ಶ್ರೀರಂಗಪಟ್ಟಣದಲ್ಲಿ ಚಿತ್ರನಟ ದಿ.ಅಂಬರೀಷ್ ಹುಟ್ಟುಹಬ್ಬ ಆಚರಣೆ

KannadaprabhaNewsNetwork |  
Published : May 30, 2025, 12:58 AM IST
29ಕೆಎಂಎನ್ ಡಿ23 | Kannada Prabha

ಸಾರಾಂಶ

ಅಂಬರೀಶ್ ಅವರ ಗುಣಗಳು ಇತ್ತೀಚಿನ ನಟರಿಗೆ ಮಾರ್ಗದರ್ಶನವಾಗಬೇಕು. ಒಬ್ಬ ನಟನಾಗಿ ಸಂಸದ ಸಚಿವರಾಗಿ ರಾಜ್ಯದ ಗಮನ ಸೆಳೆದರು. ಅಂಬಿ ಅಭಿಮಾನಿಗಳ ಸಂಭ್ರಮಕ್ಕೆ ಅವರ ಪ್ರೀತಿಯೇ ಕಾರಣವಾಗಿತ್ತು. ತಮ್ಮ ವೈಯಕ್ತಿಕ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಅವರ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವ ಎಲ್ಲರಿಗೂ ಧನ್ಯವಾದ.

ಕನ್ನಪಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಚಿತ್ರನಟ ಅಂಬರೀಶ್ ಅವರ 73ನೇ ವರ್ಷದ ಹುಟ್ಡು ಹಬ್ಬವನ್ನು ಅಭಿಮಾನಿಗಳ ಸಂಘದ ವತಿಯಿಂದ ಆಚರಿಸಲಾಯಿತು.

ಸಂಘದ ಗೌರವಾಧ್ಯಕ್ಷ ಎಸ್.ಎಲ್.ಲಿಂಗರಾಜು ನೇತೃತ್ವದಲ್ಲಿ ಪಟ್ಟಣದ ಕುವೆಂಪು ವೃತ್ತದಲ್ಲಿ ಅಭಿಮಾನಿಗಳು ಆಗಮಿಸಿ ಅಂಬರೀಶ್ ಭಾವಚಿತ್ರಕ್ಕೆ ಹಾಲಿನ ಅಭಿಷೇಕ ಮಾಡಿ ಹಣ್ಣು ಕಾಯಿ ಹೊಡೆದು ಪೂಜೆ ಸಲ್ಲಿಸಿ ಹುಟ್ಟು ಹಬ್ಬವನ್ನ ಆಚರಿಸಿದರು.

ನಂತರ ಎಸ್.ಎಲ್.ಲಿಂಗರಾಜು ಮಾತನಾಡಿ, ಅಂಬರೀಶ್ ಅಣ್ಣ ಅವರು ರಾಜಕೀಯದಲ್ಲಾಗಲೀ, ರಾಜಕೀಯೇತರವಾಗಲೀ ಅಜಾತ ಶತೃವಾಗಿದ್ದಾರೆ. ಹಾಗಾಗಿ ಅವರ ಹುಟ್ಟುಹಬ್ಬವನ್ನು ಪ್ರತೀ ವರ್ಷವೂ ಪಕ್ಷಾತೀತವಾಗಿ ಆಚರಿಸಿಕೊಂಡು ಬರುತ್ತಿದ್ದೇವೆ ಎಂದರು.

ಅಂಬರೀಶ್ ಅವರ ಗುಣಗಳು ಇತ್ತೀಚಿನ ನಟರಿಗೆ ಮಾರ್ಗದರ್ಶನವಾಗಬೇಕು. ಒಬ್ಬ ನಟನಾಗಿ ಸಂಸದ ಸಚಿವರಾಗಿ ರಾಜ್ಯದ ಗಮನ ಸೆಳೆದರು. ಅಂಬಿ ಅಭಿಮಾನಿಗಳ ಸಂಭ್ರಮಕ್ಕೆ ಅವರ ಪ್ರೀತಿಯೇ ಕಾರಣವಾಗಿತ್ತು. ತಮ್ಮ ವೈಯಕ್ತಿಕ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಅವರ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವ ಎಲ್ಲರಿಗೂ ಧನ್ಯವಾದ ತಿಳಿಸಿದರು.

ಇದೇ ವೇಳೆ ಅಭಿಮಾನಿ ಸಂಘದ ಮುಖಂಡರಿಂದ ಆಸ್ಪತ್ರೆಯಲ್ಲಿ ರೋಗಿಗಳಿಗೆ ಬ್ರೆಡ್ಡು, ಹಣ್ಣು ವಿತರಣೆ ಮಾಡಿ ಸಾರ್ವಜನಿಕರಿಗೆ ಸಿಹಿ ಹಂಚಿಕೆ ಮಾಡಲಾಯಿತು. ಸಾರ್ವಜನಿಕ ಆಸ್ಪತ್ರೆ ಆಡಳಿತಾಧಿಕಾರಿ ಡಾ. ಮಾರುತಿ ಅವರನ್ನು ಅಭಿನಂಧಿಸಲಾಯಿತು.

ಈ ವೇಳೆ ಅಂಬರೀಶ್ ಅಭಿಮಾನಿ ಸಂಘದ ಅಧ್ಯಕ್ಷ ಮಹೇಶ್, ಕೂಡಲಕುಪ್ಪೆ ಗೋಪಾಲ್, ಮನ್‌ಮೂಲ್ ಮಾಜಿ ನಿರ್ದೇಶಕ ಎಂ.ಜೆ. ಪುಟ್ಟರಾಜು, ಪುರಸಭೆ ಮಾಜಿ ಸದಸ್ಯರಾದ ಪಾಪಣ್ಣಿ, ಸುನೀಲ್, ಮಂಡ್ಯ ರಕ್ಷಣಾ ವೇದಿಕೆ ಅಧ್ಯಕ್ಷ ಬಿ.ಶಂಕರ್ ಬಾಬು, ಉಪಾಧ್ಯಕ್ಷ ಜಗದೀಶ್, ಅಗ್ರಹಾರ ಶಿವರಾಂ, ಟೋಕನ್ ಮಂಜು, ಮುಂಡುಗದೊರೆ ಮೋಹನ್, ನಗುವನಹಳ್ಳಿ ಮಹದೇವಸ್ವಾಮಿ, ರವಿಚಂದ್ರ, ಮಹದೇವಸ್ವಾಮಿ, ಸಿ.ಸ್ವಾಮೀಗೌಡ, ನೆಲಮನೆ ಹರೀಶ್, ನಗುವನಹಳ್ಳಿ ವೆಂಕಟೇಶ್, ಮಹದೇವಸ್ವಾಮಿ, ತಮ್ಮಣ್ಣ, ನಾಗರಾಜು, ಗಂಜಾಂ ಕುಮಾರ್, ಕೃಷಸೇರಿದಂತೆ ಇತರ ಅಭಿಮಾನಿ ಹಿತೈಷಿಗಳು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!