ರುದ್ರಭೂಮಿ ಒತ್ತುವರಿ ತೆರವಿಗೆ ರೈತ ಹನುಮೇಶಿ ಮಲ್ಲಶೆಟ್ಟಿಹಳ್ಳಿ ಆಗ್ರಹ

KannadaprabhaNewsNetwork |  
Published : Jul 12, 2025, 12:32 AM IST
ಕ್ಯಾಪ್ಷನ10ಕೆಡಿವಿಜಿ55 ರುದ್ರಭೂಮಿ ಒತ್ತುವರಿ ತೆರವುಗೊಳಿಸಿ, ಶವಸಂಸ್ಕಾರಕ್ಕೆ ಅವಕಾಶ ಕಲ್ಪಿಸಿಕೊಡುವಂತೆ ದಾವಣಗೆರೆಯಲ್ಲಿ ಸುದ್ದಿಗೋಷ್ಠಿಯ ಮೂಲಕ ಹನುಮೇಶಿ ಮಲ್ಲಶೆಟ್ಟಿಹಳ್ಳಿ ಇಲಾಖೆಯ ಅಧಿಕಾರಿಗಳನ್ನು ಆಗ್ರಹಿಸಿದರು. | Kannada Prabha

ಸಾರಾಂಶ

ಹಿಂದೂ ರುದ್ರಭೂಮಿಯೆಂದು ಜಿಲ್ಲಾಧಿಕಾರಿಗಳು ಪಹಣಿ ಮಾಡುವಂತೆ ಆದೇಶ ನೀಡಿದ್ದು, ಗ್ರಾಮ ಪಂಚಾಯತಿಗೆ ಹಸ್ತಾಂತರಿಸಲಾಗಿದೆ. ಇದೇ ಗ್ರಾಮದ ಚನ್ನಬಸಪ್ಪ, ನಾಗರಾಜಪ್ಪ ಎಂಬುವವರು ಒತ್ತುವರಿ ಮಾಡಿಕೊಂಡಿದ್ದು, ಈಗಾಗಲೇ ಒತ್ತುವರಿ ತೆರವು ಬಗ್ಗೆ, ಸರ್ವೇ ಮಾಡಿಸಿದ್ದು, ಕಾರ್ಯನಿರ್ವಾಹಕ ಅಧಿಕಾರಿಗಳ ನ್ಯಾಯಾಲಯದಲ್ಲಿ ಆದೇಶ ಪಡೆದು ಒತ್ತುವರಿಯನ್ನು ತೆರವು ಮಾಡಿ, ಜನರ ಶವ ಸಂಸ್ಕಾರಕ್ಕೆ ಅಭಿವೃದ್ಧಿ ಪಡಿಸುವ ಮೂಲಕ ಅವಕಾಶ ಮಾಡಿಕೊಡಬೇಕು.

ಕನ್ನಡಪ್ರಭ ವಾರ್ತೆ ದಾವಣಗೆರೆ

ಮಲ್ಲಶೆಟ್ಟಿಹಳ್ಳಿ ಗ್ರಾಮದ ರಿ.ಸ.ನಂ 34ನ್ನು ಹಿಂದೂ ರುದ್ರಭೂಮಿಯೆಂದು ಜಿಲ್ಲಾಧಿಕಾರಿಗಳು ಪಹಣಿ ಮಾಡುವಂತೆ ಆದೇಶ ನೀಡಿದ್ದು, ಗ್ರಾಮ ಪಂಚಾಯತಿಗೆ ಹಸ್ತಾಂತರಿಸಲಾಗಿದೆ. ಇದೇ ಗ್ರಾಮದ ಚನ್ನಬಸಪ್ಪ, ನಾಗರಾಜಪ್ಪ ಎಂಬುವವರು ಒತ್ತುವರಿ ಮಾಡಿಕೊಂಡಿದ್ದು, ಈಗಾಗಲೇ ಒತ್ತುವರಿ ತೆರವು ಬಗ್ಗೆ, ಸರ್ವೇ ಮಾಡಿಸಿದ್ದು, ಕಾರ್ಯನಿರ್ವಾಹಕ ಅಧಿಕಾರಿಗಳ ನ್ಯಾಯಾಲಯದಲ್ಲಿ ಆದೇಶ ಪಡೆದು ಒತ್ತುವರಿಯನ್ನು ತೆರವು ಮಾಡಿ, ಜನರ ಶವ ಸಂಸ್ಕಾರಕ್ಕೆ ಅಭಿವೃದ್ಧಿ ಪಡಿಸುವ ಮೂಲಕ ಅವಕಾಶ ಮಾಡಿಕೊಡಬೇಕು. ಜತೆಗೆ ಹಿಂದೂ ರುದ್ರಭೂಮಿಯನ್ನು ಉಳಿಸಬೇಕು. ಅಲ್ಲದೇ ಯಾವುದೇ ಕಾರಣಕ್ಕೂ ರುದ್ತಭೂಮಿ ಸ್ಥಳವನ್ನು ಬದಲಾಯಿಸಬಾರದು ಎಂದು ರೈತ ಮುಖಂಡ ಹನುಮೇಶಿ ಮಲ್ಲಶೆಟ್ಟಿಹಳ್ಳಿ ಕಂದಾಯ ಇಲಾಖೆಯ ಅಧಿಕಾರಿಗಳನ್ನು ಆಗ್ರಹಿಸಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮನೆಗಳಿಗೆ ಶುದ್ಧ ಕುಡಿಯುವ ನೀರಿನ ಘಟಕ ಮತ್ತು ಓವರ್ ಹೆಡ್ ಟ್ಯಾಂಕ್ ನೀರಿನ ಮಾದರಿಗಳನ್ನು ಸಹಾಯಕ ಕಾರ್ಯಪಾಲಕ ಅಭಿಯಂತರರ ಕಚೇರಿಯ ಶಾಖಾಧಿಕಾರಿಗಳ ಮೂಲಕ ಸಂಗ್ರಹಿಸಿ ಪರೀಕ್ಷಗೆ ಕಳುಹಿಸಿ. ಸದರಿ ನೀರಿನ ಮಾದರಿಗಳ ಪರೀಕ್ಷಾ ವರದಿಯನ್ನು ಶಾಖಾಧಿಕಾರಿಗಳ ಮೂಲಕ ಪಡೆದಿದ್ದು ಸೂಚಿತ ನೀರಿನ ಮಾದರಿಗಳ ನೀರು ಕುಡಿಯಲು ಯೋಗ್ಯವಿರುತ್ತವೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಕುಡಿಯುವ ನೀರು ಸರಬರಾಜು ಮಾಡುತ್ತಿರುವ ಆನಗೋಡು (ತೋಳಹುಣಸೆ) ಬಹುಗ್ರಾಮ ಕುಡಿಯುವ ನೀರು ಹಾಗೂ ಶುದ್ದ ಕುಡಿಯುವ ನೀರಿನ ಘಟಕದ ನೀರು ಕುಡಿಯಲು ಯೋಗ್ಯವಿಲ್ಲವೆಂಬ ಆರೋಪ ಸುಳ್ಳಿನಿಂದ ಕೂಡಿದೆ ಎಂದು ಹೇಳಿದರು.

1982-83 ಮತ್ತು 1985-86ನೇ ಸಾಲಿನಲ್ಲಿ ಮಲ್ಲಶೆಟ್ಟಿಹಳ್ಳಿ ಗ್ರಾಮದ ಬಾಪೂಜಿ ಆಶ್ರಯ ಬಡಾವಣೆಯ ಪಕ್ಕದಲ್ಲಿ ಸುಮಾರು 4-5 ವರ್ಷಗಳ ಹಿಂದೆ ವಸತಿ ಯೋಜನೆಯ ಬಡಾವಣೆ ಆಗಿದ್ದು ಸದರಿ ಬಡಾವಣೆಯಲ್ಲಿ ಬರತಕ್ಕ ನಾಗರೀಕ ಸೌಲಭ್ಯ ನಿವೇಶನ ಹಾಗೂ ಉದ್ಯಾನವನ್ನು ಹಲವರು ಒತ್ತುವರಿ ಮಾಡಿಕೊಂಡಿದ್ದು, ಅದನ್ನು ತಾಲೂಕು ಸರ್ವೇಯರ್ ಮೂಲಕ ಅಳತೆಯನ್ನು 2024 ರಲ್ಲಿ ಸರ್ವೇ ಮಾಡಿಸಿದಾಗ ಮತ್ತು ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆ ನಕ್ಷೆಯನುಸಾರ ಕಂಡುಬಂದ ಒತ್ತುವರಿಯನ್ನು ಭೀಮಪ್ಪ ಎಂಬುವರನ್ನು ಹೊರತುಪಡಿಸಿ ಉಳಿದವರು ತೆರವು ಮಾಡಿದ್ದಾರೆ ಎಂದು ದೂರಿದರು.

ಬೋರ್‌ವೆಲ್ ನೀರು ಮತ್ತು ಬಹುಗ್ರಾಮ ಕುಡಿಯುವ ನೀರಿನ ನಳದ ನೀರನ್ನು ಕುಡಿಯಲು ಬಳಸದಿರಲು ಮತ್ತು ಆರ್‌ಒ ಪ್ಲಾಂಟ್ ನೀರನ್ನು ಮಾತ್ರ ಬಳಸಲು ಸೂಚನೆ ನೀಡಲಾಗಿದೆ. ಇದಲ್ಲದೇ, ಇದನ್ನು ಗ್ರಾಮದ ಮನೆಗಳ, ಜನ ವಸತಿ, ಜನನಿಬಿಡ ಪ್ರದೇಶದಲ್ಲಿ ಗ್ರಾಮ ಪಂಚಾಯತಿ ಮೂಲಕ ಬಿತ್ತರಿಸಲಾಗಿದೆ ಎಂದು ಮಾಹಿತಿ ನೀಡಿದರು.

ಎಂ.ಎಸ್.ಬಸವರಾಜ್, ಅರ್.ನಾಗರಾಜ್, ಶಿವಕುಮಾರ್, ಹನುಮಂತಪ್ಪ, ಶೇಖರಪ್ಪ, ನಾಗರಾಜ್ ಸಿದ್ದಪ್ಪ ಇತರರು ಇದ್ದರು.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ