ಕನ್ನಡಪ್ರಭ ವಾರ್ತೆ ಹೊಳಲ್ಕೆರೆ
ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಸರ್ಕಾರಿ ನೌಕರರ ಭವನದಲ್ಲಿ ಅಯೋಜಿಸಿದ್ದ ಜಯದೇವಿ ತಾಯಿ ಲಿಗಾಡೆಯವರ 112ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕರ್ನಾಟಕ ಏಕೀಕರಣ ಹೋರಾಟದಲ್ಲಿ ಪಾಲ್ಗೊಂಡ ಈಗಿನ ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯನ್ನು ಕರ್ನಾಟಕಕ್ಕೆ ಸೇರಿಸಬೇಕೆಂದು ಹೇಳಿದ ಧೀಮಂತ ಮಹಿಳೆ ಜಯದೇವಿ ತಾಯಿ ಲಿಗಾಡೆಯವರು. ಇವತ್ತು ಅಂತ ಮಹಾನ್ ಕನ್ನಡ ಪ್ರೇಮಿ ಹೋರಾಟಗಾರ್ತಿಗೆ ನಮ್ಮ ಕನ್ನಡ ಸಮಾಜ ಯಾವ ರೀತಿಯಿಂದ ಸ್ಪಂದಿಸುತ್ತಿದೆ ಎನ್ನುವುದೇ ದೊಡ್ಡ ಸೋಜಿಗವಾಗಿದೆ.ಜಯದೇವಿತಾಯಿ ಲಿಗಾಡೆ ಮೂಲತ: ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯವರಾದ ಇವರು ಕನ್ನಡದೊಳಗೆ ಶರಣ ಬಸವಣ್ಣನವರ ದಾರಿಯಲ್ಲಿ ತಮ್ಮ ಬದುಕನ್ನು ಸವೆಸಿದ್ದಾರೆ. ಬಸವತಿ ಶರಣರ ಅನೇಕ ವಚನಗಳನ್ನು ಮರಾಠಿಕೆ ತರ್ಜುಮೆ ಮಾಡಿದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ ಎಂದರು.
ಈ ಸಂದರ್ಭದಲ್ಲಿ ಹಿರಿಯ ಸಾಹಿತಿ ನಾಡೋಜ ಕಮಲ ಹಂಪನಾ ಅವರ ಅಗಲಿಕೆಗೆ ಸಾಹಿತ್ಯ ಪರಿಷತ್ತು ವತಿಯಿಂದ ಸಂತಾಪ ಸೂಚಿಸಲಾಯಿತು. ತಾಳ್ಯ ಹೋಬಳಿ ಕಸಾಪ ಘಟಕದ ಅಧ್ಯಕ್ಷ ಬಿ.ಜಿ.ಹಳ್ಳಿ ವೆಂಕಟೇಶ್, ಪ್ರಗತಿ ಗ್ರಾಮೀಣ ಬ್ಯಾಂಕಿನ ಪರಪ್ಪ, ಭೂಮಾಪನ ಪಾವಗಡ ಶಿವಣ್ಣ, ಆರ್.ಶಶಿಕುಮಾರ್, ಕುಮಾರಿ ನಿಶಾ, ಸರ್ಕಾರಿ ನೌಕರ ಮನರಂಜನ ಕೇಂದ್ರದ ಶ್ರೀನಿವಾಸ, ವಿವಿಧ ಸಂಘ ಸಂಸ್ಥೆಯ ಮಹಿಳಾ ಪ್ರತಿನಿಧಿಗಳು ಇದ್ದರು.