ಮಳೆ ಮುಂದುವರಿದಲ್ಲಿ ಈ ವರ್ಷವೂ ಪ್ರವಾಹ ಗ್ಯಾರಂಟಿ

KannadaprabhaNewsNetwork |  
Published : May 26, 2025, 11:58 PM ISTUpdated : May 26, 2025, 11:59 PM IST
ಮೇ ೨೬, ಹೊಳೆನರಸೀಪುರ, ಫೋಟೊ ೨ : ಹೊಳೆನರಸೀಪುರ ಪಟ್ಟಣದ ಹೇಮಾತಿ ನದಿ ದಂಡೆಯಲ್ಲಿರುವ ಯಾಸಿನ್ ನಗರಕ್ಕೆ ನದಿ ನೀರು ನುಗ್ಗಿದೆ.ಫೋಟೊ ೩ : ಹೊಳೆನರಸೀಪುರದ ಕುವೆಂಪು ಬಡಾವಣೆಯು ಹೇಮಾವತಿ ನದಿ ನೀರಿನಿಂದ ಜಲಾವೃತ್ತಗೊಂಡಿತ್ತು. | Kannada Prabha

ಸಾರಾಂಶ

ಹೊಳೆನರಸೀಪುರ ತಾಲೂಕಿನಲ್ಲಿ ಕಳೆದ ೨೪ ಗಂಟೆಯಲ್ಲಿ ವಾಡಿಕೆಯಂತೆ ೧೫.೪೦ ಮಿ.ಮೀ. ಮಳೆಯಾಗಬೇಕಿತ್ತು, ಆದರೆ ೧೦೩.೮೦ ಮಿ.ಮೀ. ಮಳೆಯಾಗಿದ್ದು, ೬.೭೪ ಪಟ್ಟು ಹೆಚ್ಚು ಮಳೆಯಾಗಿದೆ ಜತೆಗೆ ಸೋಮವಾರ ಮುಂಜಾನೆ ೬ ಗಂಟೆಗೆ ಹೇಮಾವತಿ ಜಲಾಶಯದಲ್ಲಿ ನೀರಿನ ಮಟ್ಟ ೨೮೯೯.೯೦ (೨೮೮೦.೩೧) ಅಡಿಗಳು ಇದ್ದು, ಗರಿಷ್ಠ ಮಟ್ಟ ೨೯೨೨.೦೦ ಅಡಿಗಳಾಗಿದ್ದು, ಇದೇ ರೀತಿ ಎಡೆಬಿಡದೆ ಸುರಿಯುತ್ತಿರುವ ಮಳೆ ಮುಂದುವರಿದ್ದಲ್ಲಿ ಈ ವರ್ಷವೂ ಪ್ರವಾಹ ಗ್ಯಾರಂಟಿ, ಆದ್ದರಿಂದ ತಾಲೂಕು ಆಡಳಿತ ಮುಂಜಾಗ್ರತೆ ಕ್ರಮಗಳಿಗೆ ಆದ್ಯತೆ ನೀಡಬೇಕಿದೆ.

ಕನ್ನಡಪ್ರಭ ವಾರ್ತೆ ಹೊಳೆನರಸೀಪುರ

ತಾಲೂಕಿನಲ್ಲಿ ಕಳೆದ ೨೪ ಗಂಟೆಯಲ್ಲಿ ವಾಡಿಕೆಯಂತೆ ೧೫.೪೦ ಮಿ.ಮೀ. ಮಳೆಯಾಗಬೇಕಿತ್ತು, ಆದರೆ ೧೦೩.೮೦ ಮಿ.ಮೀ. ಮಳೆಯಾಗಿದ್ದು, ೬.೭೪ ಪಟ್ಟು ಹೆಚ್ಚು ಮಳೆಯಾಗಿದೆ ಜತೆಗೆ ಸೋಮವಾರ ಮುಂಜಾನೆ ೬ ಗಂಟೆಗೆ ಹೇಮಾವತಿ ಜಲಾಶಯದಲ್ಲಿ ನೀರಿನ ಮಟ್ಟ ೨೮೯೯.೯೦ (೨೮೮೦.೩೧) ಅಡಿಗಳು ಇದ್ದು, ಗರಿಷ್ಠ ಮಟ್ಟ ೨೯೨೨.೦೦ ಅಡಿಗಳಾಗಿದ್ದು, ಇದೇ ರೀತಿ ಎಡೆಬಿಡದೆ ಸುರಿಯುತ್ತಿರುವ ಮಳೆ ಮುಂದುವರಿದ್ದಲ್ಲಿ ಈ ವರ್ಷವೂ ಪ್ರವಾಹ ಗ್ಯಾರಂಟಿ, ಆದ್ದರಿಂದ ತಾಲೂಕು ಆಡಳಿತ ಮುಂಜಾಗ್ರತೆ ಕ್ರಮಗಳಿಗೆ ಆದ್ಯತೆ ನೀಡಬೇಕಿದೆ.

ಜಿಲ್ಲೆಯ ಜೀವನಾಡಿ ಹೇಮಾವತಿ ಜಲಾಶಯ ಜುಲೈ ೨೦೨೪ರಲ್ಲಿ ಭರ್ತಿಯಾದ ಹಿನ್ನೆಲೆಯಲ್ಲಿ ಹೇಮಾವತಿ ನದಿಯಲ್ಲಿ ಹೆಚ್ಚಿನ ಪ್ರಮಾಣದ ನೀರು ಬಿಟ್ಟಿದ್ದ ಕಾರಣ ಪಟ್ಟಣದ ನದಿ ಪಾತ್ರದ ಮನೆಗಳಿಗೆ ಜುಲೈ ೨೬ರ ಗುರುವಾರ ರಾತ್ರಿ ನೀರು ನುಗ್ಗಿತ್ತು. ನಾಗರಿಕರ ರಕ್ಷಣೆಗೆ ಸದಾ ಸಿದ್ಧವಿರುವ ಅಗ್ನಿಶಾಮಕ ಠಾಣೆ, ಯಾಸಿನ್ ನಗರ, ಕುವೆಂಪು ಬಡಾವಣೆಯಲ್ಲಿ ಮೂವತ್ತಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿತ್ತು. ಚನ್ನರಾಯಪಟ್ಟಣಕ್ಕೆ ತೆರಳುವ ಗನ್ನಿಕಡ ಮಾರ್ಗ ಹಾಗೂ ಅರಕಲಗೂಡಿಗೆ ತೆರಳುವ ಹೆದ್ದಾರಿಯೂ ಜಲಾವೃತ್ತಗೊಂಡಿದ್ದು, ವಾಹನಗಳು ಬದಲೀ ರಸ್ತೆಯಲ್ಲಿ ಸಂಚರಿಸಲು ವ್ಯವಸ್ಥೆ ಮಾಡಲಾಗಿತ್ತು ಹಾಗೂ ಎಪಿಎಂಸಿ ಮಾರುಕಟ್ಟೆಯ ಆವರಣದಲ್ಲಿ ಇರುವ ಗೋದಾಮುಗಳಿಗೆ ನೀರು ನುಗ್ಗಿದ್ದು, ದಿನಸಿ ಪದಾರ್ಥಗಳು ನದಿ ನೀರಿನಲ್ಲಿ ನೆಂದು ಬಹಳ ನಷ್ಟ ಉಂಟಾಗಿತ್ತು.

೧೯೯೨, ೨೦೧೯ ಹಾಗೂ ೨೦೨೪ರಲ್ಲಿ ಹೇಮಾವತಿ ನದಿಯು ತುಂಬಿ ಹರಿದು ಬಡಾವಣೆಗಳು, ರಸ್ತೆಗಳು ಜಲಾವೃತ್ತಗೊಂಡಿತ್ತು. ಆದ್ದರಿಂದ ಡ್ರೈನ್‌ಗಳ ಮೂಲಕ ನದಿ ನೀರು ಬಾರದಂತೆ ತಡೆಯಲು ಮರಳು ಮೂಟೆಗಳು ಹಾಗೂ ಅಗತ್ಯ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳಬೇಕಾಗಿದ್ದು, ಹಿರಿಯ ಅಧಿಕಾರಿಗಳು ತುರ್ತು ಕ್ರಮ ಕೈಗೊಳ್ಳಲು ಪೂರ್ವಭಾವಿ ಸಭೆ ನಡೆಸುವ ಜತೆಗೆ ಬಡಾವಣೆಯ ನಿವಾಸಿಗಳಿಗೆ ಅಗತ್ಯ ಸಲಹೆ ಹಾಗೂ ಮಾರ್ಗದರ್ಶನ ಸಭೆ ಅಗತ್ಯವಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ