ತಾವರಗೊಂದಿಯಲ್ಲಿ ಸಂಕ್ರಾಂತಿ ಹಬ್ಬಕ್ಕೆ ಮೆರುಗು ನೀಡಿದ ಜಾನಪದ ರಸದೌತಣ

KannadaprabhaNewsNetwork |  
Published : Jan 16, 2026, 01:30 AM IST
ಹರಪನಹಳ್ಳಿ ತಾಲೂಕಿನ ತಾವರಗೊಂದಿ ಗ್ರಾಮದ ಬಳಿ ತುಂಗಭದ್ರಾ ನದಿ ತೀರದಲ್ಲಿ ಸಂಕ್ರಾಂತಿ ಹಬ್ಬದ ಪ್ರಯುಕ್ತ ಆಯೋಜಿಸಿದ್ದ ಕರ್ನಾಟಕ ಜಾನಪದ ನೃತ್ಯದರ್ಶನ ಕಾರ್ಯಕ್ರಮವನ್ನು ಸಚಿವ ಜಮೀರ ಅಹಮದ್‌ ಖಾನ್‌ ಉದ್ಘಾಟಿಸಿದರು. ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ, ಶಾಂತನಗೌಡ ಇದ್ದರು. | Kannada Prabha

ಸಾರಾಂಶ

ಹರಪನಹಳ್ಳಿ ತಾಲೂಕಿನ ತಾವರಗೊಂದಿ ಗ್ರಾಮದ ಬಳಿ ತುಂಗಭದ್ರಾ ನದಿ ತೀರದಲ್ಲಿ ಎಂ.ಪಿ. ರವೀಂದ್ರ ಪ್ರತಿಷ್ಠಾನದ ವತಿಯಿಂದ ಸಂಕ್ರಾಂತಿ ಹಬ್ಬದ ಅಂಗವಾಗಿ ಜಾನಪದ ಗಾಯನ, ಸುಗ್ಗಿ ಹಾಡುಗಳು ಕಾರ್ಯಕ್ರಮ ಆಯೋಜಿಸಲಾಗಿತ್ತು.

ಹರಪನಹಳ್ಳಿ: ತಾಲೂಕಿನ ತಾವರಗೊಂದಿ ಗ್ರಾಮದ ಬಳಿ ತುಂಗಭದ್ರಾ ನದಿ ತೀರದಲ್ಲಿ ಎಂ.ಪಿ. ರವೀಂದ್ರ ಪ್ರತಿಷ್ಠಾನದ ವತಿಯಿಂದ ಆಯೋಜಿಸಿದ್ದ ಸಂಕ್ರಾಂತಿ ಹಬ್ಬದಲ್ಲಿ ಜಾನಪದ ಗಾಯನ, ಸುಗ್ಗಿ ಹಾಡುಗಳು ಪ್ರೇಕ್ಷಕರಿಗೆ ರಸದೌತಣ ನೀಡಿತು.

ಬೆಂಗಳೂರಿನ ದೇವೇಂದ್ರಕುಮಾರ ಸ್ವರ ಸಾಹಿತ್ಯ ಕಲಾ ತಂಡ ಹಾಗೂ ಹಳ್ಳಿ ಬ್ಯಾಂಡ್‌ ಸವಿತಕ್ಕ ಕಲಾ ತಂಡಗಳ ಆಶ್ರಯದಲ್ಲಿ ಅನೇಕ ಜನಪದ ಗೀತೆಗಳು ಮೂಡಿಬಂದವು. ಹಬ್ಬ ಬಂತು ಹಬ್ಬ... ಒಳಿತು ಮಾಡು ಮನುಷ್ಯ... ಯಾಕೆ ಬಡಿದಾಡುತ್ತಿ ತಮ್ಮ ಸಂಸಾರ ಮೆಚ್ಚಿ... ಶ್ರಾವಣ ಬಂತು ನಾಡಿಗೆ... ಕೊಡಗನ ಕೋಳಿ ನುಂಗಿತ್ತಾ... ಎಲ್ಲೊ ಜೋಗಪ್ಪ ನಿನ್ನರಮನೆ... ಹೀಗೆ ಒಂದರ ಮೇಲೊಂದು ಹಾಡುಗಳು ಅಲೆ ಅಲೆಯಾಗಿ ಬರುತ್ತಿದ್ದರೆ ನದಿ ತಟದಲ್ಲಿ ನೆರೆದ ಜನರು ತಲೆದೂಗಿದರು.

ಖಡಕ್‌ ರೊಟ್ಟಿ, ಚಟ್ನಿಪುಡಿ, ಹೋಳಿಗೆ, ಹೆಸರು ಕಾಳು ಪಲ್ಯೆ, ಬೂಂದಿ, ಮೈಸೂರು ಪಾಕದೊಂದಿಗೆ ಜನರು ಊಟ ಸವಿದರು.

ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವ ಬಿ.ಜೆಡ್‌. ಜಮೀರ ಅಹಮದ್ ಖಾನ್‌ ಅವರು ಕಾರ್ಯಕ್ರಮ ಉದ್ಘಾಟಿಸಿ, ಸಂಕ್ರಾಂತಿ ಎಲ್ಲರಿಗೂ ಶುಭ ತರಲಿ ಎಂದು ಹಾರೈಸಿದರು. ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ ಅವರು ಎಲ್ಲರಿಗೂ ಎಳ್ಳು-ಬೆಲ್ಲ ಹಂಚಿದರು.

ಹೊನ್ನಾಳಿ ಶಾಸಕ ಶಾಂತನಗೌಡ, ಜಿಲ್ಲಾಧಿಕಾರಿ ಕವಿತಾ ಮನ್ನಿಕೇರಿ, ಪೊಲೀಸ್‌ ವರಿಷ್ಠಾಧಿಕಾರಿ ಎಸ್. ಜಾಹ್ನವಿ, ಜಿಪಂ ಸಿಇಒ ನೊಂಗಾಯ್ಜ್‌ ಮೊಹಮದ್‌ ಅಲಿ ಅಕ್ರಮ, ಹೂಡ ಅಧ್ಯಕ್ಷ ನಿಯಾಜಿ, ಮುಖಂಡ ಎಚ್‌.ಎಂ. ಮಲ್ಲಿಕಾರ್ಜುನ, ವಿವಿಧ ಬ್ಲಾಕ್‌ ಅಧ್ಯಕ್ಷರಾದ ಎಂ.ವಿ. ಅಂಜಿನಪ್ಪ, ಕುಬೇರಗೌಡ, ಬಿಡಿಸಿಸಿ ಬ್ಯಾಂಕ್‌ ನಿರ್ದೇಶಕ ಐಗೋಳ ಚಿದಾನಂದ, ಗೌತಮಪ್ರಭು, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಉದಯಶಂಕರ, ತಹಸೀಲ್ದಾರ್‌ ಬಿ.ವಿ. ಗಿರೀಶಬಾಬು, ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ಕಂಚಿಕೇರಿ ಜಯಲಕ್ಷ್ಮಿ, ಉಮಾಮಹೇಶ್ವರಿ, ಸುಮಾ ಜಗದೀಶ, ಮೈದೂರು ರಾಮಣ್ಣ, ಹುಲ್ಲಿಕಟ್ಟಿ ಚಂದ್ರಪ್ಪ, ಉದ್ದಾರ ಗಣೇಶ, ಡಿವೈಎಸ್ಪಿ ಸಂತೋಷ ಚವ್ಹಾಣ, ಸಿಪಿಐ ಮಹಾಂತೇಶ ಸಜ್ಜನ, ಪಿಎಸ್‌ಐಗಳಾದ ಶಂಭುಲಿಂಗ ಹಿರೇಮಠ, ಕಿರಣಕುಮಾರ, ವಿಜಯಕೃಷ್ಣ, ನಾಗರತ್ನಾ, ಮತ್ತೂರು ಬಸವರಾಜ, ಅರಸೀಕೆರೆ ನಾಗರಾಜ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜೀವನದ ಸತ್ಯ ರೂಪಿತವಾಗಲು ನಡೆ ನುಡಿ ಶುದ್ಧಿಯಾಗಿರಲಿ
ಮಾರಕ ಯೋಜನೆಗೆ ಬಿಜೆಪಿ ಅವಕಾಶ ನೀಡುವುದಿಲ್ಲ: ಎನ್‌.ಎಸ್‌. ಹೆಗಡೆ ಕರ್ಕಿ