ಕನ್ನಡಪ್ರಭ ವಾರ್ತೆ ಮೈಸೂರು
ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ರಾಜ್ಯ ವಲಯ ಯೋಜನೆಯಡಿ ಜಿಲ್ಲೆಯ ರೈತ/ರೈತ ಮಹಿಳೆಯರಿಗೆ ಜೇನು ಸಾಕಾಣಿಕೆ-ತಂತ್ರಜ್ಞಾನ, ಕೃಷಿಯಲ್ಲಿ ಪ್ರಾಮುಖ್ಯತೆ, ಜೇನು ಉತ್ಪಾದನೆ, ಸಂಸ್ಕರಣೆ ಮತ್ತು ಮಾರುಕಟ್ಟೆ ಅವಕಾಶಗಳು ಕುರಿತು ಏರ್ಪಡಿಸಿದ ಮೂರು ದಿನಗಳ ತರಬೇತಿ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿ ಮಾತನಾಡಿದರು.
ಕೃಷಿಯಲ್ಲಿ ಅತಿಯಾದ ರಾಸಾಯನಿಕಗಳ ಬಳಕೆಯಿಂದ ಜೇನುನೊಣಗಳ ನೈಸರ್ಗಿಕ ವಾಸಸ್ಥಾನಕ್ಕೆ ಧಕ್ಕೆ ಉಂಟಾಗುವುದರಿಂದ ಸ್ವಾಭಾವಿಕ ಜೇನುನೊಣಗಳ ಸಂತತಿ ಕಡಿಮೆಯಾಗುತ್ತಿದೆ. ಆದ್ದರಿಂದ ರೈತರು ಸಾವಯವ ಕೃಷಿಗೆ ಹೆಚ್ಚು ಪ್ರಾಮುಖ್ಯತೆ ನೀಡುವಂತೆ ಸಲಹೆ ನೀಡಿದರು.ಉಪ ಕೃಷಿ ನಿರ್ದೇಶಕ ಕೆ. ನಾಗರಾಜು ಅವರು, ಕೃಷಿಯಲ್ಲಿ ಮಿತ್ರ ಕೀಟಗಳ ಮಹತ್ವ ಮತ್ತು ಸಸ್ಯ ಸಂರಕ್ಷಣೆಯಲ್ಲಿ ಮಿತ್ರ ಕೀಟಗಳ ಪಾತ್ರ ಬಗ್ಗೆ ಮಾಹಿತಿ ನೀಡಿದರು.
ನಿವೃತ್ತ ಬ್ಯಾಂಕ್ ವ್ಯವಸ್ಥಾಪಕ ಡಿ.ಟಿ. ವೆಂಕಟೇಶ್ ಅವರು, ರೈತರಲ್ಲಿ ಆರ್ಥಿಕ ಸಾಕ್ಷರತೆ ಮೂಡಿಸುವುದು ಹಾಗೂ ಬ್ಯಾಂಕ್ ವ್ಯವಹಾರಗಳ ಕುರಿತು ಮಾಹಿತಿ ತಿಳಿಸಿದರು.
ಜೇನು ಕೃಷಿಕರಾದ ಆರ್. ನಂದಿನಿ ಅವರು, ಜೇನು ಸಾಕಾಣಿಕೆಯಲ್ಲಿ ಆದಾಯ ಉತ್ಪನ್ನ ಚಟುವಟಿಕೆಗಳು, ಪ್ರಾತ್ಯಕ್ಷಿಕೆ, ಜೇನುಗೂಡು, ಜೇನು ನೊಣ ಸಾಕಾಣಿಕೆ, ಎಚ್ಚರಿಕೆ ಹಾಗೂ ನಿರ್ವಹಣಾ ಕ್ರಮಗಳು ಮತ್ತು ಕ್ಷೇತ್ರ ಮಟ್ಟದಲ್ಲಿ ಜೇನಿನ ಪ್ರಭೇದಗಳನ್ನು ಗುರುತಿಸುವುದು ಜೇನು ಪೆಟ್ಟಿಗೆ ನಿರ್ವಹಣೆ ಮತ್ತು ಜೇನು ತುಪ್ಪ ಕೊಯ್ಲು ಮಾಡುವುದರ ಬಗ್ಗೆ ಮಾಹಿತಿ ನೀಡಿದರು.
ಹೆಬ್ಬಾಳು ಕೈಗಾರಿಕಾ ವಲಯದಲ್ಲಿರುವ ಮ್ಯಾಕ್ ಬೀ9 ಎಲಿಗೆನ್ಸಿ ಸಂಸ್ಥೆಗೆ ಕ್ಷೇತ್ರ ಭೇಟಿ ನೀಡಲಾಯಿತು. ಸಂಸ್ಥೆಯ ಮುಖ್ಯಸ್ಥ ಟಿ.ಜಿ. ಪ್ರಸಾದ್ ಅವರು, ತಮ್ಮ ಸಂಸ್ಥೆಯಿಂದ ದೊರೆಯುವ ಸೌಲಭ್ಯಗಳ ಕುರಿತು ವಿವರಿಸಿದರು.