ಅಂಶಿ ಪ್ರಸನ್ನಕುಮಾರ್
ಆನೆ, ಹಂದಿಗಳ ಕಾಟಕ್ಕೆ ಹೆದರಿ ಇವರು ಬೆಳೆಯೋದು ಶುಂಠಿ ಮಾತ್ರ, ಕಳೆದ ವರ್ಷ ಬಂಪರ್ ಬೆಲೆ ಸಿಕ್ಕಿತ್ತು. ಆದರೆ ಈ ಬಾರಿ ಮಾರುಕಟ್ಟೆಯಲ್ಲಿ ದರ ಕುಸಿದಿದೆ.
- ಇದು ಸರಗೂರು ತಾಲೂಕು ಕಂದಲಿಕೆ ಹೋಬಳಿ ಹುಲ್ಲೇಮಾಳದ ರೈತ ರವಿ ಅವರ ಕಥೆ. ಕಾಡಂಚಿನಲ್ಲಿ ಬರುವ ದಡದಹಳ್ಳಿ ಗೇಟ್ ಬಳಿ ಅವರು 14 ಎಕರೆ ಜಮೀನಿನಲ್ಲಿ ಶುಂಠಿ ಬೆಳೆಯುತ್ತಾರೆ. ಇದರಲ್ಲಿ ಸ್ವಂತ 7-8 ಎಕರೆ. ಉಳಿಕೆ ಗುತ್ತಿಗೆ ಜಮೀನು.ನಾವು ಬಾಳೆ, ಕಬ್ಬು, ಭತ್ತ ಬೆಳೆಯಲು ಆಗುವುದಿಲ್ಲ. ಏಕೆಂದರೆ ನಮ್ಮ ಗ್ರಾಮವು ಒಂದು ಕಡೆ ನಾಗರಹೊಳೆ ಮತ್ತೊಂದು ಕಡೆ ಬಂಡೀಪುರ ಕಾಡಿಗೆ ಹೊಂದಿಕೊಂಡಂತೆ ಇದೆ. ಇದರಿಂದ ಕಾಡುಪ್ರಾಣಿಗಳ ಹಾವಳಿ ಹೆಚ್ಚು. ಅದರಲ್ಲೂ ಬಾಳೆ, ಕಬ್ಬು, ಭತ್ತ ಬೆಳೆದರೆ ಆನೆಗಳು, ಹಂದಿಗಳು ನಾಶ ಮಾಡಿಬಿಡುತ್ತವೆ. ಈ ಭಯಕ್ಕೆ ನಾವು ಸಾಂಪ್ರದಾಯಿಕವಾದ ಯಾವುದೇ ಬೆಳೆಯನ್ನು ಬೆಳೆಯುವುದಿಲ್ಲ. ಶುಂಠಿ ಬೆಳೆದರೆ ಸೇಫ್. ಇದನ್ನು ಕಾಡುಪ್ರಾಣಿಗಳು ತಿನ್ನುವುದಿಲ್ಲ. ಹೀಗಾಗಿ ಇಡೀ ಜಮೀನಿನಲ್ಲಿ ಶುಂಠಿ ಬಿಟ್ಟು ಬೇರೇನೂ ಬೆಳೆದಿಲ್ಲ ಎನ್ನುತ್ತಾರೆ ರವಿ.
ಕಳೆದ ಬಾರಿ ಶುಂಠಿಯ 60 ಕೆಜಿಯ ಚೀಲಕ್ಕೆ 5,700 ರು. ಇತ್ತು. ಇದರಿಂದ ನಮಗೆ 40-50 ಲಕ್ಷ ರು. ಹಣ ಸಿಕ್ಕಿತ್ತು. ಈ ಬಾರಿ 1,300 ರು.ಗೆ ಕುಸಿದಿದೆ. ಇದರಿಂದ 10 ಲಕ್ಷ ರು. ಸಿಕ್ಕರೆ ಹೆಚ್ಚು. ಇದರಲ್ಲಿ ಅರ್ಧದಷ್ಟು ಶುಂಠಿ ಬೆಳೆಯಲು ಹಣ ವೆಚ್ಚವಾಗಿರುತ್ತದೆ.
ರವಿ ಬಿನ್ ಶಂಭಪ್ಪ,
ಕಂದಲಿಕೆ ಹೋಬಳಿ
ಮೈಸೂರು ಜಿಲ್ಲೆ
- ರವಿ. ಹುಲ್ಲೇಮಾಳ