ಶಿವಕುಮಾರ ಸ್ವಾಮೀಜಿಗಳ ಪುಣ್ಯಸ್ಮರಣೆ ಹಿನ್ನೆಲೆ ಅನ್ನದಾನ

KannadaprabhaNewsNetwork |  
Published : Feb 03, 2026, 01:45 AM IST
2ಎಚ್ಎಸ್ಎನ್16 : ಡಾ.ಶಿವಕುಮಾರಸ್ವಾಮೀಜಿಗಳ 7 ನೇ ವರ್ಷದ ಸ್ಮರಣಾರ್ಥ ಮಹಾವೀರ ವೃತ್ತದಲ್ಲಿ ಅನ್ನದಾಸೋಹ ನೆರವೇರಿಸಲಾಯಿತು. | Kannada Prabha

ಸಾರಾಂಶ

‘ನಡೆದಾಡುವ ದೇವರು’ ಎಂದೇ ಖ್ಯಾತರಾದ ಸಿದ್ಧಗಂಗಾ ಮಠದ ಡಾ. ಶಿವಕುಮಾರ ಮಹಾಶಿವಯೋಗಿಗಳ 7ನೇ ವರ್ಷದ ಪುಣ್ಯ ಸಂಸ್ಮರಣೋತ್ಸವವನ್ನು ನಗರದ ಮಹಾವೀರ ವೃತ್ತದಲ್ಲಿ ವೀರಶೈವ ಲಿಂಗಾಯತ ವೇದಿಕೆ ರಾಜ್ಯ ಸಮಿತಿಯಿಂದ ಆಚರಿಸಲಾಯಿತು. ಅನ್ನದಾಸೋಹ, ಜ್ಞಾನದಾಸೋಹ ಮತ್ತು ಭಕ್ತಿ ದಾಸೋಹ ಎಂಬ ತ್ರಿವಿಧ ದಾಸೋಹದ ತತ್ವಗಳು ಸಾಮಾಜಿಕ ಸಮಾನತೆ, ಕಾಯಕದ ಮಹತ್ವ ಮತ್ತು ನಿಸ್ವಾರ್ಥ ಸೇವೆಯನ್ನು ಸಾರುತ್ತವೆ ಎಂದರು. “ಕಾಯಕವೇ ಕೈಲಾಸ, ದಾಸೋಹವೇ ಮುಕ್ತಿಯ ದಾರಿ” ಎಂಬ ಶರಣರ ಸಂದೇಶವನ್ನು ಜೀವನದಲ್ಲಿ ಅಳವಡಿಸಿಕೊಂಡಾಗಲೇ ಇಂತಹ ಪುಣ್ಯಸ್ಮರಣೆಗಳು ಸಾರ್ಥಕವಾಗುತ್ತವೆ ಎಂದರು.

ಕನ್ನಡಪ್ರಭ ವಾರ್ತೆ ಹಾಸನ

ಪದ್ಮಭೂಷಣ, ಕರ್ನಾಟಕ ರತ್ನ, ತ್ರಿವಿಧ ದಾಸೋಹಿ, ‘ನಡೆದಾಡುವ ದೇವರು’ ಎಂದೇ ಖ್ಯಾತರಾದ ಸಿದ್ಧಗಂಗಾ ಮಠದ ಡಾ. ಶಿವಕುಮಾರ ಮಹಾಶಿವಯೋಗಿಗಳ 7ನೇ ವರ್ಷದ ಪುಣ್ಯ ಸಂಸ್ಮರಣೋತ್ಸವವನ್ನು ನಗರದ ಮಹಾವೀರ ವೃತ್ತದಲ್ಲಿ ವೀರಶೈವ ಲಿಂಗಾಯತ ವೇದಿಕೆ ರಾಜ್ಯ ಸಮಿತಿಯಿಂದ ಆಚರಿಸಲಾಯಿತು.

ಕಾರ್ಯಕ್ರಮದ ಅಂಗವಾಗಿ ನೂರಾರು ಜನರಿಗೆ ಅನ್ನದಾಸೋಹ ಹಾಗೂ ರಕ್ತದಾನ ಶಿಬಿರವನ್ನು ಯಶಸ್ವಿಯಾಗಿ ಆಯೋಜಿಸಲಾಗಿತ್ತು. ಇದೇ ವೇಳೆ ಶ್ರೀ ಸಿದ್ಧಗಂಗಾ ಮಠದ ಶ್ರೀ ಸಿದ್ಧಲಿಂಗ ಮಠದ ಶ್ರೀ ಶಿವಸಿದ್ದೇಶ್ವರ ಸ್ವಾಮೀಜಿಗಳು ಮಾತನಾಡಿ, ಅನ್ನದಾಸೋಹ, ಜ್ಞಾನದಾಸೋಹ ಮತ್ತು ಭಕ್ತಿ ದಾಸೋಹ ಎಂಬ ತ್ರಿವಿಧ ದಾಸೋಹದ ತತ್ವಗಳು ಸಾಮಾಜಿಕ ಸಮಾನತೆ, ಕಾಯಕದ ಮಹತ್ವ ಮತ್ತು ನಿಸ್ವಾರ್ಥ ಸೇವೆಯನ್ನು ಸಾರುತ್ತವೆ ಎಂದರು. “ಕಾಯಕವೇ ಕೈಲಾಸ, ದಾಸೋಹವೇ ಮುಕ್ತಿಯ ದಾರಿ” ಎಂಬ ಶರಣರ ಸಂದೇಶವನ್ನು ಜೀವನದಲ್ಲಿ ಅಳವಡಿಸಿಕೊಂಡಾಗಲೇ ಇಂತಹ ಪುಣ್ಯಸ್ಮರಣೆಗಳು ಸಾರ್ಥಕವಾಗುತ್ತವೆ ಎಂದರು.

ಈ ದಿನವನ್ನು ಸ್ವಾಮೀಜಿಯವರ ಸೇವೆಯನ್ನು ಸ್ಮರಿಸಲು ಆಚರಿಸಲಾಗುತ್ತದೆ ಮತ್ತು ಕಾಯಕದೊಂದಿಗೆ ದಾಸೋಹದ ಪವಿತ್ರ ತತ್ವವನ್ನು ಜನತೆಗೆ ತಿಳಿಸುವುದೇ ಇದರ ಮುಖ್ಯ ಉದ್ದೇಶವಾಗಿದೆ ಎಂದರು. ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿಗಳು ಲಿಂಗೈಕ್ಯರಾದ ದಿನವನ್ನು ಸ್ವಾಮೀಜಿಯವರ ಅಪೂರ್ವ ಸಾಮಾಜಿಕ, ಧಾರ್ಮಿಕ ಮತ್ತು ಶೈಕ್ಷಣಿಕ ಸೇವೆಯನ್ನು ಸ್ಮರಿಸುವ ದಿನವಾಗಿದೆ.

ತ್ರಿವಿಧ ದಾಸೋಹ ಎಂದರೆ, ತನು, ಮನ, ಧನಗಳನ್ನು ಗುರು-ಲಿಂಗ-ಜಂಗಮಕ್ಕೆ ಅರ್ಪಿಸುವುದೇ ತ್ರಿವಿಧ ದಾಸೋಹ. ಬಡವರಿಗೆ, ಅನಾಥರಿಗೆ, ವಿದ್ಯಾರ್ಥಿಗಳಿಗೆ ನಿರಂತರ ಅನ್ನದಾನ ಮಾಡುವುದು. ಜ್ಞಾನ ದಾಸೋಹ: ಜ್ಞಾನದಾಸೋಹದ ಮೂಲಕ ಅರಿವನ್ನು ಹರಡುವುದು.

ಭಕ್ತಿ ದಾಸೋಹ ಎಂದರೆ ಭಕ್ತಿಯನ್ನು ಅರ್ಪಿಸುವುದು. ವಚನ ಸಾಹಿತ್ಯದಲ್ಲಿ ದಾಸೋಹ, ಬಸವಾದಿ ಶರಣರು ಕಾಯಕದ ಜೊತೆಗೆ ದಾಸೋಹಕ್ಕೆ ಹೆಚ್ಚಿನ ಮಹತ್ವ ನೀಡಿದ್ದಾರೆ. ’ಕಾಯಕವೇ ಕೈಲಾಸ, ದಾಸೋಹವೇ ಮುಕ್ತಿಯ ದಾರಿ’ ಎಂಬುದು ಶರಣರ ಸಂದೇಶವಾಗಿದೆ. ಸ್ವಾಮೀಜಿಯವರ ತತ್ವ ಸಿದ್ಧಾಂತವನ್ನು ನಾವು ಬದುಕಿನಲ್ಲಿ ಅಳವಡಿಸಿಕೊಂಡು ಏನಾದರೂ ನಡೆದಿದ್ದೆ ಆದರೇ ಅಂತಹ ಪುಣ್ಯ ಸ್ಮರಣೆ, ಜಯಂತಿಗಳು ಸಾರ್ಥಕವಾಗುತ್ತದೆ ಎಂದು ಹೇಳಿದರು.ವೀರಶೈವ ಲಿಂಗಾಯತ ಮಹಾ ವೇದಿಕೆ ರಾಜ್ಯ ಸಮಿತಿ ಸದಸ್ಯ ಬಿ.ಆರ್‌. ವಸಂತಕುಮಾರ್ ಮಾತನಾಡಿ, ಶಿವಕುಮಾರ ಸ್ವಾಮೀಜಿಗಳ ೭ನೇ ಪುಣ್ಯ ಸಂಸ್ಮರಣೋತ್ಸವವನ್ನು ಸಮಾಜದ ಎಲ್ಲ ವರ್ಗಗಳಿಗೂ ಸೇವೆಯ ಸಂದೇಶ ತಲುಪಿಸುವ ಉದ್ದೇಶದಿಂದ ಹಮ್ಮಿಕೊಳ್ಳಲಾಗಿದೆ ಎಂದರು. ನಗರದ ಹೇಮಾವತಿ ಪ್ರತಿಮೆಯಿಂದ ಕುಂಭಕಳಸ, ಮಂಗಳವಾದ್ಯಗಳೊಂದಿಗೆ ಸ್ವಾಮೀಜಿಗಳು ಹಾಗೂ ಗಣ್ಯರನ್ನು ವೇದಿಕೆಗೆ ಬರಮಾಡಿಕೊಳ್ಳಲಾಗಿದ್ದು, ದೀಪ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು ಎಂದು ವಿವರಿಸಿದರು.

ವೀರಶೈವ ಲಿಂಗಾಯತ ಮಹಾಸಭಾ ಮುಖಂಡ ಪ್ರಶಾಂತ್ ಕಲ್ಲೂರು ಮಾತನಾಡಿ, ಪ್ರತಿವರ್ಷದಂತೆ ಈ ವರ್ಷವೂ ದಾಸೋಹ ಹಾಗೂ ರಕ್ತದಾನ ಶಿಬಿರವನ್ನು ಆಯೋಜಿಸಿದ್ದು, ಸಾರ್ವಜನಿಕರಿಂದ ಉತ್ತಮ ಸ್ಪಂದನೆ ದೊರೆತಿದೆ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ಮಠದ ಸ್ವಾಮೀಜಿಗಳಾದ ವಿಜಯಕುಮಾರ ಸ್ವಾಮೀಜಿ, ಕಲ್ಯಾಣ ಸ್ವಾಮೀಜಿ, ಶ್ರೀ ಸಂಗಮೇಶ್ವರ ಸ್ವಾಮೀಜಿ, ಮಹಂತ ಸ್ವಾಮೀಜಿ, ಬಸವರಾಜೇಂದ್ರ ಸ್ವಾಮೀಜಿ, ಜಯದೇವ ಸ್ವಾಮೀಜಿ, ಸದಾಶಿವ ಸ್ವಾಮೀಜಿ, ಶಾಂತವೀರ ಸ್ವಾಮೀಜಿ, ಜಯದೇವಿ ತಾಯಿ, ಚಿನ್ಮಯಿ ಮಾತಾಜಿ, ಆಲೂರು-ಸಕಲೇಶಪುರ ತಾಲೂಕು ಅಧ್ಯಕ್ಷ ಸಿಮೆಂಟ್ ಮಂಜು, ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದೇಶ್ ನಾಗೇಂದ್ರ, ಕಟ್ಟಾಯ ಶಿವಕುಮಾರ್, ಕಂಚಮಾರನಹಳ್ಳಿ ಕಾಂತರಾಜ್, ಎಸ್.ಎಸ್. ಪ್ರಸನ್ನ ಧರ್ಮ, ರೇವಣ್ಣ, ತಮ್ಮಯ್ಯ, ಯು.ಎಸ್. ಬಸವರಾಜು, ವಿಜಯಣ್ಣ, ತೇಜುಮೂರ್ತಿ, ಆರ್‌.ಬಿ. ಸುರೇಶ್, ಎಂ.ಎಸ್. ಮಹೇಶ್, ಪಂಚಾಕ್ಷರಿ, ಎಂ.ಎನ್. ಕುಮಾರಸ್ವಾಮಿ, ಅವಿನಾಶ್, ದೇವರಾಜು, ಅಜಿತ್, ಕಟ್ಟೆ ಗದ್ದೆ ನಾಗರಾಜ್, ದೇವರಾಜ್, ಅಪ್ಪಣ್ಣ ಗೌಡ, ಎಂ.ಬಿ. ವಿಶ್ವನಾಥ್, ಪುಷ್ಪ ಕೆಂಚಪ್ಪ, ಮಹಂತೇಶ್, ಸಂಪತ್, ಯೋಗನಂದ್, ತಿರ್ಥೇಶ್, ಹರೀಶ್, ಶಿವಕುಮಾರ್ ಇತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

25 ವರ್ಷದಲ್ಲಿ ರೈತರಿಗೆ 111 ಲಕ್ಷ ಕೋಟಿ ನಷ್ಟ: ಶರ್ಮಾ
ಆಟೋ ಗ್ಲಾಸ್ ಒಡೆದಿದ್ದಕ್ಕೆಸ್ನೇಹಿತನ ಕೊಂದ ಚಾಲಕ