ಕನ್ನಡಪ್ರಭ ವಾರ್ತೆ ಬೆಳಗಾವಿ
ಬಾಗಲಕೋಟೆಯ ರಬಕವಿ ಅಕ್ಷಯ ಸುಭಾಷ ಚೋಪಡೆ (48), ಬೈಲಹೊಂಗಲದ ನೇಸರಗಿಯ ದೀಪಕ ನಾಗಪ್ಪ ಮುನ್ನೋಳಿ(32), ಖಾನಾಪುರದ ಚಿಕ್ಕಮುನವಳ್ಳಿ ಸುದರ್ಶನ ಮಹಾದೇವ ಬನೋಶಿ(25), ಬೈಲಹೊಂಗಲದ ಅರವಳ್ಳಿಯ ಮಂಜುನಾಥ ಮಡಿವಾಳಪ್ಪ ಕಾಜಗಾರ(28), ಅಥಣಿಯ ಹುಲಿಕಟ್ಟಿ ಗ್ರಾಮದ ಮಂಜುನಾಥ ಗೋಪಾಲ ತೇರದಾಳ, ಜಮಖಂಡಿ ತಾಲೂಕಿನ ಮರೆಗುದ್ದಿ ಗ್ರಾಮದ ಗುರುಪಾದಪ್ಪ ಬೀರಪ್ಪ ತಮ್ಮಣ್ಣವರ(38), ಗೋಕಾಕ ತಾಲೂಕಿನ ಗೊಡಚಿನಮಲ್ಕಿ ಭರತೇಶ ಬಸಪ್ಪ ಸಾರವಾಡಿ(27), ಗಿಳಿಹೊಸೂರುದ ರಾಘವೇಂದ್ರ ಗಿರಿಯಾಳ(36) ಮೃತಪಟ್ಟ ಕಾರ್ಮಿಕರು.
ಅವಘಡ ಸಂಭವಿಸಿ 24 ಗಂಟೆಗೂ ಹೆಚ್ಚು ಸಮಯ ಕಳೆದರೂ ಕಾರ್ಖಾನೆ ಆಡಳಿತ ಮಂಡಳಿಯವರು ಇದುವರೆಗೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ ಅಥವಾ ಪರಿಹಾರವನ್ನು ಘೋಷಿಸಿಲ್ಲ ಎಂದು ಮೃತರ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದರು. ಖಾಸಗಿ ಆಸ್ಪತ್ರೆಯ ಶವಾಗಾರದಲ್ಲಿ ಎರಡು ಮೃತದೇಹಗಳ ಮರಣೋತ್ತರ ಪರೀಕ್ಷೆ ಪ್ರಕ್ರಿಯೆ ನಡೆಯಿತು. ಈ ವೇಳೆ ಮೃತರ ಸಂಬಂಧಿಕರು ಸೇರಿ, ಸ್ಥಳೀಯರು ಅಕ್ರೋಶ ವ್ಯಕ್ತಪಡಿಸಿದರು. ಮೃತ ಕಾರ್ಮಿಕ ಗುರು ತಮ್ಮಣ್ಣನವರ ಕುಟುಂಬಸ್ಥರು ಶವಾಗಾರದ ಹೊರಗೆ ಕಾರ್ಖಾನೆ ಆಡಳಿತ ಮಂಡಳಿಯ ನಡೆಯನ್ನು ಖಂಡಿಸಿ ಪ್ರತಿಭಟನೆ ನಡೆಸಿದರು.ಮೃತರ ಕುಟುಂಬಸ್ಥರು ಕಾರ್ಖಾನೆ ಮಾಲೀಕರ ನಿರ್ಲಕ್ಷ್ಯದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಏಳು ಕಾರ್ಮಿಕರು ಸಾವನ್ನಪ್ಪಿದ ನಂತರವೂ ಕಾರ್ಖಾನೆ ಆಡಳಿತ ಮಂಡಳಿಯ ಯಾರೂ ಆಸ್ಪತ್ರೆಗೆ ಭೇಟಿ ನೀಡಿಲ್ಲ. ಸಂತಾಪವನ್ನು ಸೂಚಿಸಿಲ್ಲ ಎಂದು ದೂರಿದರು. ಇನಾಂದಾರ ಸಕ್ಕರೆ ಕಾರ್ಖಾನೆಯನ್ನು ವಿಕ್ರಮ್ ಇನಾಂದಾರ್, ಪ್ರಭಾಕರ ಕೋರೆ ಹಾಗೂ ವಿಜಯ ಮೆಟಗುಡ್ ಜಂಟಿಯಾಗಿ ನಿರ್ವಹಿಸುತ್ತಿದ್ದಾರೆ. ಅಕ್ಷಯ ಚೋಪಡೆ (45), ದೀಪಕ್ ಮನ್ನೊಳ್ಳಿ (31), ಸುದರ್ಶನ ಬಾನೋಶಿ (25), ಭರತೇಶ್ ಸರವಾಡೆ (27) ಗುರು ತಮ್ಮಣ್ಣನವರ್ (26) ಮತ್ತು ಮಂಜುನಾಥ ಕಾಜಗಾರ್ (26) ಮೃತ ದುರ್ದೈವಿ ಕಾರ್ಮಿಕರು.
-----
ಘಟನೆಗೆ ಎಚ್ಚರಿಕೆ ವಹಿಸದಿರುವುದೇ ಮುಖ್ಯ ಕಾರಣ
ದುರಂತದ ಬಳಿಕ ಜೀವ ಉಳಿಸಲು ಗ್ರೀನ್ ಕಾರಿಡಾರ್ ನಿರ್ಮಿಸಿ, ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದ್ದರೂ ಏಳು ಜನ ಕಾರ್ಮಿಕರು ಮೃತಪಟ್ಟಿದ್ದಾರೆ. ಮೃತರ ಕುಟುಂಬಗಳಿಗೆ ನ್ಯಾಯ ಸಿಗಬೇಕು. ಕಾನೂನು ರೀತಿ, ಮಾನವೀಯತೆ ರೀತಿಯಲ್ಲಿ ಕೆಲಸ ಮಾಡುತ್ತೇವೆ. ಕಾರ್ಖಾನೆಯ ಮಾಲೀಕರ ಬಗ್ಗೆ ಇನ್ನು ವಿಚಾರಣೆ ನಡೆಸಿಲ್ಲ. ಅಲ್ಲದೇ, ಈವರೆಗೂ ಯಾರನ್ನೂ ಬಂಧಿಸಲಾಗಿಲ್ಲ ಎಂದು ತಿಳಿಸಿದರು.
ಬಾಕ್ಸ್...
ಸಕ್ಕರೆ ಕಾರ್ಖಾನೆಯಲ್ಲಿ ಬಾಯ್ಲರ್ ಸ್ಫೋಟ ಪ್ರಕರಣದ ಸಂಬಂಧ ಕಾರ್ಖಾನೆ ತಾಂತ್ರಿಕ ತಂಡದ ಮುಖ್ಯಸ್ಥರು ಸೇರಿ ಮೂವರ ವಿರುದ್ಧ ಮುರಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ತಿಳಿಸಿದರು.