- ಹಿರೇಮಲ್ಲನಹೊಳೆಯಲ್ಲಿ ನಿರಾಶ್ರಿತರ ಸಭೆಯಲ್ಲಿ ಶಾಸಕ ಬಿ.ದೇವೇಂದ್ರಪ್ಪ ಭರವಸೆ - - - ಕನ್ನಡಪ್ರಭ ವಾರ್ತೆ ಜಗಳೂರು
ತಾಲೂಕಿನ ಹಿರೇಮಲ್ಲನಹೊಳೆ ಗ್ರಾಮದಲ್ಲಿ ಕೆರೆ ನೀರು ನುಗ್ಗಿ ಮನೆ ಕಳೆದುಕೊಂಡ ಹಿನ್ನೆಲೆ ಸರ್ಕಾರಿ ಶಾಲಾ ಆವರಣದಲ್ಲಿ ಹಮ್ಮಿಕೊಂಡಿದ್ದ ನಿರಾಶ್ರಿತರ ಸಭೆಯಲ್ಲಿ ಅವರು ಮಾತನಾಡಿದರು.
ಮನೆಗಳಿಗೆ ಕೆರೆ ನೀರು ನುಗ್ಗಿದೆ, ಮುಂದಿನ ಜೀವನ ಹೇಗೆ ಎಂಬ ಭಯ ಬೇಡ. ನಿಮ್ಮೊಂದಿಗೆ ನಾನಿದ್ದೇನೆ. ಸರ್ಕಾರಿ ಜಾಗ ಹುಡುಕಿ ನಿರಾಶ್ರಿತರಿಗೆ ನಿವೇಶನ ನೀಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು. ನೀರಿನಲ್ಲಿ ಮುಳುಗಿರುವ ಮನೆಗಳಿಗೆ ಸಂಪರ್ಕವಿರುವ ವಿದ್ಯುತ್ ತೆಗೆಯಲು ಸಂಬಂಧಿಸಿ ಬೆಸ್ಕಾಂ ಅಧಿಕಾರಿಗಳು, ಲೈನ್ ಮ್ಯಾನ್ಗಳಿಗೆ ತಿಳಿಸಲಾಗಿದೆ. ತಾತ್ಕಾಲಿಕ ಕಾಳಜಿ ಕೇಂದ್ರದಲ್ಲಿ ನೆರವು ಪಡೆದು, ಆರೋಗ್ಯವಾಗಿ ಇರಬೇಕು ಎಂದು ಮನವಿ ಮಾಡಿದರು.ಆರೋಗ್ಯ ತಪಾಸಣೆ:
ತಹಸೀಲ್ದಾರ್ ಸೈಯದ್ ಕಲಿಂಉಲ್ಲಾ ಮಾತನಾಡಿ, ಮಳೆಯಿಂದ ಹಾನಿಯಾದ ಕುಟುಂಬಗಳಿಗೆ ಕಾಳಜಿ ಕೇಂದ್ರ ತೆರೆದು ನಿತ್ಯ ಮೂರು ಹೊತ್ತು ಆಹಾರ ನೀಡಲು ಅಡುಗೆಯವರನ್ನು ನೇಮಿಸಲಾಗಿದೆ. ಇನ್ನು ನಿವೇಶನಕ್ಕೆ ಸಂಬಂಧಿಸಿದಂತೆ ಗ್ರಾಮದ ಸಮೀಪ 1 ಎಕರೆ ಜಾಗದಲ್ಲಿ ನಿವೇಶನ ಮಾಡಿ, ಅರ್ಹರಿಗೆ ಸೌಲಭ್ಯ ಹಂಚಲು ಶಾಸಕರು ಸೂಚನೆ ನೀಡಿದ್ದಾರೆ ಎಂದರು.
ಸಿಡಿಪಿಒ ಬೀರೇಂದ್ರಕುಮಾರ್, ಶಾಂತಮ್ಮ ಅನುರಾಧ, ಗ್ರಾಪಂ ಸದಸ್ಯ ಸುರೇಶ್, ನಿವೃತ್ತ ಅಧಿಕಾರಿ ಬಿ.ಮಹೇಶ್ವರಪ್ಪ, ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ಶೇಖರಪ್ಪ ಪಲ್ಲಾಗಟ್ಟೆ, ಟಿ.ರವಿಕುಮಾರ್, ಪತ್ರಕರ್ತ ಧನ್ಯಕುಮಾರ್, ಶಿವಣ್ಣ, ಬಾಣೇಶ್, ಕೃಷ್ಣ ರೆಡ್ಡಿ, ಜೆ.ಎಸ್. ತಿಪ್ಪೇಸ್ವಾಮಿ, ಪರಶುರಾಮ್, ಚನ್ನಬಸವನಗೌಡ, ಮಹಮದ್ ಗೌಸ್ ಮತ್ತಿತರರಿದ್ದರು.- - - -15ಜೆಎಲ್ಆರ್ಚಿತ್ರ2:
ಜಗಳೂರು ತಾಲೂಕಿನ ಹಿರೇಮಲ್ಲನಹೊಳೆ ಗ್ರಾಮದ ನಿರಾಶ್ರಿತರ ಸಭೆಯಲ್ಲಿ ಶಾಸಕ ಚಿಕ್ಕಮ್ಮನಹಟ್ಟಿ ಬಿ.ದೇವೇಂದ್ರಪ್ಪ ಮಾತನಾಡಿದರು.