ಕೌಟುಂಬಿಕ ಹಾಕಿ: ಐದು ತಂಡಗಳು ಕ್ವಾರ್ಟರ್‌ ಫೈನಲ್‌ಗೆ

KannadaprabhaNewsNetwork |  
Published : Dec 24, 2025, 03:00 AM IST
4ನೇ ವರ್ಷದ ಕೊಡವ ಕೌಟುಂಬಿಕ ಹಾಕಿ ಪಂದ್ಯ. | Kannada Prabha

ಸಾರಾಂಶ

4ನೇ ವರ್ಷದ ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿ ಹೈಪ್ಲೈಯರ್ಸ್ ಕಪ್-2025ರ 2ನೇ ದಿನದ ಪಂದ್ಯಾವಳಿಯಲ್ಲಿ ಒಟ್ಟು 5 ತಂಡಗಳು ಕ್ವಾರ್ಟರ್ ಫೈನಲ್ ಹಂತಕ್ಕೆ ಪ್ರವೇಶ ಪಡೆಯಿತು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಬಿಟ್ಟಂಗಾಲ ಸಮೀಪದ ವಿ. ಬಾಡಗದ ಹೈ ಪ್ಲೈಯರ್ಸ್ ತಂಡದ ವತಿಯಿಂದ ವಿ. ಬಾಡಗದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯುತ್ತಿರುವ 4ನೇ ವರ್ಷದ ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿ ಹೈಪ್ಲೈಯರ್ಸ್ ಕಪ್-2025ರ 2ನೇ ದಿನದ ಪಂದ್ಯಾವಳಿಯಲ್ಲಿ ಒಟ್ಟು 5 ತಂಡಗಳು ಕ್ವಾರ್ಟರ್ ಫೈನಲ್ ಹಂತಕ್ಕೆ ಪ್ರವೇಶ ಪಡೆಯಿತು.

ಬಿಟ್ಟಂಗಾಲ, ಬಿ.ಶೆಟ್ಟಿಗೇರಿ ಮತ್ತು ಹಾತೂರು ಗ್ರಾ. ಪಂ. ವ್ಯಾಪ್ತಿಯಲ್ಲಿ ಐನ್ ಮನೆ ಹೊಂದಿರುವ ಕೊಡವ ಕುಟುಂಬ ತಂಡಗಳಿಗಾಗಿ ನಡೆಯುತ್ತಿರುವ ಈ ಕೌಟುಂಬಿಕ ಹಾಕಿ ಪಂದ್ಯಾವಳಿಯಲ್ಲಿ ಸೋಮವಾರ ಚೇoದಂಡ, ಮಳವಂಡ, ಕಳ್ಳಿಚಂಡ, ಚೇಂದಿರ ಮತ್ತು ಕೊಂಗಂಡ ತಂಡಗಳು ಮುಂದಿನ ಹಂತಕ್ಕೆ ಪ್ರವೇಶ ಪಡೆಯಿತು.

ಮೊದಲ ಪಂದ್ಯದಲ್ಲಿ ಚೇoದಂಡ ತಂಡವು ತೀತಮಾಡ ತಂಡವನ್ನು 5-1 ಗೋಲುಗಳಿಂದ ಸೋಲಿಸಿತು. ವಿಜೇತ ತಂಡದ ಪರವಾಗಿ ಅತಿಥಿ ಆಟಗಾರ ಮೇರಿಯಂಡ ರಾಯ್ 17ನೇ ಮತ್ತು 35ನೇ ನಿಮಿಷದಲ್ಲಿ, ಮತ್ತೋರ್ವ ಅತಿಥಿ ಆಟಗಾರ ತಿಮ್ಮಣ್ಣ 19ನೇ ಮತ್ತು 26ನೇ ನಿಮಿಷದಲ್ಲಿ ಹಾಗೂ ತಂಡದ ಬೋಪಣ್ಣ 29ನೇ ನಿಮಿಷದಲ್ಲಿ ಗೋಲು ದಾಖಲಿಸಿ ತಂಡದ ಗೆಲುವಿನ ಅಂತರ ಹೆಚ್ಚಿಸಿದರು. ಪರಾಜಿತ ತೀತಮಾಡ ತಂಡದ ಪರವಾಗಿ ಅತಿಥಿ ಆಟಗಾರ ಕಾರ್ಯಪ್ಪ 12ನೇ ನಿಮಿಷದಲ್ಲಿ ಏಕೈಕ ಗೋಲು ಬಾರಿಸಿದರು.

2ನೇ ಪಂದ್ಯದಲ್ಲಿ ಮಳವಂಡ ತಂಡವು ಕೇಳಪಂಡ ತಂಡವನ್ನು 3-1 ಗೋಲುಗಳಿಂದ ಮಣಿಸಿತು. ವಿಜೇತ ತಂಡದ ಪರವಾಗಿ 9ನೇ ನಿಮಿಷದಲ್ಲಿ ಅತಿಥಿ ಆಟಗಾರ ಮುತ್ತಪ್ಪ, 31ನೇ ನಿಮಿಷದಲ್ಲಿ ತಿಮ್ಮಯ್ಯ ಹಾಗೂ 32ನೇ ನಿಮಿಷದಲ್ಲಿ ಮತ್ತೋರ್ವ ಅತಿಥಿ ಆಟಗಾರ ಪ್ರಿನ್ಸ್ ಪೊನ್ನಣ್ಣ ಗೋಲು ದಾಖಲಿಸಿದರೆ, ಪರಾಜಿತ ತಂಡದ ಪರವಾಗಿ 27ನೇ ನಿಮಿಷದಲ್ಲಿ ನಾಣಯ್ಯ ಗೋಲು ಹೊಡೆದರು. 3ನೇ ಪಂದ್ಯದಲ್ಲಿ ಕಳ್ಳಿಚಂಡ ತಂಡವು ಚಂದೂರ ತಂಡವನ್ನು 2-1 ಗೋಲುಗಳಿಂದ ಸೋಲಿಸಿ ಮುಂದಿನ ಹಂತಕ್ಕೆ ಪ್ರವೇಶಿಸಿತು. ಕಳ್ಳಿಚಂಡ ತಂಡದ ಪರವಾಗಿ 25ನೇ ನಿಮಿಷದಲ್ಲಿ ಸಾವನ್ ಹಾಗೂ 31ನೇ ನಿಮಿಷದಲ್ಲಿ ಗಣಪತಿ ಗೋಲು ದಾಖಲಿಸಿದರೆ ಚಂದೂರ ತಂಡದ ಪರವಾಗಿ ಅತಿಥಿ ಆಟಗಾರ ಬೋಪಣ್ಣ 35ನೇ ನಿಮಿಷದಲ್ಲಿ ಗೋಲು ಬಾರಿಸಿದರು.

4ನೇ ಪಂದ್ಯದಲ್ಲಿ ಚೇಂದಿರ ತಂಡವು ಮೇಚಿಯಂಡ ತಂಡವನ್ನು 3-0 ಗೋಲುಗಳಿಂದ ಪರಾಭವಗೊಳಿಸಿತು. ವಿಜೇತ ತಂಡದ ಪರವಾಗಿ 19ನೇ ನಿಮಿಷದಲ್ಲಿ ಬೋಪಣ್ಣ, 35ನೇ ಮತ್ತು 39ನೇ ನಿಮಿಷದಲ್ಲಿ ಅತಿಥಿ ಆಟಗಾರ ದೀಪಕ್ ಗೋಲು ಹೊಡೆದು ತಂಡದ ವಿಜಯದಲ್ಲಿ ನಿರ್ಣಾಯಕ ಪಾತ್ರ ವಹಿಸಿದರು. ದಿನದ ಕೊನೆಯ ಪಂದ್ಯದಲ್ಲಿ ಕೊಂಗಂಡ ತಂಡವು ಕಡೇಮಾಡ ತಂಡವನ್ನು ಟ್ರೈಬ್ರೇಕರ್ ನಲ್ಲಿ 6-5 ಗೋಲುಗಳ ಅಂತರದಿಂದ ಮಣಿಸಿತು. ಪಂದ್ಯದ ದ್ವಿತೀಯಾರ್ಧ ಪೂರ್ಣಗೊಂಡಾಗ ಉಭಯ ತಂಡಗಳು ತಲಾ ಒಂದು ಗೋಲಿನ ಸಮಬಲ ಸಾಧಿಸಿದ್ದರಿಂದ ಟ್ರೈಬ್ರೇಕರ್ ನಲ್ಲಿ ಪಂದ್ಯದ ವಿಜಯ ನಿರ್ಣಯಿಸುವುದು ಅನಿವಾರ್ಯವಾಯಿತು. ಟ್ರೈಬ್ರೇಕರ್ ನಲ್ಲಿ ವಿಜೇತ ತಂಡದ ಪರವಾಗಿ 5 ಗೋಲು ದಾಖಲಾದರೆ, ಪರಾಜಿತ ತಂಡದ ಪರವಾಗಿ 4 ಗೋಲುಗಳಷ್ಟೇ ದಾಖಲಾದವು. ಇದಕ್ಕೂ ಮೊದಲು ಕಡೇಮಾಡ ತಂಡದ ರಚನ್ 37ನೇ ನಿಮಿಷದಲ್ಲಿ ಮೊದಲ ಫೀಲ್ಡ್ ಗೋಲ್ಡ್ ದಾಖಲಿಸಿದರೆ, ಕೊಂಗಂಡ ತಂಡದ ಆಟಗಾರ ಮಹೇಂದ್ರ 39ನೇ ನಿಮಿಷದಲ್ಲಿ ಫೀಲ್ಡ್ ಗೋಲೊಂದನ್ನು ದಾಖಲಿಸಿ ತಂಡದ ಗೋಲಿನ ಅಂತರವನ್ನು ಸಮನಾಗಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಒಲವಿನ ಊಟ ಬಡಿಸಲು ಸಿದ್ಧವಾದ ಅಕ್ಕ ಕೆಫೆ
ಚನ್ನಮ್ಮ ಮೂರ್ತಿ ಉದ್ಘಾಟನಾ ಸಮಾರಂಭಕ್ಕೆ ಬಹಿಷ್ಕಾರ