ಬೆಸ್ಕಾಂ ಅಧಿಕಾರಿ ಯೋಗೇಶ್ ಅವರಿಗೆ ಬೀಳ್ಕೊಡುಗೆ

KannadaprabhaNewsNetwork |  
Published : Jul 13, 2026, 12:15 AM IST
ಹೊಳವನಹಳ್ಳಿ ಬೆಸ್ಕಾಂ ಶಾಖೆಯ ಸಹಾಯಕ ಇಂಜಿನಿಯರ್ ಯೋಗೇಶ್ ಅವರಿಗೆ ಬೀಳ್ಕೊಡಿಗೆ | Kannada Prabha

ಸಾರಾಂಶ

ತಾಲೂಕಿನ ಹೊಳವನಹಳ್ಳಿ ಬೆಸ್ಕಾಂ ಶಾಖೆಯಲ್ಲಿ ಸುಮಾರು ೮ ವರ್ಷಗಳಿಂದ ಸೇವೆ ಸಲ್ಲಿಸಿದ ಸಹಾಯಕ ಎಂಜಿನಿಯರ್ ಯೋಗೇಶ್ ಅವರಿಗೆ ಬೆಸ್ಕಾಂ ಇಲಾಖೆಯ ಸಿಬ್ಬಂದಿ ವರ್ಗಾವಣೆ ಬೀಳ್ಕೊಡುಗೆ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.

ಕನ್ನಡಪ್ರಭ ವಾರ್ತೆ ಕೊರಟಗೆರೆ

ತಾಲೂಕಿನ ಹೊಳವನಹಳ್ಳಿ ಬೆಸ್ಕಾಂ ಶಾಖೆಯಲ್ಲಿ ಸುಮಾರು ೮ ವರ್ಷಗಳಿಂದ ಸೇವೆ ಸಲ್ಲಿಸಿದ ಸಹಾಯಕ ಎಂಜಿನಿಯರ್ ಯೋಗೇಶ್ ಅವರಿಗೆ ಬೆಸ್ಕಾಂ ಇಲಾಖೆಯ ಸಿಬ್ಬಂದಿ ವರ್ಗಾವಣೆ ಬೀಳ್ಕೊಡುಗೆ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.

ಇದೆ ವೇಳೆ ಕೊರಟಗೆರೆ ಬೆಸ್ಕಾಂ ಎಇಇ ಪ್ರಸನ್ನ ಕುಮಾರ್ ಮಾತನಾಡಿ ಸಹಾಯಕ ಎಂಜಿನಿಯರ್ ಯೋಗೇಶ್ ಅವರು ಸುಮಾರು ೮ ವರ್ಷಗಳಿಂದ ಬೆಸ್ಕಾಂ ಇಲಾಖೆಯಲ್ಲಿ ಸೇವೆ ಸಲ್ಲಿಸಿ ಸಾಕಷ್ಟು ಜನಮನ್ನಣೆ ಗಳಿಸಿದ್ದಾರೆ. ಇಂತಹ ಪ್ರಮಾಣಿಕ ಅಧಿಕಾರಿಗಳನ್ನ ಕಳಿಸಿಕೊಡುತ್ತಿರುವುದು ನೋವಿನ ಸಂಗತಿ ಮುಂದಿನ ದಿನಗಳಲ್ಲಿ ಅವರ ಸೇವೆ ಕೊರಟಗೆರೆ ಜನರಿಗೆ ದೊರೆಯಲಿ ಎಂದು ಆಶಿಸುತ್ತೇನೆ ಎಂದು ತಿಳಿಸಿದರು.

ಸಹಾಯಕ ಎಂಜಿನಿಯರ್ ಯೋಗೇಶ್ ಮಾತನಾಡಿ ಕೊರಟಗೆರೆ ಹಾಗೂ ಹೊಳವನಹಳ್ಳಿ ಹೋಬಳಿಯ ಜನರು ಸಹೃದಯರಾಗಿದ್ದು, ನಾನು ಬಂದು ೮ ವರ್ಷಗಳ ಕಳೆದರೂ ಇಲ್ಲಿನ ಜನ ಪ್ರೀತಿ, ವಿಶ್ವಾಸ, ಸ್ನೇಹದಿಂದ ಇಷ್ಟು ವರ್ಷ ನನ್ನ ನೋಡಿಕೊಂಡಿದ್ದೀರ ಯಾವತ್ತು ನಾನು ಈ ತಾಲೂಕಿನ ಜನರನ್ನ ಮರೆಯುವುದಿಲ್ಲ. ಮತ್ತೆ ನನಗೆ ಅವಕಾಶ ದೊರೆತಲ್ಲಿ ಖಂಡಿತ ನಿಮ್ಮ ಸೇವೆ ಮಾಡಲು ಬರುತ್ತೇನೆ. ಇಷ್ಟು ದಿನ ನನಗೆ ಸಹಕಾರ ನೀಡುತ್ತಿದ್ದ ನನ್ನ ಮೇಲಾಧಿಕಾರಿಗಳು, ಸಹದ್ಯೋಗಿಗಳು, ನನ್ನ ಸಿಬ್ಬಂದಿ ಹಾಗೂ ತಾಲೂಕಿನ ಕೊರಟಗೆರೆ, ಹೊಳವನಹಳ್ಳಿ ಜನತೆ ಧನ್ಯವಾದವನ್ನ ತಿಳಿಸಿದರು.

ಇದೆ ಸಂದರ್ಭದಲ್ಲಿ ಬೆಸ್ಕಾಂ ಹಿರಿಯ ಸಹಾಯಕ ನಟರಾಜು, ಶಾಖಾಧಿಕಾರಿ ಮಲ್ಲಯ್ಯ, ಜಬೀವೂಲ್ಲಾ, ಗೋವಿಂದಪ್ಪ ಬೆಸ್ಕಾಂ ಅಧಿಕಾರಿಗಳು ಗುತ್ತಿಗೆದಾರರು ಸೇರಿದಂತೆ ಊರಿನ ಗ್ರಾಮಸ್ಥರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

​ಜಗಳೂರು ತಾಲೂಕಿನ ೨೪ ಕೆರೆಗಳಿಗೆ ಹರಿದ ತುಂಗಭದ್ರೆ
ಜೋಗ ಜಲಪಾತ ವೀಕ್ಷಣೆಗೆ ಮುಗಿಬಿದ್ದ ಜನ