ಕೇಣಿ ಬಂದರು ಯೋಜನೆ ವಿರೋಧಿಸಿ ಕಾರವಾರದಲ್ಲಿ ಮೀನು ಮಾರುಕಟ್ಟೆ ಬಂದ್

KannadaprabhaNewsNetwork |  
Published : Jul 23, 2025, 03:26 AM IST
ಮೀನು ಮಾರುಕಟ್ಟೆ ಬಂದ್ ಮಾಡಿ ಪ್ರತಿಭಟನೆ ನಡೆಸಿದರು  | Kannada Prabha

ಸಾರಾಂಶ

ಮೀನುಗಾರಿಕೆಯನ್ನೇ ನಂಬಿ ಜೀವನ ನಡೆಸುತ್ತಿರುವ ಸಾವಿರಾರು ಕುಟುಂಬಗಳು ಮೀನುಗಾರಿಕೆ ಇಲ್ಲವಾದರೆ ಮೀನುಗಾರರು, ವ್ಯಾಪಾರಿಗಳು ಬೀದಿಗೆ ಬೀಳುವ ಆತಂಕ

ಕಾರವಾರ: ಅಂಕೋಲಾ ತಾಲೂಕಿನ ಕೇಣಿಯಲ್ಲಿ ವಾಣಿಜ್ಯ ಬಂದರು ನಿರ್ಮಾಣ ಖಂಡಿಸಿ ಮಂಗಳವಾರ ಕಾರವಾರದಲ್ಲೂ ಮೀನುಗಾರರು ಪ್ರತಿಭಟನೆ ಮಾಡಿ, ಮೀನು ಮಾರಾಟ ಬಂದ್ ಮಾಡಿದರು.

ಜಿಲ್ಲಾ ಮಹಿಳಾ ಮೀನು ಮಾರಾಟ ಅಭಿವೃದ್ಧಿ ಸಂಘದ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಕೇಣಿ ಬಂದರು ಯೋಜನೆಗೆ ಧಿಕ್ಕಾರ ಕೂಗುತ್ತ, ಯಾವುದೇ ಕಾರಣಕ್ಕೂ ವಾಣಿಜ್ಯ ಬಂದರುಗಳ ನಿರ್ಮಾಣ ಹಾಗೂ ವಿಸ್ತರಣೆ ಮಾಡದೇ ಕಡಲ ತೀರವನ್ನು ಮೀನುಗಾರರಿಂದ ಕಸಿದುಕೊಳ್ಳದಂತೆ ಆಗ್ರಹಿಸಿದರು.

ಮೀನುಗಾರಿಕೆಯನ್ನೇ ನಂಬಿ ಜೀವನ ನಡೆಸುತ್ತಿರುವ ಸಾವಿರಾರು ಕುಟುಂಬಗಳು ಮೀನುಗಾರಿಕೆ ಇಲ್ಲವಾದರೆ ಮೀನುಗಾರರು, ವ್ಯಾಪಾರಿಗಳು ಬೀದಿಗೆ ಬೀಳುವ ಆತಂಕ ಉಂಟಾಗಿದೆ. ಮೀನುಗಾರರ ಜೀವನಕ್ಕೆ ಕಂಟಕವಾದ ಬಂದರು ಯೋಜನೆ ಬೇಡವೇ ಬೇಡ ಎಂದು ಮೀನುಗಾರರು ಘೋಷಣೆ ಕೂಗುತ್ತಾ ವಿರೋಧಿಸಿದರು.

ಮೀನುಗಾರ ಮಹಿಳೆಯರು ಉದ್ದೇಶಿತ ಕೇಣಿ ಬಂದರು ಯೋಜನೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಮೀನು ಮಾರಾಟ ಬಂದಾದ ಹಿನ್ನೆಲೆಯಲ್ಲಿ ಮಾರುಕಟ್ಟೆಗೆ ಬಂದ ವ್ಯಾಪಾರಿಗಳು ಹಿಂದಿರುಗಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ