41ನೇ ದಿನಕ್ಕೆ ಕಾಲಿಟ್ಟ ಜಂಗಮಕೋಟೆ ಕೈಗಾರಿಕಾ ವಲಯ ಕೃಷಿ ಭೂಮಿ ಭೂಸ್ವಾಧೀನ ಕೈಬಿಡಲು ಅನಿರ್ದಿಷ್ಟ ಹೋರಾಟ
ಜಿಲ್ಲೆಯ ಜಂಗಮಕೋಟೆ ಕೈಗಾರಿಕಾ ವಲಯ ನಿರ್ಮಾಣಕ್ಕೆ ರೈತರ ಕೃಷಿ ಭೂಮಿ ಬಳಸಬೇಡಿ. ನಮ್ಮ ಭೂಮಿ ನಮ್ಮ ಹಕ್ಕು ಎನೇ ಆದರೂ ಭೂಮಿ ಕೊಡಲ್ಲ ಎಂದು ಜಿಲ್ಲಾಡಳಿತ ಭವನದ ಮುಂದೆ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ದಲಿತಪರ ಹೋರಾಟಗಾರರ ಅನಿರ್ದಿಷ್ಟ ಹೋರಾಟಕ್ಕೆ 41ನೇ ದಿನಕ್ಕೆ ಕಾಲಿಟ್ಟಿತು.
ಜಿಲ್ಲಾಡಳಿತ ಭವನದ ಮುಂದೆ ಧರಣಿ ನಡೆಸುತಿದ್ದ ರೈತರು ದಿಢೀರನೆ ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿರುವ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಅವರ ಗೃಹ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.ಧರಣಿ ಪ್ರಾರಂಭಿಸಿ 40 ದಿನವಾಗಿದ್ದರೂ ಉಸ್ತುವಾರಿ ಸಚಿವರು ಮಾತ್ರ ಧರಣಿ ನಿತರ ರೈತರನ್ನು ಮಾತನಾಡಿಸಿಲ್ಲ. ಅವರ ಕಷ್ಟ ಸುಖ ಕೇಳಿಲ್ಲ ಎಂದುಜಂಗಮಕೋಟೆ ಹೋಬಳಿಯ 13 ಹಳ್ಳಿಗಳ ರೈತರು ಮತ್ತು ರೈತ ಮಹಿಳೆಯರು ತಮ್ಮ ಭೂಮಿಗಾಗಿ ಧರಣಿ ಗೃಹ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಇದುವರೆಗೂ ಯಾವುದೇ ಜನಪ್ರತಿನಿಧಿಗಳು, ಶಾಸಕರಾಗಲಿ, ಸಚಿವರಾಗಲಿ ರೈತರನ್ನು ಸಂಪರ್ಕ ಮಾಡಲಿಲ್ಲ. ಏ. 06 ರಂದು ರೈತರ ಭೂಮಿಗೆ ಬೆಲೆ ನಿಗದಿ ಮಾಡಲು ನೋಟಿಸ್ ಜಾರಿ ಮಾಡಿರುತ್ತಾರೆ. ಆದ್ದರಿಂದ ರೈತರು ಬೆಳಿಗ್ಗೆ ಹೋರಾಟದ ಜಾಗವಾದ ಜಿಲ್ಲಾಧಿಕಾರಿಗಳ ಕಚೇರಿ ಎದುರು ರಸ್ತೆ ತಡೆಯುವ ಕಾರ್ಯಕ್ರಮವನ್ನು ಹಮ್ಮಿಕೊಂಡು, ರಸ್ತೆ ತಡೆಯನ್ನು ನಡೆಸಿದಾಗ ಜಿಲ್ಲಾಧಿಕಾರಿಗಳು ಆಗಮಿಸಿ ಕೆಐಎಡಿಬಿ ಭೂಮಿ ವಶಪಡಿಸಿಕೊಳ್ಳುವ ಮೊದಲು ರೈತರ ಒಪ್ಪಿಗೆ ಪಡೆದೇ ವಶಪಡಿಸಿಕೊಳ್ಳುತ್ತಾರೆ. ರೈತರ ಒಪ್ಪಿಗೆ ಇಲ್ಲದೇ ಯಾವುದೇ ಭೂಮಿ ವಶಪಡಿಸಿ ಕೊಳ್ಳಲಾಗದು. ಕೆಐಎಡಿಬಿ ಭೂಮಿ ವಶಪಡಿಸಿಕೊಳ್ಳುವ ಪ್ರಕ್ರಿಯೆ ವಿರೋಧಿಸಿ ನ್ಯಾಯಾಲಯದಲ್ಲಿ ದಾವೆ ಇರುವುದರಿಂದ ನ್ಯಾಯಾಲಯದ ತೀರ್ಪಿಗೆ ಕಾಯಬೇಕು ಎಂದು ತಿಳಿಸಿದ್ದರು. ಆದರೆ ಕೆಐಎಡಿಬಿ ಭೂಮಿ ವಶಪಡಿಸಿಕೊಳ್ಳುವ ಭೂಮಿಗೆ ಬೆಲೆ ನಿಗದಿ ಸಹಾ ಮಾಡಿದೆ ಎಂದರು.
ಸಿಕೆಬಿ-1 ಜಿಲ್ಲೆಯ ಜಂಗಮಕೋಟೆ ಕೈಗಾರಿಕ ವಲಯ ನಿರ್ಮಾಣಕ್ಕೆ ರೈತರ ಕೃಷಿ ಭೂಮಿ ನೀಡುವುದಕ್ಕೆ ವಿರೋಧಿಸಿ ಪ್ರತಿಭಟನಾ ರೈತರು ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿರುವ ಸಚಿವ ಡಾ.ಎಂ ಸಿ ಸುಧಾಕರ್ ಗೃಹ ಕಛೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು