ಕನ್ನಡಪ್ರಭ ವಾರ್ತೆ ಬಂಗಾರಪೇಟೆ
ಕೋಲಾರ ಜಿಲ್ಲೆಯಲ್ಲಿ ಹಲವು ತಾಲೂಕುಗಳನ್ನು ರಾಜ್ಯ ಸರ್ಕಾರವೇ ಬರಪೀಡಿತ ತಾಲೂಕೆಂದು ಘೋಷಣೆ ಮಾಡಿದೆ,ಅದರಲ್ಲಿ ಬಂಗಾರಪೇಟೆ ತಾಲೂಕು ಸ್ಥಾನ ಪಡೆದಿದೆ. ಆದರೆ ಬರಪೀಡಿತ ತಾಲೂಕಲ್ಲಿ ಕೈಗೊಳ್ಳಬೇಕಾದ ಪರ್ಯಾಯ ಕಾರ್ಯಗಳು ಮಾತ್ರ ಕೈಗೊಳ್ಳದೆ ಸರ್ಕಾರ ಲೋಕಸಭೆ ಚುನಾವಣೆಯಲ್ಲಿ ತಲೀಣವಾಗಿರುವುದರಿಂದ ಜನ ಜಾನುವಾರುಗಳು ಮೇವು, ಕುಡಿಯಲು ನೀರಿಲ್ಲದೆ ಪರದಾಡುವಂತಾಗಿದೆ.
ಮಳೆ ಕೊರತೆಯಿಂದ ಎಲ್ಲಾ ಕಡೆ ಒಣ ಭೂಮಿ ಕಾಣಿಸಿಕೊಂಡಿದೆ.ಅಂತರ್ಜಲ ಪಾತಾಳಕ್ಕೆ ಕುಸಿದಿರುವುದರಿಂದ ಜನರಿಗೇ ಕುಡಿಯುವ ನೀರಿನ ಅಭಾವ ನಿರ್ಮಾಣವಾಗಿದೆ,ಇನ್ನು ಮೂಖ ಪ್ರಾಣಿಗಳಿಗ ಪಾಡು ಹೇಳ ತೀರದಾಗಿದೆ.ಸಂತೆಗಳಲ್ಲಿ ದನಗಳ ಮಾರಾಟ
ಇನ್ನು ಒಣ ಹುಲ್ಲು ಹಾಕೋನವೆಂದರೆ ಮಳೆ ಇಲ್ಲದೆ ರಾಗಿ, ಹುರಳಿ, ಭತ್ತದ ಒಣ ಹುಲ್ಲನ್ನು ತರಿಸಿಕೊಳ್ಳಬೇಕು. ಆದರೆ ಅಲ್ಲಿಯೂ ಒಣಹುಲ್ಲಿನ ಬೆಲೆ ಗಗನಕ್ಕೇರಿರುವುದರಿಂದ ದುಬಾರಿ ಬೆಲೆ ಕೊಟ್ಟು ಒಣಹುಲ್ಲು ಖರೀದಿಸಲಾಗದೆ ರೈತರು ಮೂಖ ಪ್ರಾಣಿಗಳನ್ನು ಹಸಿವಿನಿಂದ ಸಾಯಿಸಲಾಗದೆ ಕೈಗೆ ಬಂದ ಬೆಲೆಗೆ ಮಾರಾಟ ಮಾಡುವಂತಾಗಿದೆ. ಹೈನೋದ್ಯಮಕ್ಕೆ ಭಾರಿ ಪೆಟ್ಟು
ತಾಲೂಕಿನಲ್ಲಿಯೂ ಬಹುತೇಕ ರೈತರು ಹೈನೋದ್ಯಮವನ್ನು ನಂಬಿ ಜೀವನ ಸಾಗಿಸುತ್ತಿದ್ದಾರೆ.ಆದರೆ ಮಳೆ ಬೆಳೆ ಇಲ್ಲದ ಕಾರಣ ರೈತರು ಹಸುಗಳಿಗೆ ಕಾಲಕಾಲಕ್ಕೆ ನೀರು,ಮೇವು ಪೂರೈಸಲಾಗದೆ ಹಸುಗಳನ್ನು ಪೋಷಣೆ ಮಾಡುವುದು ದುಬಾರಿಯಾಗಿರುವುದರಿಂದ ಹಸುಗಳನ್ನು ಸಾಕಲಾಗದೆ ಮಾರಾಟಕ್ಕೆ ಮುಂದಾಗಿರುವುದರಿಂದ ಹಾಲು ಉತ್ಪಾದನೆಯಲ್ಲಿ ಭಾರಿ ಪ್ರಮಾಣದಲ್ಲಿ ಕುಸಿದಿದೆ.ಸರ್ಕಾರವೇನೋ ತಾಲೂಕನ್ನು ಬರಪೀಡಿತವೆಂದು ಘೋಷಣೆ ಮಾಡಿ ಸುಮ್ಮನಾಗಿದೆ,ಆದರೆ ಜಾನುವಾರುಗಳಿಗೆ ಮೇವು ಲಭ್ಯತೆಗಾಗಿ ಪರ್ಯಾಯ ವ್ಯವಸ್ಥೆ ಮಾಡಿಲ್ಲ,ಗೋಶಾಲೆಗಳನ್ನು ತೆರೆದಿಲ್ಲ,ಜನರೂ ಸಹ ಕೂಲಿಗಾಗಿ ಗುಳೆ ಹೋಗುವುದನ್ನು ತಪ್ಪಿಸಲಿಲ್ಲ,ಸರ್ಕಾರ ಜನರ ಭವಣೆ ಮರೆತು ಚುನಾವಣೆಯ ಗುಂಗಿನಲ್ಲಿರುವುದರಿಂದ ಜನರು ನಿರಾಶೆಗೊಂಡಿದ್ದಾರೆ.