ಕನ್ನಡಪ್ರಭ ವಾರ್ತೆ ಬಾಗಲಕೋಟೆ
ತಹಸೀಲ್ದಾರ್ ಮುಂದಾಳತ್ವದಲ್ಲಿ ಆರೋಗ್ಯ ಇಲಾಖೆ, ಕಾರ್ಮಿಕ ಇಲಾಖೆ, ನಗರಸಭೆ ಅಧಿಕಾರಿಗಳು ಜಂಟಿಯಾಗಿ ನಗರದ ಬೀದಿ ಬದಿ ಅಂಗಡಿಗಳು ಮತ್ತು ಹೋಟಲ್ಗಳ ಮೇಲೆ ದಾಳಿ ನಡೆಸಲಾಯಿತು. ಟೆಸ್ಟಿಂಗ್ ಪೌಡರ್ ಬಸಳದಂತೆ, ಆಹಾರ ಪರವಾನಗಿ ಪಡೆದಿರುವ ಬಗ್ಗೆ ಪರಿಶೀಲಿಸಲಾಯಿತು. ಕೆಲಸಗಾರರ ವೈದ್ಯಕೀಯ ಪ್ರಮಾಣ ಪತ್ರ, ಆಹಾರ ಸುರಕ್ಷತೆ ಮತ್ತು ಗುಣಮಟ್ಟವನ್ನು ತಂಡ ಪರಿಶೀಲಿಸಿತು. ಸ್ವಚ್ಛತೆಗೆ ಗಮನ ಹರಿಸದೆ ಇರುವ ಬಗ್ಗೆ ತಟ್ಟೆ ಮತ್ತು ಚಮಚೆಗಳನ್ನು ತೊಳೆದು ಬಿಸಿ ನೀರಿನಿಂದ ಸ್ವಚ್ಛಗೊಳಿಸಲು ಸೂಚಿಸಿದರು.
ಕಾರ್ಯಾಚರಣೆಯಲ್ಲಿ ತಹಸೀಲ್ದಾರ್ ಅಮರೇಶ ಪಮ್ಮಾರ, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯ ಜಿಲ್ಲಾ ಅಂಕಿತ ಅಧಿಕಾರಿ ಡಾ.ವಿಜಯ ಕಂಠಿ, ಶಿರಸ್ತೆದಾರ ಶ್ರೀಶೈಲ ಗಯ್ಯಾಳಿ, ಆಹಾರ ನಿರೀಕ್ಷಕ ಎ.ಡಿ. ಸಾರವಾಡ, ನಗರಸಭೆ ಅಧಿಕಾರಿ ಸತೀಶ ಚವಡಿ, ಜಿಲ್ಲಾ ಬಾಲ ಕಾರ್ಮಿಕ ಸಂಸ್ಥೆಯ ಯೋಜನಾ ನಿರ್ದೇಶಕ ಸುಧಾಕರ ಬಡಿಗೇರ, ಆರೋಗ್ಯ ಇಲಾಖೆಯ ನೀಲಕಂಠ ನೀಲನಾಯಕ, ತಾಲೂಕು ಆಹಾರ ಸುರಕ್ಷತಾ ಅಧಿಕಾರಿ ರಾಜಶೇಖರ ಸಾಳಗುಂದಿ ಹಾಗೂ ಶರಣು ರೇವಡಿ ಇದ್ದರು.