ಸಂಸದ ಬಿವೈಆರ್‌ ನೇತ್ತೃತ್ವದಲ್ಲಿ ಸಾಗುವಳಿದಾರರ ಪ್ರತಿಭಟನೆ

KannadaprabhaNewsNetwork |  
Published : Nov 24, 2025, 01:45 AM IST
ಸಾಗುವಳಿದಾರರನ್ನು ತೆರವುಗೊಳಿಸಲು ಮುಂದಾದ ಅರಣ್ಯಾಧಿಕಾರಿಗಳ ವಿರುದ್ದ ಶಿಕಾರಿಪುರ ಅರಣ್ಯ ಇಲಾಖೆ ಮುಂಬಾಗ ಸಂಸದ ರಾಘವೇಂದ್ರ ನೇತೃತ್ವದಲ್ಲಿ ಸಾಗುವಳಿದಾರ ರೈತರು ಪ್ರತಿಭಟಿಸಿ ಘೋಷಣೆ ಹಾಕಿದರು. | Kannada Prabha

ಸಾರಾಂಶ

ಅರಣ್ಯ ಇಲಾಖೆ ಅಧಿಕಾರಿಗಳು ಸುದೀರ್ಘ ಕಾಲದ ಸಾಗುವಳಿದಾರರನ್ನು ಬಲವಂತವಾಗಿ ತೆರವುಗೊಳಿಸುವುದನ್ನು ಖಂಡಿಸಿ ಪಟ್ಟಣದ ಅರಣ್ಯ ಇಲಾಖೆ ಕಚೇರಿಗೆ ಸಂಸದ ರಾಘವೇಂದ್ರ ನೇತೃತ್ವದಲ್ಲಿ ಸಾಗುವಳಿದಾರರು ಆಗಮಿಸಿ ಅರಣ್ಯಾಧಿಕಾರಿಗಳ ವಿರುದ್ಧ ಘೋಷಣೆ ಹಾಕಿ ಪ್ರತಿಭಟಿಸಿದ ಘಟನೆ ನಡೆದಿದೆ.

ಶಿಕಾರಿಪುರ: ಅರಣ್ಯ ಇಲಾಖೆ ಅಧಿಕಾರಿಗಳು ಸುದೀರ್ಘ ಕಾಲದ ಸಾಗುವಳಿದಾರರನ್ನು ಬಲವಂತವಾಗಿ ತೆರವುಗೊಳಿಸುವುದನ್ನು ಖಂಡಿಸಿ ಪಟ್ಟಣದ ಅರಣ್ಯ ಇಲಾಖೆ ಕಚೇರಿಗೆ ಸಂಸದ ರಾಘವೇಂದ್ರ ನೇತೃತ್ವದಲ್ಲಿ ಸಾಗುವಳಿದಾರರು ಆಗಮಿಸಿ ಅರಣ್ಯಾಧಿಕಾರಿಗಳ ವಿರುದ್ಧ ಘೋಷಣೆ ಹಾಕಿ ಪ್ರತಿಭಟಿಸಿದ ಘಟನೆ ನಡೆದಿದೆ. ತಾಲೂಕಿನ ಎರೇಕೊಪ್ಪ, ಹರಿಹರಪುರ ಗ್ರಾಮದ ರೈತರಾದ ಕಲ್ಲೇಶಪ್ಪ, ಲಕ್ಷ್ಮಣ, ಗಿರೀಶಣ್ಣ ಎಂಬುವವರಿಗೆ ಸೇರಿದ ಒಂಬತ್ತು ಎಕರೆ ಬಗರ್ ಹುಕುಂ ಜಮೀನಿಗೆ ಅಂಬ್ಲಿಗೊಳ ವಲಯ ಅರಣ್ಯ ಇಲಾಖೆಯ ಅಧಿಕಾರಿಗಳು ಜೆಸಿಬಿ ಮುಖಾಂತರ ಟ್ರಂಚ್ ಹೊಡೆದು ತೆರವುಗೊಳಿಸಲು ಧಾವಿಸಿದಾಗ ಸಮೀಪದ ಹೋತನಕಟ್ಟೆ ಗ್ರಾಮದ ಮುಖಂಡ ಮಲ್ಲಿಕಾರ್ಜುನ್ ರೆಡ್ಡಿ, ಹನುಮಂತಪ್ಪ, ಮಧು, ನಿಸಾರ್, ದರ್ಶನ್ ಗೌಡ, ಕಿರಣ್ ಗೌಡ, ಭೋಜರಾಜು ಮತ್ತಿತರರು ಜಮೀನಿಗೆ ಭೇಟಿ ನೀಡಿ ಜೆಸಿಬಿಯನ್ನು ತಡೆದು ಪ್ರತಿಭಟಿಸಿದರು. ನಂತರ ಪಟ್ಟಣದ ವಲಯ ಅರಣ್ಯ ಅಧಿಕಾರಿಗಳ ಕಚೇರಿಗೆ ಸಂಸದ ರಾಘವೇಂದ್ರ ನೇತೃತ್ವದಲ್ಲಿ ನೂರಾರು ರೈತರು ಆಗಮಿಸಿ ಅಧಿಕಾರಿಗಳ ವಿರುದ್ಧ ಘೋಷಣೆ ಹಾಕಿ ಪ್ರತಿಭಟಿಸಿದರು.

ಈ ವೇಳೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡ ಸಂಸದ ರಾಘವೇಂದ್ರ ಮಾತನಾಡಿ, ಒಬ್ಬ ರೈತರಿಗೆ 3 ಎಕರೆಯಂತೆ ಮೂರು ಜನ ಅಣ್ಣ ತಮ್ಮಂದಿರು ಗ್ರಾಮದಲ್ಲಿ 9 ಎಕರೆ ಸಾಗುವಳಿ ಭೂಮಿಯನ್ನು ಹೊಂದಿದ್ದು, ಹಲವಾರು ವರ್ಷಗಳಿಂದ ಉಳಿಮೆ ಮಾಡುತ್ತಿದ್ದಾರೆ. ಹೊಸದಾಗಿ ಒತ್ತುವರಿ ಮಾಡಿಲ್ಲ. ಇದಕ್ಕೆ ಸರ್ಕಾರದ ಒಪ್ಪಿಗೆ ಇದೆ. ಈಗಾಗಲೇ ಇವರು ಫಾರಂ ನಂಬರ್ 50, 54ರಲ್ಲಿ ಅರ್ಜಿ ಸಲ್ಲಿಸಿದ್ದು, ಸ್ಥಳದಲ್ಲಿ ಮನೆಗಳನ್ನು ಕಟ್ಟಿಕೊಂಡು ವಿದ್ಯುತ್ ಕೂಡ ಪಡೆದಿದ್ದಾರೆ. ಅರಣ್ಯ ಸಮಿತಿಗೂ ಅರ್ಜಿ ಸಲ್ಲಿಸಿದ್ದಾರೆ. ಈ ಬಗ್ಗೆ ಪೂರ್ವಾಪರ ವಿಚಾರಿಸದೆ ಏಕಾಏಕಿ ಅಧಿಕಾರಿಗಳು ತೆರವುಗೊಳಿಸುವುದನ್ನು ಖಂಡಿಸುತ್ತೇವೆ ಎಂದರು.

ವಲಯ ಅರಣ್ಯ ಸಂರಕ್ಷಣಾಧಿಕಾರಿ ರವೀಂದ್ರ ನಾಯಕ್ ಮಾತನಾಡಿ, ಸಮರ್ಪಕ ಮಾಹಿತಿ ಕೊರತೆಯಿಂದಾಗಿ ಈಗಾಗಲೇ ಜೆಸಿಬಿಯಿಂದ ತೆಗೆದಿರುವ ಗುಂಡಿಗಳನ್ನು ಮುಚ್ಚುವ ವ್ಯವಸ್ಥೆ ಮಾಡಿಕೊಡಲಾಗುವುದು ಎಂದು ಭರವಸೆ ನೀಡಿದರು. ಈ ಸಂದರ್ಭದಲ್ಲಿ ಎಂಎಡಿಬಿ ಮಾಜಿ ಅಧ್ಯಕ್ಷ ಕೆ.ಎಸ್.ಗುರುಮೂರ್ತಿ, ಡಾ.ಬಿ.ಡಿ.ಭೂಕಾಂತ್, ಟಿಎಪಿಸಿಎಂಎಸ್ ಸದಸ್ಯ ಪಿಳಿಪಿಳಿ ಗಿಡ್ಡಪ್ಪ, ಮಾಜಿ ಅಧ್ಯಕ್ಷ ರಾಘವೇಂದ್ರ, ಡಿಸಿಸಿ ಬ್ಯಾಂಕ್ ನಿರ್ದೇಶಕ ದೂದಿಹಳ್ಳಿ ಬಸವರಾಜ್, ಪುರಸಭಾ ಸದಸ್ಯ ರೇಣುಕಸ್ವಾಮಿ, ಸಾಧಿಕ್ ಪ್ರಶಾಂತ್, ಮಹೇಶ್ ಹುಲ್ಮಾರ್, ಮುಖಂಡ ಸಣ್ಣ ಹನುಮಂತಪ್ಪ ತೊಗರ್ಸಿ, ಚನ್ನವೀರಪ್ಪ, ಹದಡಿ ಮಂಜುನಾಥ್, ಈರಣ್ಣ, ವಿನಯ್ ಸೇಬು, ಪಾಪಯ್ಯ, ಭೋಜರಾಜ ಸಹಿತ ಸಾಗುವಳಿ ನಿರತ ರೈತರ ಕುಟುಂಬಸ್ಥರು ಹಾಜರಿದ್ದರು.

ಸಾಗುವಳಿದಾರರನ್ನು ತೆರವುಗೊಳಿಸಲು ಮುಂದಾದ ಅರಣ್ಯಾಧಿಕಾರಿಗಳ ವಿರುದ್ಧ ಶಿಕಾರಿಪುರ ಅರಣ್ಯ ಇಲಾಖೆ ಮುಂಬಾಗ ಸಂಸದ ರಾಘವೇಂದ್ರ ನೇತೃತ್ವದಲ್ಲಿ ಸಾಗುವಳಿದಾರ ರೈತರು ಪ್ರತಿಭಟಿಸಿ ಘೋಷಣೆ ಹಾಕಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹೈಕೋರ್ಟ್‌ ಹೊಸ ಕಟ್ಟಡಕ್ಕೆ 30 ಎಕ್ರೆಕೋರಿಕೆ:ರಾಜ್ಯ ಸರ್ಕಾರಕ್ಕೆ ನೋಟಿಸ್‌
ಬಿಎಂಐಸಿ ಮರುಪರಿಶೀಲಿಸಿ: ರಾಜ್ಯಕ್ಕೆ ಕೋರ್ಟ್‌ ಸೂಚನೆ