ತೋಟದಲ್ಲಿ ಕಾಣೆಯಾಗಿದ್ದ ಮಗು ಪತ್ತೆ ಹಚ್ಚಿದ ಶ್ವಾನ !

KannadaprabhaNewsNetwork |  
Published : Dec 02, 2025, 02:45 AM IST
Baby

ಸಾರಾಂಶ

ಕಾಫಿ ತೋಟದಲ್ಲಿ ಆಟವಾಡುತ್ತಿದ್ದ ಎರಡು ವರ್ಷದ ಮಗು ನಾಪತ್ತೆಯಾಗಿತ್ತು. ಇಡೀ ರಾತ್ರಿ ತೋಟದಲ್ಲಿ ಕಳೆದ ಮಗುವನ್ನು, ಮರುದಿನ ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಸ್ಥಳೀಯರ ಹುಡುಕಾಟದ ವೇಳೆ ಸಾಕು ನಾಯಿಯೊಂದು ಪತ್ತೆಹಚ್ಚಿ ಪೋಷಕರ ಮಡಿಲಿಗೆ ಸೇರಿಸಿರುವ ಘಟನೆ ಪೊನ್ನಂಪೇಟೆ ತಾಲೂಕಿನ ಕೊಂಗಣ ಗ್ರಾಮದಲ್ಲಿ ನಡೆದಿದೆ.

 ಮಡಿಕೇರಿ : ಕಾಫಿ ತೋಟದಲ್ಲಿ ಆಟವಾಡುತ್ತಿದ್ದ ಎರಡು ವರ್ಷದ ಮಗು ನಾಪತ್ತೆಯಾಗಿತ್ತು. ಇಡೀ ರಾತ್ರಿ ತೋಟದಲ್ಲಿ ಕಳೆದ ಮಗುವನ್ನು, ಮರುದಿನ ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಸ್ಥಳೀಯರ ಹುಡುಕಾಟದ ವೇಳೆ ಸಾಕು ನಾಯಿಯೊಂದು ಪತ್ತೆಹಚ್ಚಿ ಪೋಷಕರ ಮಡಿಲಿಗೆ ಸೇರಿಸಿರುವ ಘಟನೆ ಪೊನ್ನಂಪೇಟೆ ತಾಲೂಕಿನ ಕೊಂಗಣ ಗ್ರಾಮದಲ್ಲಿ ನಡೆದಿದೆ.

ಎರಡು ವರ್ಷದ ಮಗುವೊಂದು ಇಡೀ ರಾತ್ರಿ ಕಾಫಿ ತೋಟದಲ್ಲಿ

ಎರಡು ವರ್ಷದ ಮಗುವೊಂದು ಇಡೀ ರಾತ್ರಿ ಕಾಫಿ ತೋಟದಲ್ಲಿ ಕಳೆದಿದೆ. ಮರುದಿನ ಸಾಕು ನಾಯಿಗಳಿಂದ ಮಗು ಪತ್ತೆಯಾಗಿದೆ. ಸುನಿಲ್ ಹಾಗೂ ನಾಗಿಣಿ ದಂಪತಿಯ ಎರಡು ವರ್ಷದ ಮಗು ಸುನನ್ಯಾ ಕಾಫಿ ತೋಟದಲ್ಲಿ ಕಾಣೆಯಾಗಿತ್ತು.ಶನಿವಾರ ಪೋಷಕರು ಮಗುವನ್ನು ಕೊಂಗಣ ಗ್ರಾಮದ ಶರಿ ಗಣಪತಿ ಎಂಬವರ ತೋಟಕ್ಕೆ ಕರೆದುಕೊಂಡು ಬಂದಿದ್ದರು. ಈ ವೇಳೆ ಮಗು ನಾಪತ್ತೆಯಾಗಿತ್ತು. ಎಷ್ಟೇ ಹುಡುಕಿದರೂ ಮಗು ಸಿಗದೇ ಪೋಷಕರು ಕಂಗಲಾಗಿದ್ದರು. ಶನಿವಾರ ಸಾಕಷ್ಟು ಹುಡುಕಿ ಮಗು ಸಿಗದೇ ಕತ್ತಲಾದ ಬಳಿಕ ಪೋಷಕರು ಹಿಂದಿರುಗಿದ್ದರು.

ಅರಣ್ಯ ಇಲಾಖೆ ಸಿಬ್ಬಂದಿಯಿಂದಲೂ ಹುಡುಕಾಟ: 

ಮಗು ಕಾಣೆಯಾಗಿರುವ ಬಗ್ಗೆ ಅರಣ್ಯ ಇಲಾಖೆ ಸಿಬ್ಬಂದಿಗೂ ಮಾಹಿತಿ ನೀಡಲಾಗಿತ್ತು. ಭಾನುವಾರ ಅನಿಲ್‌ ಕಾಳಪ್ಪ ಎಂಬವರಿಗೆ ಸೇರಿದ್ದ ಸಾಕು ನಾಯಿ ಓರಿಯೋ ಕಾರ್ಯಾಚರಣೆ ನಡೆಸಿ ಮಗುವನ್ನು ಪತ್ತೆ ಮಾಡಿದೆ. ಅರಣ್ಯ ಇಲಾಖೆ ಸಿಬ್ಬಂದಿಯವರು ಸಾಕು ನಾಯಿಗಳೊಂದಿಗೆ ಮಗುವಿಗಾಗಿ ಹುಡಕಾಟ ನಡೆಸಿದ್ದರು.ಶನಿವಾರ ಮಧ್ಯಾಹ್ನ ಮಗುವಿನ ತಾಯಿ ಮೊಬೈಲ್ ನೋಡುತ್ತಾ ಕುಳಿತಿದ್ದರು. ಈ ವೇಳೆ ಮಗು ಸುನನ್ಯಾ ನಾಪತ್ತೆಯಾಗಿದ್ದಳು. ಶ್ವಾನ ಓರಿಯೋದಿಂದಾಗಿ ಸುನನ್ಯಾ ಮತ್ತೆ ತಾಯಿ ಮಡಿಲು ಸೇರಿದ್ದಾಳೆ. ಸ್ಥಳೀಯರು ಸಹ ಮಗುವಿಗಾಗಿ ಹುಡುಕಾಟ ನಡೆಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಇಂದಿನಿಂದ ಮೇ 13ರವರೆಗೆ ದ್ವಿತೀಯ ಪಿಯು ಪರೀಕ್ಷೆ -2
ಮೇ 20ರಿಂದ ಸಾರಿಗೆ ನೌಕರ ಮುಷ್ಕರ ವೇತನ - ಹೆಚ್ಚಳ ಬಗ್ಗೆ ಮುಂದುವರಿದ ಗೊಂದಲ