- ರಾಷ್ಟ್ರೀಯ ರೈತ ದಿನಾಚರಣೆ ಮತ್ತು ಸಿರಿಧಾನ್ಯ ಕಾರ್ಯಾಗಾರ ಉದ್ಘಾಟನೆಕನ್ನಡಪ್ರಭ ವಾರ್ತೆ, ಕಡೂರು
ಶನಿವಾರ ಕೃಷಿ ಇಲಾಖೆ ಮತ್ತು ತಾಲೂಕು ಕೃಷಿಕ ಸಮಾಜದಿಂದ ಎಪಿಎಂಸಿ ಆವರಣದಲ್ಲಿ ನಡೆದ ಜಲಾನಯನ ಮೇಳ, ರಾಷ್ಟ್ರೀಯ ರೈತ ದಿನಾಚರಣೆ ಮತ್ತು ಸಿರಿಧಾನ್ಯ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಬರಗಾಲದಿಂದ ನಮ್ಮ ರೈತರು ತತ್ತರಿಸಿದ್ದು, ಅವರಲ್ಲಿ ಹೊಸ ಉತ್ಸಾಹ ಮೂಡಿಸು ವಂತಾಗಬೇಕಿದೆ ಎಂದರು.
ರೈತರ ಬೆಳೆಗಳಿಗೆ ಬೆಲೆಯಿಲ್ಲ. ಸರ್ಕಾರ ಕೆಲ ಬೆಳೆಗಳಿಗೆ ಮಾತ್ರ ಸಹಾಯ ಧನ ನೀಡುತ್ತಿದೆ. ಬೆಳೆಗಳಿಗೆ ಸ್ಥಿರ ಬೆಲೆ ದೊರೆತರೆ ಮಾತ್ರ ರೈತರ ಅಭಿವೃದ್ಧಿಯಾಗುತ್ತದೆ. ಈ ನಿಟ್ಟಿನಲ್ಲಿ ಸರ್ಕಾರ ಚಿಂತಿಸಿ ರೈತ ಮಹಿಳೆ ಯರಿಗೆ ಗುಡಿ ಕೈಗಾರಿಕೆ ಗಳಲ್ಲಿ ತೊಡಗಿಸಿಕೊಳ್ಳಲು ಪ್ರೋತ್ಸಾಹಿಸಬೇಕಿದೆ. ಸರ್ಕಾರಿ ಸವಲತ್ತು ಅರ್ಹರಿಗೆ ಸಿಗಬೇಕು. ಬಡವರ ಆಹಾರವಾಗಿದ್ದ ಸಿರಿಧಾನ್ಯಗಳು ಇಂದು ಸಿರಿವಂತರ ಆಹಾರವಾಗಿದೆ. ಆದರೆ ಅದರ ಲಾಭ ರೈತರಿಗೆ ಸಿಗಬೇಕು ಎಂದರು.ಸಿರಿಧಾನ್ಯಗಳ ಸಂಸ್ಕರಣಾ ಉದ್ಯಮಿ ಮತ್ತು ಕೃಷಿಕ ಕೊಪ್ಪಲು ಮಂಜುನಾಥ್ ಮಾತನಾಡಿ, ಸಿರಿಧಾನ್ಯಗಳ ಸಂಸ್ಕರಣೆ ಮಾಡಿ ಅದನ್ನು ಗ್ರಾಹಕರಿಗೆ ತಲುಪಿಸುವ ನಿಟ್ಟಿನಲ್ಲಿ ಬಹಳಷ್ಟು ಅಧ್ಯಯನ ಮಾಡಿದಾಗ ಎಲ್ಲೆಡೆ ಸಿರಿಧಾನ್ಯಗಳನ್ನು ಪಾಲಿಷ್ ಮಾಡಿ ಮಾರಾಟ ಮಾಡುತ್ತಿದ್ದರಿಂದ ಬಹಳಷ್ಟು ಪೋಷಕಾಂಶ ನಷ್ಟ ವಾಗುವುದನ್ನು ಕಂಡುಕೊಂಡು ಪಾಲಿಷ್ ಮಾಡದೆ ಸಂಸ್ಕರಿಸಿ ಪೂರೈಸುವ ಉದ್ದಿಮೆಯಲ್ಲಿ ತೊಡಗಿಸಿ ಕೊಂಡು ಯಶಸ್ವಿಯಾಗಿದ್ದೇನೆ.
ಪುರಸಭೆ ಮಾಜಿ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಮಾತನಾಡಿ, ರೈತರು ಅನೇಕ ಕಷ್ಟಗಳ ನಡುವೆಯೂ ಸ್ವಾಭಿಮಾನಿಗಳಾಗಿ ಬದುಕುತ್ತಿದ್ದಾರೆ. ನಾನು ರೈತನ ಮಗನಾಗಿ ಅನುಭವ ಇದ್ದು ನಮ್ಮ ಶಾಸಕರಾದ ಕೆ ಎಸ್ ಆನಂದ್ ರೈತರ ಪರವಾಗಿದ್ದಾರೆ, ಸರ್ಕಾರವೂ ಅನ್ನದಾತರಿಗೆ ಬೆಂಗಾವಲಾಗಿರಬೇಕು ಎಂದರು.
ಕೃಷಿ ಇಲಾಖೆ ಜಂಟಿ ನಿರ್ದೇಶಕರಾದ ಸುಜಾತ, ಪುರಸಭೆ ಸದಸ್ಯರಾದ ಕೆ.ಎಂ.ಮೋಹನ್ ಕುಮಾರ್, ಪಂಚನಹಳ್ಳಿ ಪ್ರಸನ್ನ, ರವಿ, ಶೆಟ್ಟಿಹಳ್ಳಿ ಮಲ್ಲಿಕಾರ್ಜುನ್, ತೋಟಗಾರಿಕೆ ಉಪ ನಿರ್ದೇಶಕಿ ಹಂಸವೇಣಿ, ಹಿರಿಯ ತೋಟಗಾರಿಕೆ ಸಹಾಯಕ ನಿರ್ದೇಶಕ ಜಯದೇವ್, ಕೃಷಿ ಸಹಾಯಕ ನಿರ್ದೇಶಕ ಅಶೋಕ್, ರೈತ ಸಂಘದ ಜಿಲ್ಲಾಧ್ಯಕ್ಷ ಮನ್ಸೂರ್ ಖಾನ್, ರವಿ ತಾಂತ್ರಿಕ ಅಧಿಕಾರಿ ಹರೀಶ್, ಚಂದ್ರು ಇದ್ದರು.
ನಾನು ರೈತನ ಮಗ ಹಾಗಾಗಿ ಅವರ ಸಂಕಷ್ಟಗಳ ಅರಿವಿದೆ. ಕೊಬ್ಬರಿ, ರಾಗಿ, ತೆಂಗು ಬೆಳೆಗಳ ಬೆಲೆ ಕುಸಿದು ಬಯಲು ಪ್ರದೇಶದ ರೈತರಿಗೆ ಆಘಾತವಾಗಿದೆ. ಕೃಷಿ - ತೋಟಗಾರಿಕೆ ಇಲಾಖೆ ಸವಲತ್ತುಗಳನ್ನು ಅಧಿಕಾರಿಗಳು ಖುದ್ದು ಸ್ಥಳ ಪರಿಶೀಲನೆ ಮಾಡಿ ಅರ್ಹರಿಗೆ ನೀಡಬೇಕು. ಇದರಲ್ಲಿ ಯಾವುದೇ ರಾಜಕೀಯ ಬೇಡ. ಅರ್ಹರಿಗೆ ಸೌಲಭ್ಯ ನೀಡಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ.
23ಕೆಕೆಡಿಯು1.
23ಕೆಕೆಡಿಯು1ಎ.ಶಾಸಕ ಕೆ ಎಸ್ ಆನಂದ್ ರವರು ಕಡೂರು ಪಟ್ಟಣದ ಎಪಿಎಂಸಿ ಆವರಣದಲ್ಲಿ ನಡೆದ ರೈತರ ದಿನಾಚರಣೆಯನ್ನು ಉದ್ಘಾಟಿಸಿದರು.