ಕನ್ನಡಪ್ರಭ ವಾರ್ತೆ, ಶಿಕಾರಿಪುರ
ಬಣಜಾರ ತಾಂಡಾಗಳಲ್ಲಿ ಮತಾಂತರ ತಡೆಗಟ್ಟುವಂತೆ ಆಗ್ರಹಿಸಿ ಶುಕ್ರವಾರ ಪಟ್ಟಣದ ತಹಸೀಲ್ದಾರ್ ಕಚೇರಿ, ಗ್ರಾಮಾಂತರ ಪೊಲೀಸ್ ಠಾಣೆ ಎದುರು ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು. ಶ್ರೀಮಂತ ಸಂಸ್ಕೃತಿ ಹೊಂದಿರುವ, ಬಡತನ ಹೆಚ್ಚಿರುವ ಲಂಬಾಣಿ ಜನಾಂಗ ಗುರಿಯಾಗಿಸಿಕೊಂಡು ಮತಾಂತರ ಮಾಡುವ ಅವಿರತ ಪ್ರಯತ್ನ ತಾಲೂಕಿನಾದ್ಯಂತ ಹೆಚ್ಚಾಗಿದೆ. ಅದನ್ನು ಸಂಪೂರ್ಣ ತಡೆಗಟ್ಟಬೇಕು. ಇಲ್ಲವಾದರೆ ಉಗ್ರ ಹೋರಾಟ ಹಮ್ಮಿಕೊಳ್ಳುವುದಾಗಿ ಎಚ್ಚರಿಸಿದರು.
ಮುಖಂಡ ಹುನ್ಯಾನಾಯ್ಕ ಮಾತನಾಡಿ, ಬಂಜಾರ ಸಮಾಜದ ಆಚರಣೆ ಪದ್ಧತಿ, ಜೀವನಶೈಲಿ, ಸಾಮಾಜಿಕ ಸ್ಥಿತಿಗತಿ ಗಮನಿಸಿ, ಮೀಸಲಾತಿ ನೀಡಲಾಗುತ್ತದೆ. ನಮ್ಮ ಧರ್ಮದಿಂದ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡ ವ್ಯಕ್ತಿಗಳ ಸಾಮಾಜಿಕ ಸ್ಥಾನಮಾನ ಸ್ಥಿತ್ಯಂತರ ಆಗುತ್ತದೆ. ಆಚರಣೆ, ಜೀವನ ಪದ್ಧತಿ ಬದಲಾಗುತ್ತದೆ. ಅದಕ್ಕಾಗಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡವರಿಗೆ ಸರ್ಕಾರ ಮೀಸಲಾತಿ ಸೌಲಭ್ಯ ಹಿಂದಕ್ಕೆ ಪಡೆಯಬೇಕು ಎಂದು ಒತ್ತಾಯಿಸಿದರು.ಅನಂತರದಲ್ಲಿ ಸೂಕ್ತ ಕ್ರಮಕ್ಕೆ ಆಗ್ರಹಿಸಿ ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಜೀಕ್ಯಾನಾಯ್ಕ, ಬಸವರಾಜ ನಾಯ್ಕ, ರಘು ನಾಯ್ಕ, ಅನಂತ ನಾಯ್ಕ, ಸೋಮ್ಲ ನಾಯ್ಕ, ರಾಮ ನಾಯ್ಕ, ಪೀತ್ಯಾ ನಾಯ್ಕ, ಅಣ್ಣಪ್ಪ ನಾಯ್ಕ, ಕೃಷ್ಣ ನಾಯ್ಕ, ಹನುಮಂತ ನಾಯ್ಕ, ರವಿ ನಾಯ್ಕ ಮತ್ತಿತರರು ಹಾಜರಿದ್ದರು.
- ಲೋಹಿತ್ ನಾಯ್ಕ, ಬಂಜಾರ ಮುಖಂಡ
-29ಕೆಎಸ್.ಕೆಪಿ1:
ಶಿಕಾರಿಪುರದಲ್ಲಿ ಶುಕ್ರವಾರ ಅಂಬಾರಗೊಪ್ಪ ತಾಂಡಾ ಜನರು ಗ್ರಾಮದಲ್ಲಿನ ಮತಾಂತರ ಪ್ರಯತ್ನ ವಿರುದ್ಧ ತಹಸೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿ, ಸೂಕ್ತ ಕ್ರಮಕ್ಕೆ ಆಗ್ರಹಿಸಿದರು.