ಶಿವಾನಂದ ಅಂಗಡಿ
ಶ್ರೀಮಠದಲ್ಲೇ ನಾಲ್ಕು ದಶಕ: ಶ್ರೀಮಠದ 13ನೇ ಪೀಠಾಧಿಪತಿ ಫಕೀರ ಸಿದ್ದರಾಮ ಶ್ರೀಗಳು 1988ರ ಅಕ್ಟೋಬರ್ 22ರಂದು ಪೀಠಾಧಿಪತಿಯಾಗಿ ಆಗಮಿಸಿದ್ದಾರೆ. 1984ರಿಂದಲೇ ಅವರು ಮಠದಲ್ಲಿ ಇರುವುದು ವಿಶೇಷ. 4 ದಶಕ ಪೂರ್ಣಗೊಂಡಿದ್ದು, ಶ್ರೀಮಠದ ಅಭಿವೃದ್ಧಿಗೆ ಹಗಲಿರುಳು ಶ್ರಮಿಸುತ್ತಾ, ಹಿಂದೂ-ಮುಸ್ಲಿಂರ ಸಾಮರಸ್ಯದ ಸಂದೇಶ ಸಾರುತ್ತ ಮಠದ ಕೀರ್ತಿ ಎಲ್ಲೆಡೆ ಹೆಚ್ಚಿಸಿದ್ದಾರೆ.
"ಯೋಜನೆ ಆರಂಭಿಕ ಹಂತದಲ್ಲೇ ಸ್ವರ್ಣ ತುಲಾಭಾರ ದೊಡ್ಡ ಜವಾಬ್ದಾರಿ ಕೆಲಸ, ಜವಾಬ್ದಾರಿ ತೆಗೆದುಕೊಳ್ಳುವವರು ಬೇಕು. ಕೊಟ್ಟಿದ್ದು ಕೊಟ್ಟಲ್ಲೇ- ಇಟ್ಟಿದ್ದು ಇಟ್ಟಲ್ಲೇ ಆಗಿ ಏನಾದರೂ ಹೆಚ್ಚು ಕಡಿಮೆಯಾದರೆ ಕೆಟ್ಟ ಹೆಸರು ಬರುತ್ತದೆ. ಹಾಗಾಗಿ ನಾವು ಅದನ್ನು ಒಪ್ಪಿಕೊಂಡಿಲ್ಲ. ಜತೆಗೆ ಬಂಗಾರದ ರೇಟ್ ಒಂದು ಲಕ್ಷ ಚಿಲ್ಲರ ಐತಿ, ಇದನ್ನು ಗಮನಿಸಿ ಭಕ್ತರ ಹಿತದೃಷ್ಟಿಯಿಂದ ನಾನೇ ಬೇಡ ಅಂದಿದ್ದೇನೆ " ಎಂದು ಫಕೀರ ಸಿದ್ದರಾಮ ಶ್ರೀಗಳು ''''''''ಕನ್ನಡಪ್ರಭ''''''''ಕ್ಕೆ ಸ್ಪಷ್ಟಪಡಿಸಿದರು.ನಿಮ್ ಬಂಗಾರ ನೀವು ಒಯ್ಯಿರಿ: ಯೋಜನೆ ರೂಪಿಸಿದ ಮೇಲೆ ನಾವು ಕೆಲವು ಕಡೆ ತೆರಳಿದಾಗ ಭಕ್ತರು ವಾಗ್ದಾನ ಮಾತ್ರ ಕೊಟ್ಟಿದ್ದಾರೆ. ನಾವು ವಸೂಲಿ ಮಾಡಿಲ್ಲ, ಆಕಸ್ಮಾತ್ ಯಾರಾದರೂ ಕೊಟ್ಟಿದ್ರ, ನಿಮ್ ಬಂಗಾರ ನೀವು ಒಯ್ಯಿರಿ ಎಂದು ಭಕ್ತರ ಸಭೆ ಮಾಡಿ ಹೇಳಿದ್ದೇವೆ. ರಸೀದಿ ತಂದು ತೋರಿಸಿದವರಿಗೆ ವಾಪಸ್ ಕೊಟ್ಟಿದ್ದೇವೆ. ನನ್ನ ಮನಸ್ಸು ಒಪ್ಪಲಿಲ್ಲ. ಹೀಗಾಗಿ ಬೇಡ ಎಂದು ಹೇಳಿದೆ ಎಂದು ಸ್ವಾಮೀಜಿ ಹೇಳಿದರು.
ಇನ್ನು ಕೆಲವರು ಬಂದಿಲ್ಲ, ಭಕ್ತರು ಕೊಟ್ಟ ಬಂಗಾರ ಪ್ಲಾಸ್ಟಿಕ್ ಚೀಲದಲ್ಲಿ ಪ್ಯಾಕ್ ಮಾಡಿ ಅವರ ಹೆಸರು, ಫೋನ್ ನಂಬರ್ ಸಮೇತ ಬರೆದು ಇಟ್ಟೇವೆ. ಪಾವತಿ ತೋರಿಸಿ ತೆಗೆದುಕೊಂಡು ಹನ್ಬಹುದು ಎಂದು ಶ್ರೀಗಳು ಮುಕ್ತ ಆಹ್ವಾನ ನೀಡಿದರು.
ನಮ್ಮ ಹಿರಿಯ ಗುರುಗಳ (ಸಿದ್ದರಾಮ ಸ್ವಾಮೀಜಿ) ಆದೇಶದ ಮೇರೆಗೆ ನಾನು ಸುಮ್ಮನೆ ಕುಳಿತಿದ್ದೇನೆ. ಸ್ವರ್ಣ ತುಲಾಭಾರದ ಕುರಿತು ಹೆಚ್ಚಿನ ಮಾಹಿತಿಯನ್ನು ಶ್ರೀಗಳಿಂದಲೇ ಪಡೆದುಕೊಳ್ಳಿ ಎಂದು ಶಿರಹಟ್ಟಿ ಫಕೀರೇಶ್ವರ ಮಠದ ಉತ್ತರಾಧಿಕಾರಿ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು.ಕಾರ್ಯಕ್ರಮಕ್ಕೆ ನಾನು ಸಹ 5 ತೊಲೆ ಬಂಗಾರ ಕೊಡುವುದಾಗಿ ವಾಗ್ದಾನ ಮಾಡಿದ್ದೆ. 2023ರಲ್ಲಿ 10 ಗ್ರಾಂಗೆ ₹ 58 ಸಾವಿರ ಇದ್ದ ದರ ದಿಢೀರ್ ಏರಿದ್ದರಿಂದ ಭಕ್ತರ ಹಿತದೃಷ್ಟಿಯಿಂದ ಸ್ವಾಮೀಜಿ ಶ್ರೀಮಠದಲ್ಲಿ ಭಕ್ತರ ಸಭೆ ಕರೆದು ಸ್ವರ್ಣ ತುಲಾಭಾರ ಕಾರ್ಯಕ್ರಮ ಕೈಬಿಟ್ಟಿರುವುದಾಗಿ ತಿಳಿಸಿದ್ದಾರೆ. ಅಜ್ಜನವರು ಹೇಳಿದ್ದಕ್ಕೆ ಭಕ್ತರು ಒಪ್ಪಿದ್ದಾರೆ ಶಿರಹಟ್ಟಿ ಫಕೀರೇಶ್ವರ ಮಠದ ಭಕ್ತ ಬಸವರಾಜ ಎಂ. ಬೋರಶೆಟ್ರ ಹೇಳಿದರು.