ಕನ್ನಡಪ್ರಭ ವಾರ್ತೆ ಬೀಳಗಿ
ಭಾರೀ ಸುರಿದ ಮಳೆಗೆ ಧರೆಗುಳಿದ ಮನೆಗಳನ್ನು ವೀಕ್ಷಿಸಿದ ನಂತರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ತಾಲೂಕಿನಾದ್ಯಾಂತ 7.3ಮೀ.ಮೀ ಮಳೆಯಾಗಬೇಕಾಗಿತ್ತು. ಆದರೆ ಭಾನುವಾರ ರಾತ್ರಿ ಸುಮಾರು 90.4 ಮೀ.ಮೀ ಮಳೆಯಾಗಿದೆ. ಇದರಿಂದ ಕೃಷಿಕರ ಬೆಳೆಗಳು ಅಪಾರ ಹಾನಿಯಾಗಿವೆ. ಪಟ್ಟಣದಲ್ಲಿ 50 ಮನೆಗಳಿಗೆ ಮಳೆ ನೀರು ನುಗ್ಗಿದ್ದರಿಂದ ಇಡೀ ರಾತ್ರಿ ಸಾರ್ವಜನಿಕರು ತೊಂದರೆ ಅನುಭವಿಸಿದ್ದಾರೆ. ಬೀಳಗಿ ಪಟ್ಟಣ ಹಾಗೂ ಗ್ರಾಮೀಣ ಭಾಗದಲ್ಲಿನ ಮನೆಗಳ ಮಾಹಿತಿ ಮತ್ತು ಜಮೀನುಗಳ ಹಾನಿಯನ್ನು ಗ್ರಾಮಲೆಕ್ಕಾಧಿಕಾರಿಗಳ ಮೂಲಕ ಮಾಹಿತಿ ಪಡೆದುಕೊಳ್ಳಬೇಕು. ಇನ್ನೂ ಹೆಚ್ಚು ಮಳೆಯಾಗುವ ಸಂಭವ ಇದೆ. ಇದರಿಂದ ಅಪಾರ ಪ್ರಮಾಣದ ಸಣ್ಣಸಣ್ಣ ಬೆಳೆಗಳು ಹಾನಿಯಾಗಿವೆ ಸರ್ಕಾರ ನಿಗದಿ ಮಾಡಿದ ಪರಿಹಾರ ಒದಗಿಸಲಾಗುವುದು.
ಬೀಳಗಿ ಪಟ್ಟಣ ಅಂಬೇಡ್ಕರ್ ನಗರ ಸ್ಲಂ ಏರಿಯಾದ ಕೆಲವು ಮನೆಗಳು ಹಾಗೂ ತೋಳಮಟ್ಟಿ ಗ್ರಾಮದ ಮನೆಗಳಿಗೆ ನೀರು ನುಗ್ಗಿದಲ್ಲದೇ ಮತ್ತು ಸುನಗ ರೈತರ ರಾಶಿ ಮಾಡಿದ 40ಕ್ಕಿಂತ ಹೆಚ್ಚು ಚೀಲ ಸಜ್ಜೆ ಹಾಳಾಗಿದೆ ಎಂದರು.ಬೀಳಗಿ ಪಪಂ ಮುಂಭಾಗದಲ್ಲಿರುವ ಚರಂಡಿಯಲ್ಲಿ ನೀರು ಹರಿಯುತ್ತಿದೆ. ಇದು ಅಂಬೇಡ್ಕರ್ ನಗರದ ಚರಂಡಿ ಮೂಲಕ ಹೊರಗಡೆ ಹೊಗುತ್ತಿದ್ದು. ಭಾನುವಾರ ದಿನ ಅಪಾರ ಪ್ರಮಾಣದಲ್ಲಿ ಮಳೆಯಾಗಿದ್ದರಿಂದ ಅಲ್ಲಿಯ ಸುಮಾರು 30ಕ್ಕೂ ಹೆಚ್ಚು ಮನೆಗಳಿಗೆ ರಾತ್ರಿ ನೀರು ನುಗ್ಗಿದೆ. ಪಪಂನಿಂದ ಜಮಖಂಡಿ ಮಾರ್ಗವಾಗಿ ಹೋಗುವ ರಸ್ತೆಯ ಪಕ್ಕದ ಚರಂಡಿ ಸಣ್ಣ ಪ್ರಮಾಣದಲ್ಲಿ ಇರುವುದರಿಂದ ನೀರು ಹರಿಯಲು ತೊಂದರೆಯಾಗುತ್ತದೆ. ಇದರಿಂದ ಅಲ್ಲಿಯೇ ಸಮಸ್ಯೆಗೆ ಪರಿಹಾರ ನೀಡಲಿಕ್ಕೆ ರಾಜ್ಯ ಕಾಲುವೆ ನಿರ್ಮಿಸಿದರೆ ಮಾತ್ರ ಇಂತಹ ಸಮಸ್ಯೆಯಿಂದ ಹೊರಬರಲು ಸಾಧ್ಯ. ಇದಕ್ಕೆ ಸುಮಾರು ₹6.5 ಕೋಟಿಯಷ್ಟು ಹಣ ಬೇಕಾಗಿದೆ. ಇದನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರುವುದಾಗಿ ಹೇಳಿದರು.