ಜಗಳೂರು: ಫಸಲ್ ವಿಮಾ ಯೋಜನೆಯಡಿ ನೋಂದಣಿಯಾಗಿದ್ದ ರೈತರಿಗೆ ಶೀಘ್ರವೇ ವಿಮೆ ಕಂತಿನ ಹಣ ಬಿಡುಗಡೆಯಾಗಲಿದೆ. ಯಾವುದೇ ರೈತರು ಅವಸರಪಟ್ಟು ಮಧ್ಯವರ್ತಿಗಳಿಗೆ ಹಣ ನೀಡಬಾರದು ಎಂದು ರೈತ ಮುಖಂಡ, ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಬಿ.ಕಲ್ಲೇರುದ್ರೇಶ್ ಹೇಳಿದರು.
ಕಳೆದ ವಾರ ದೆಹಲಿಯಲ್ಲಿ ಕೇಂದ್ರ ಕೃಷಿ ಸಚಿವಾಲಯದ ಸರ್ಕಾರದ ಅಧಿಕೃತ ವಿಮಾ ಕಂಪನಿ ಇಲಾಖೆಗೆ ಭೇಟಿ ನೀಡಿ ವಿವರಣಾ ವರದಿ ಪಡೆದುಕೊಂಡಿದ್ದು, ಚುನಾವಣೆ ನೀತಿ ಸಂಹಿತೆಯಿಂದಾಗಿ ತಾಂತ್ರಿಕ ದೋಷಗಳನ್ನು ಸರಿಪಡಿಸಲು ಸಾಧ್ಯವಾಗಿರಲಿಲ್ಲ. ಇನ್ನು ಕೆಲವು ಕಡೆ ಬೆಳೆ ನೋಂದಣಿಯಲ್ಲಿ ಖಾತೆ ನಂಬರ್ ಬದಲಾವಣೆಯಾಗಿದ್ದ ಕಾರಣ ವಿಮಾ ಕಂತು ಪಾವತಿ ಆಗುವಲ್ಲಿ ವಿಳಂಬವಾಗಿದೆ ಎಂದು ರಾಜ್ಯ ಕೃಷಿ ಇಲಾಖೆ ಹಿರಿಯ ಸರ್ಕಾರದ ಉಪ ಕಾರ್ಯದರ್ಶಿ ಅವರಿಂದ ಮಾಹಿತಿ ಲಭ್ಯವಾಗಿದೆ. ಆದಕಾರಣ, ಅನಗತ್ಯವಾಗಿ ರೈತರು ಮಧ್ಯವರ್ತಿಗಳ ಮಾತಿಗೆ ಮರಳಾಗಿ ಹಣ ನೀಡಬೇಡಿ ಎಂದು ಮನವಿ ಮಾಡಿದರು.
ಜೆಡಿಎಸ್ ಮಹಿಳಾ ಘಟಕ ಅಧ್ಯಕ್ಷೆ ಸುನಂದಮ್ಮ ಯಲ್ಲಪ್ಪ, ಗ್ರಾಪಂ ಮಾಜಿ ಅಧ್ಯಕ್ಷ ಗೌರಮ್ಮನಹಳ್ಳಿ ರಾಜಣ್ಣ, ದೇವಿಕೆರೆ ಬಂಡೇರಾತಿಪ್ಪೇಸ್ವಾಮಿ ಇತರರು ಇದ್ದರು.- - - -16ಜೆಎಲ್.ಆರ್.1: