ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಪಟ್ಟಣದ ಪುರಸಭೆ ಕಚೇರಿ ಸಭಾಂಗಣದಲ್ಲಿ ತಾಲೂಕು ಆಡಳಿತ ಆಯೋಜಿಸಿದ್ದ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರತಿ ಪಂಚಾಯ್ತಿ ವ್ಯಾಪ್ತಿಯಲ್ಲಿ ಕಂದಾಯ ಅದಾಲತ್ ಕಾರ್ಯಕ್ರಮ ರೂಪಿಸಬೇಕು. ರೈತರ ಬಳಿ ತೆರಳಿ ಅರ್ಜಿ ಜೊತೆಗೆ ಅಗತ್ಯ ದಾಖಲೆಗಳೊಂದಿಗೆ ಪರಿಶೀಲಿಸಿ 45 ದಿನದೊಳಗೆ ಜಮೀನಿಗೆ ಸಂಬಂಧಿಸಿದ ಪೌತಿ, ಪಹಣಿ ತಿದ್ದುಪಡಿ, ಪೋಡಿಗಳ ಮಾಡಿ ಮುಕ್ತಗೊಳಿಸಬೇಕು. ರೈತರನ್ನು ಕಚೇರಿಗೆ ಅಲೆದಾಡಿಸಬಾರದು ಖಡಕ್ ಸೂಚನೆ ನೀಡಿದರು.
ರೇಷ್ಮೆ, ಕೃಷಿ, ತೋಟಗಾರಿಕೆ, ಪಶು ಸಂಗೋಪನೆ ಹಾಗೂ ಮೀನುಗಾರಿಕೆ ಇಲಾಖೆಗಳಲ್ಲಿ ನೀಡುವ ಸವಲತ್ತುಗಳನ್ನು ಫಲಾನುಭವಿಗಳಿಗೆ ವಿತರಿಸಬೇಕು. ರಾಸುಗಳಿಗೆ ಕಾಲುಬಾಯಿ ಜ್ವರ ಕಾಣಿಸಿಕೊಳ್ಳುವ ಮುನ್ನ ಪಶು ಸಂಗೋಪನ ಇಲಾಖೆಯಿಂದ ಪ್ರತಿ ಗ್ರಾಮಗಳಲ್ಲಿ ಮನೆಮನೆ ಪ್ರಚಾರಾಂದೋಲನೆ ನಡೆಸಿ ಲಸಿಕೆ ಹಾಕಲು ಕ್ರಮ ವಹಿಸಬೇಕು ಎಂದರು.ಪಂಚಾಯ್ತಿ ವ್ಯಾಪ್ತಿ ಹಕ್ಕು ಪತ್ರಗಳಿರುವ ಫಲಾನುಭವಿಗಳಿಗೆ ಇ-ಸ್ವತ್ತು ಆಂದೋಲನದ ಮೂಲಕ ಫಲಾನುಭವಿಗಳಿಗೆ ನಿಯಮ 53/57ರ ಅಡಿಯಲ್ಲಿ ಹಕ್ಕು ಪತ್ರಗಳಿಗೆ ಖಾತೆ ಮಾಡಬೇಕು. ಇತರೆ ಸಾಮಾಜಿಕ ಭದ್ರತಾ ಪಿಂಚಣಿ ಸೇರಿದಂತೆ ಇತರೆ ಸರ್ಕಾರಿ ಸವಲತ್ತುಗಳ ಸಿಗುವ ಫಲಾನುಭವಿಗಳ ನೋಂದಾಯಿಸಿ ಮಡಿಲು ಕಾರ್ಯಕ್ರಮದಲ್ಲಿ ವಿತರಿಸಲು ಸಿದ್ಧತೆಯಾಗಿರಬೇಕು ಎಂದರು.
ಕೃಷಿ ಇಲಾಖೆಯಿಂದ ರೈತರಿಗೆ ಬಿತ್ತನೆ ಬೀಜ ಹಾಗೂ ಯೂರಿಯಾ, 20-20 , ಇಪ್ಕೋ ಗೊಬ್ಬರಗಳ ಸ್ಟಾಕ್ ಮಾಡಿಕೊಂಡು ರೈತರಿಗೆ ವಿತರಿಸಬೇಕು. ಅಕ್ರಮ ಗೊಬ್ಬರ ದಾಸ್ತಾನು ಕಂಡು ಬಂದರೆ ಪೊಲೀಸರ ನೆರವಿನೊಂದಿಗೆ ಹಿಡಿದು ಶಿಕ್ಷೆಗೊಳಪಡಿಸುವಂತೆ ಕೃಷಿ ಅಧಿಕಾರಿಗಳಿಗೆ ತಾಕೀತು ಮಾಡಿದರು. ಪೊಲೀಸರು ತಮ್ಮ ಚೆಕ್ ಪೋಸ್ಟ್ ಗಳಲ್ಲಿ ಯೂರಿಯಾ ದಾಸ್ತಾನುಗಳನ್ನು ಬೇರೇಡೆಗೆ ಸಾಗಾಟಗಳ ಬಗ್ಗೆ ಗಮನ ಹರಿಸಬೇಕು ಎಂದರು.
ಶಾಲಾ ಮಕ್ಕಳಿಗೆ ನೀಡುವ ಮೊಟ್ಟೆ 6 ರು. ಗಳನ್ನು ಸರ್ಕಾರ ನೀಡುತ್ತದೆ. ಮೊಟ್ಟೆ ಅಂಗಡಿಯಿಂದ ಒಡೆದುಹೋದರೆ ಅವರೇ ಹೊಣೆಯಾಗಿ ಕೈಯಿಂದ ಹಣ ನೀಡುವಂತಾಗುತ್ತಿದೆ. ಈ ಬಗ್ಗೆ ಸರ್ಕಾರಕ್ಕೆ ಪತ್ರ ಬರೆಯಲು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಪುರಸಭೆ ಪ್ರಭಾರ ಅಧ್ಯಕ್ಷ ಎಂ.ಎಲ್.ದಿನೇಶ್, ಜಿಪಂ ಡಿಎಸ್ 2 ಗ್ರೇಡ್ನ ತಾಪಂ ಆಡಳಿತಾಧಿಕಾರಿ ಪಿ.ಲಕ್ಷ್ಮಿ, ತಹಸೀಲ್ದಾರ್ ಚೇತನಾ ಯಾದವ್, ಇಒ ವೇಣು ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.