ಹೇಳಿದರು.

ದೇಹವನ್ನು ದುಡಿಮೆಗೆ, ಮನಸ್ಸನ್ನು ಭಗವಂತನಿಗೆ ಅರ್ಪಿಸಿದರೆ ಜೀವನ ಕ್ರಿಯಾಶೀಲವಾಗುತ್ತದೆ. ಪಾರಮಾರ್ಥಿಕ ದೃಷ್ಟಿಕೋನ ಬೆಳೆಸಿಕೊಂಡರೆ ದುಃಖದ ಸೋಂಕು ಇರುವುದಿಲ್ಲ. ಜೀವನ ನಶ್ವರ, ಸಾವು ಅನಿವಾರ್ಯ. ಈ ತತ್ವದ ಆಧಾರದಲ್ಲಿಯೇ ವೀರಶೈವ ಧರ್ಮವು ಮರಣವೇ ಮಹಾನವಮಿ ಎಂದು ಅರ್ಥೈಸಿದೆ ಎಂದು ತಿಳಿಸಿದರು.

ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಮಾತನಾಡಿ, ವೃದ್ಧಾಶ್ರಮಗಳ ಸಂಖ್ಯೆ ಹೆಚ್ಚುತ್ತಿರುವುದು ನಮ್ಮ ಸಂಸ್ಕೃತಿಯ ಬಗ್ಗೆ ಆತಂಕ ಮೂಡಿಸಿದೆ. ಬದುಕಿರುವಾಗಲೇ ತಂದೆ-ತಾಯಿಯನ್ನು ಪ್ರೀತಿ, ಗೌರವದಿಂದ ನೋಡಿಕೊಳ್ಳಬೇಕು. ನಂತರ ಪಶ್ಚಾತ್ತಾಪಪಟ್ಟರೂ ಪ್ರಯೋಜನವಿಲ್ಲ ಎಂದರು.

ಡಿ.ವಿ.ಜಿ. ಅವರ ಕಗ್ಗ ಉಲ್ಲೇಖಿಸಿದ ಅವರು, `ಸ್ವರ್ಗ ನರಕದ ಕಲ್ಪನೆಗಳ ಬಗ್ಗೆ ಹಲವು ಅಭಿಪ್ರಾಯಗಳಿವೆ. ಆದರೆ,ಅಲ್ಲಿಗೆ ಹೋಗಿ ಮರಳಿ ಬಂದವರೂ ಇಲ್ಲ. ವರದಿ ತಂದವರೂ ಇಲ್ಲ. ಆದ್ದರಿಂದ ದ್ವೇಷ. ಅಸೂಯೆಯಿಂದ ಬದುಕನ್ನು ನರಕವಾಗಿಸಿಕೊಳ್ಳದೆ, ಇತರರಿಗೆ ನೆರವಾಗಿ ಬದುಕನ್ನು ಸ್ವರ್ಗವನ್ನಾಗಿಸಿಕೊಳ್ಳುವುದೇ ಸಾರ್ಥಕತೆ'''''''' ಎಂದು ಹೇಳಿದರು.

ಡಿ.ವಿ.ಜಿ. ಅವರ ಕಗ್ಗ ಉಲ್ಲೇಖಿಸಿದ ಅವರು, ಸ್ವರ್ಗ ನರಕದ ಕಲ್ಪನೆಗಳ ಬಗ್ಗೆ ಹಲವು ಅಭಿಪ್ರಾಯಗಳಿವೆ. ಆದರೆ,ಅಲ್ಲಿಗೆ ಹೋಗಿ ಮರಳಿ ಬಂದವರೂ ಇಲ್ಲ, ವರದಿ ತಂದವರೂ ಇಲ್ಲ. ಆದ್ದರಿಂದ ದ್ವೇಷ, ಅಸೂಯೆಯಿಂದ ಬದುಕನ್ನು ನರಕವಾಗಿಸಿಕೊಳ್ಳದೆ, ಇತರರಿಗೆ ನೆರವಾ ಬದುಕನ್ನು ಸ್ವರ್ಗವನ್ನಾಗಿಸಿಕೊಳ್ಳುವುದೇ ಸಾರ್ಥಕತೆ ಎಂದು ಹೇಳಿದರು.

ಬಾಳೆಹೊನ್ನೂರು ಶಾಖಾಮಠದ ಯಡಿಯೂರು ರೇಣುಕ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ವೀರಶೈವ ಧರ್ಮವು ಆಚಾರ-ವಿಚಾರ ಹಾಗೂ ಪರಂಪರೆಯ ನೆಲೆಯಲ್ಲಿ ಬೆಳೆದಿದೆ. ಗುರು-ಲಿಂಗ-ಜಂಗಮ ಆರಾಧನೆ, ವಿಭೂತಿ ಹಾಗೂ ರುದ್ರಾಕ್ಷಿ ಧಾರಣೆಯಂತಹ ಸಂಪ್ರದಾಯಗಳನ್ನು ನಿರ್ಲಕ್ಷಿಸಬಾರದು. ಕುಟುಂಬದ ಹಿರಿಯರ ನೆನಪಿನಲ್ಲಿ ವರ್ಷಕ್ಕೊಮ್ಮೆಯಾದರೂ ಧಾರ್ಮಿಕ-ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿ, ನವ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಪರಿಚಯಿಸಬೇಕು ಎಂದು ಸಲಹೆ ನೀಡಿದರು.

ಹಣ್ಣೆಮಠದ ಮರುಳಸಿದ್ಧ ಶಿವಾಚಾರ್ಯ ಸ್ವಾಮೀಜಿ, ಸಿದ್ಧರಬೆಟ್ಟದ ವೀರಭದ್ರ ಶಿವಾಚಾರ್ಯ ಸ್ವಾಮೀಜಿ, ತರೀಕೆರೆ ಶಾಸಕ ಜಿ.ಎಚ್. ಶ್ರೀನಿವಾಸ್, ಎಚ್.ಎಂ. ಲೋಕೇಶ್ ಹಾಗೂ ಸವಿತಾ ರಮೇಶ್ ಮಾತನಾಡಿದರು. ವಿವಿಧ ಮಠಗಳ ಶಿವಾಚಾರ್ಯ ಸ್ವಾಮೀಜಿಗಳು, ಅಖಿಲ ಭಾರತ ವೀರಶೈವ ಮಹಾಸಭೆ ಪದಾಧಿಕಾರಿಗಳು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸರ್ಕಾರಿ ಆಸ್ಪತ್ರೆ ಮೇಲ್ದರ್ಜೆಗಿಂತ ಮೂಲ ಸೌಕರ್ಯ ಒದಗಿಸಿ
ಶಿಕ್ಷಣ ಕೇವಲ ಪುಸ್ತಕದ ಜ್ಞಾನ ಅಲ್ಲ: ಶಾಸಕ ಎಚ್‌.ಡಿ.ತಮ್ಮಯ್ಯ