.ಕಬ್ಬಿಗೆ ಆಕಸ್ಮಿಕ ಬೆಂಕಿ: ಮೂರು ಎಕರೆ ಭಸ್ಮ

KannadaprabhaNewsNetwork |  
Published : Dec 02, 2023, 12:45 AM IST
ಆಕಸ್ಮಿಕ ಬೆಂಕಿ | Kannada Prabha

ಸಾರಾಂಶ

ಕಬ್ಬಿಗೆ ಆಕಸ್ಮಿಕ ಬೆಂಕಿ: ರೈತನಿಗೆ ಸಂಕಷ್ಟ

ಬಸವನಬಾಗೇವಾಡಿ: ತಾಲೂಕಿನ ಕರಭಂಟನಾಳ ಗ್ರಾಮದ ಹತ್ತಿರವಿರುವ ಸಿ.ಬಿ.ಪಾಟೀಲ ಎಂಬುವವರ ತೋಟದಲ್ಲಿರುವ ಕಟಾವಿಗೆ ಬಂದಿದ್ದ ಕಬ್ಬಿಗೆ ಗುರುವಾರ ಆಕಸ್ಮಿಕ ಬೆಂಕಿ ತಗುಲಿ ಎಂಟು ಎಕರೆ ಕಬ್ಬಿನಲ್ಲಿ ಸುಮಾರು ಮೂರು ಎಕರೆಯಷ್ಟು ಕಬ್ಬು ಬೆಂಕಿಯಿಂದಾಗಿ ಹಾನಿಯಾಗಿದೆ. ಎಂಟು ಎಕರೆಯಲ್ಲಿ ಕಬ್ಬು ಬೆಳೆಯಲಾಗಿತ್ತು. ಕಬ್ಬಿಗೆ ಆಕಸ್ಮಿಕ ಬೆಂಕಿ ತಗುಲಿದ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳೀಯ ಅಗ್ನಿಶಾಮಕ ಠಾಣೆಯ ಸಹಾಯಕ ಠಾಣಾಧಿಕಾರಿ ಭೀಮಾಶಂಕರ ಮಾದರ, ಸಿಬ್ಬಂದಿಗಳಾದ ಸುಭಾಸ ಹಾದಿಮನಿ, ಅಶೋಕ ನಾಯಕ, ಮುತ್ತಣ್ಣ ಲಮಾಣಿ, ಶರಣಪ್ಪ ಹೂಗಾರ ತೆರಳಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿ ಉಳಿದ ಕಬ್ಬನ್ನು ರಕ್ಷಿಸಿದ್ದಾರೆ ಎಂದು ಅಗ್ನಿಶಾಮಕ ಠಾಣಾಧಿಕಾರಿ ಸಂಗಮೇಶ ಶಿವಪೂಜೆ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಾಂಗ್ರೆಸ್ಸಲ್ಲಿ ಸಚಿವ ಸ್ಥಾನಕ್ಕಾಗಿ ಹೆಚ್ಚಿದ ಕೂಗು!
ಬಂಧನವಿಲ್ಲದೆ ರಕ್ತದ ಮಾದರಿ ಸಂಗ್ರಹ ಕಾನೂನು ಬಾಹಿರ