ರೈತರು ಮಿಶ್ರಬೆಳೆ ಕೃಷಿ ಪದ್ಧತಿ ಅನುಸರಿಸಬೇಕು: ಬೀಬಿ ಜಾನ್

KannadaprabhaNewsNetwork |  
Published : May 10, 2026, 01:45 AM IST
ಕ್ಯಾಪ್ಷನ9ಕೆಡಿವಿಜಿ33 ದಾವಣಗೆರೆಯಲ್ಲಿ ಐಕಾಂತಿಕ ಜಾಗತಿಕ ಪಂಗಡದ ವತಿಯಿಂದ ಆಯೋಜಿಸಿದ ಎರಡು ದಿನಗಳ ಪಾರಂಪರಿಕ ಬೀಜೋತ್ಸವ ಮೇಳಕ್ಕೆ ಬೀಜ ಸಂರಕ್ಷಕಿ ಬೀಬಿ ಜಾನ್ ಚಾಲನೆ ನೀಡಿದರು. | Kannada Prabha

ಸಾರಾಂಶ

ರೈತರು ಮತ್ತು ನಾಗರೀಕರು ದೇಶಿ ಬೀಜ ಸಂರಕ್ಷಣೆಯನ್ನು ಪ್ರಧಾನ ಉದ್ದೇಶವನ್ನಾಗಿ ಮಾಡಿಕೊಂಡು ಇಂಥ ಮೇಳ ಆಯೋಜಿಸುವ ಮೂಲಕ ದೇಶಿ ಬೀಜ ಬ್ಯಾಂಕ್ ಸ್ಥಾಪನೆಗೆ ಪ್ರೋತ್ಸಾಹ ದೊರಕುವಂತೆ ಆಗಿದೆ. ಅದರಲ್ಲೂ ಮುಖ್ಯವಾಗಿ ರೈತರು ಮಿಶ್ರಬೆಳೆಯ ವಿಧಾನ ಅನುಸರಿಸಬೇಕು ಎಂದು ಬೀಜ ಸಂರಕ್ಷಕಿ ಬೀಬಿ ಜಾನ್ ಹೇಳಿದ್ದಾರೆ.

- ದಾವಣಗೆರೆಯ ದೃಶ್ಯಕಲಾ ಕಾಲೇಜು ಆವರಣದಲ್ಲಿ ಪಾರಂಪರಿಕ ಬೀಜೋತ್ಸವ ಮೇಳಕ್ಕೆ ಚಾಲನೆ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ ರೈತರು ಮತ್ತು ನಾಗರೀಕರು ದೇಶಿ ಬೀಜ ಸಂರಕ್ಷಣೆಯನ್ನು ಪ್ರಧಾನ ಉದ್ದೇಶವನ್ನಾಗಿ ಮಾಡಿಕೊಂಡು ಇಂಥ ಮೇಳ ಆಯೋಜಿಸುವ ಮೂಲಕ ದೇಶಿ ಬೀಜ ಬ್ಯಾಂಕ್ ಸ್ಥಾಪನೆಗೆ ಪ್ರೋತ್ಸಾಹ ದೊರಕುವಂತೆ ಆಗಿದೆ. ಅದರಲ್ಲೂ ಮುಖ್ಯವಾಗಿ ರೈತರು ಮಿಶ್ರಬೆಳೆಯ ವಿಧಾನ ಅನುಸರಿಸಬೇಕು ಎಂದು ಬೀಜ ಸಂರಕ್ಷಕಿ ಬೀಬಿ ಜಾನ್ ಹೇಳಿದರು.

ನಗರದ ದೃಶ್ಯಕಲಾ ಕಾಲೇಜು ಆವರಣದಲ್ಲಿ ಐಕಾಂತಿಕ ಜಾಗತಿಕ ಪಂಗಡದ ವತಿಯಿಂದ ಹಮ್ಮಿಕೊಂಡಿದ್ದ 2 ದಿನಗಳ ಪಾರಂಪರಿಕ ಬೀಜೋತ್ಸವ ಮೇಳಕ್ಕೆ ಶನಿವಾರ ಚಾಲನೆ ನೀಡಿ ಅವರು ಮಾತನಾಡಿದರು. ದೇಶಿ ಬೀಜ ಸಂರಕ್ಷಣೆ ವಿಚಾರದಲ್ಲಿ ಸರ್ಕಾರವು ಸಹಕಾರ ನೀಡಿದರೆ, ಸಾವಯವ ಕೃಷಿ ಮತ್ತು ಬೀಜ ಸಂರಕ್ಷಣೆಗೆ ಹೆಚ್ಚಿನ ಉತ್ತೇಜನ ಸಿಗಲಿದೆ ಎಂದರು.

ಪ್ರತಿ ಎಕರೆ ಭೂಮಿಯಲ್ಲಿ ವಿವಿಧ ಧಾನ್ಯಗಳನ್ನು ಬೆಳೆಸಿ ಭೂಮಿಯ ಫಲವತ್ತತೆ ಮತ್ತು ಆಹಾರದ ಆರೋಗ್ಯವನ್ನು ಕಾಪಾಡುವ ಕೆಲಸ ಮಾಡಲಾವುದು. ನಾವೇ ಬೆಳೆಯುವ ಸಿರಿಧಾನ್ಯಗಳನ್ನು ಖರೀದಿ ಮಾಡಿ ಮೌಲ್ಯವರ್ಧನೆ ಮಾಡಿ ಮಾರಾಟ ಮಾಡುವ ದೇವಧಾನ್ಯ ರೈತ ಉತ್ಪಾದಕರ ಕಂಪನಿಯನ್ನು 2023ರ ಕೊನೆಯಲ್ಲಿ ಸ್ಥಾಪಿಸಿದ್ದೇವೆ. ಈಗ ಅದು ಒಂದೂವರೆ ಕೋಟಿ ರು. ವಹಿವಾಟು ನಡೆಸಿ ಯಶಸ್ಸನ್ನು ಕಂಡಿದೆ ಎಂದು ತಿಳಿಸಿದರು.

ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಟಿ.ಎನ್. ದೇವರಾಜ್ ಮಾತನಾಡಿ, ಆಹಾರ ಸಾಮಗ್ರಿಗಳ ತಲ್ಲಣಿತ ಉತ್ಪತ್ತಿ ಮತ್ತು ಅವರ ಸಾಗಣೆ ದೂರಗಳನ್ನು ಗಮನಿಸಿದರೆ, ಝೀರೋ ಫುಡ್ ಮೈಲ್ಸ್ (ಸ್ಥಳೀಯ ಆಹಾರ ಬಳಕೆ) ಮಾಡುವ ಅಗತ್ಯತೆ ಹೆಚ್ಚಿದೆ. ಆಹಾರವನ್ನು ತಯಾರಿಸಲು ಬಳಸುವ ವಸ್ತುಗಳು ಸರಾಸರಿ ಸಾವಿರ ಕಿ.ಮೀ.ಗಿಂತ ಹೆಚ್ಚು ದೂರದಿಂದ ಬಂದಾಗ ಅದರೊಂದಿಗೆ ಹೆಚ್ಚುವರಿ ವೆಚ್ಚಗಳು ಹೇಗೆ ಉತ್ಪತ್ತಿಯಾಗುತ್ತವೆ, ಇದನ್ನು ತಡೆಯಲು ಸಾಧ್ಯವಾದಷ್ಟು ಸ್ಥಳೀಯವಾಗಿ ಬೆಳೆಯಲಾದ ಉತ್ಪನ್ನಗಳಿಂದ ತಯಾರಿಸಲು ಪ್ರೇರಣೆ ನೀಡಬೇಕಿದೆ ಎಂದರು.

ಸೃಜನಶೀಲ, ಪರಿಸರಸ್ನೇಹಿ ಮತ್ತು ಸಮುದಾಯಮುಖಿ ಜೀವನಶೈಲಿಯನ್ನು ಈ ಕಾರ್ಯಕ್ರಮ ಉತ್ತೇಜಿಸುತ್ತವೆ ಅನ್ನುವುದನ್ನು ನಾವೆಲ್ಲರೂ ಒಪ್ಪಿಕೊಂಡಿದ್ದೇವೆ ಎಂದು ಹೇಳಿದರು.

ಕೃಷಿ ಬರಹಗಾರ ಶಿವಾನಂದ ಕಳವೆ, ಐಕಾಂತಿಕ ಜಾಗತಿಕ ಪಂಗಡದ ಮುಖ್ಯಸ್ಥ ರಾಘವ್, ದೃಶ್ಯಕಲಾ ವಿಶ್ವವಿದ್ಯಾನಿಲಯ ಪ್ರಾಂಶುಪಾಲ ಸತೀಶ್ ವಲ್ಲೇಪುರೆ ಮತ್ತಿತರರಿದ್ದರು.

- - -

-9ಕೆಡಿವಿಜಿ33:

ದಾವಣಗೆರೆಯಲ್ಲಿ ಐಕಾಂತಿಕ ಜಾಗತಿಕ ಪಂಗಡದ ವತಿಯಿಂದ ಆಯೋಜಿಸಿದ 2 ದಿನಗಳ ಪಾರಂಪರಿಕ ಬೀಜೋತ್ಸವ ಮೇಳಕ್ಕೆ ಬೀಜ ಸಂರಕ್ಷಕಿ ಬೀಬಿ ಜಾನ್ ಚಾಲನೆ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಟಿ.ಬೇಕುಪ್ಪೆ ಡೇರಿಯಲ್ಲಿ ಅವ್ಯವಹಾರದ ವಿರುದ್ಧ ಕ್ರಮ ಕೈಗೊಳ್ಳಲು ಆಗ್ರಹ
ಹೊಗೇನಕಲ್ನಲ್ಲಿ ಆಡಲು ಹೋದ ಹೊಸಕೋಟೆ ಯುವಕ ನೀರುಪಾಲು