ಕನ್ನಡಪ್ರಭ ವಾರ್ತೆ ಯಾದಗಿರಿ
ವಡಗೇರಾ ನೂತನ ತಾಲೂಕು ಕೇಂದ್ರವಾಗಿ 6 ವರ್ಷ ಕಳೆದಿದೆ. ಅಲ್ಲದೇ ಈ ಭಾಗದಲ್ಲಿ ಪ್ರಮುಖವಾಗಿ ಭೀಮಾ ಮತ್ತು ಕೃಷ್ಣಾ ನದಿಗಳು ಹರಿಯುತ್ತಿವೆ, ವ್ಯಾಪ್ತಿಯ ರೈತರು ವಿವಿಧ ಬ್ಯಾಂಕ್ಗಳಿಂದ ಲಕ್ಷಾಂತರ ರುಪಾಯಿಗಳ ಸಾಲ ಪಡೆದು ತಮ್ಮ ಜಮೀನುಗಳಿಗೆ ನೀರಾವರಿ ಸೌಕರ್ಯ ಮಾಡಿಕೊಂಡಿದ್ದಾರೆ. ಆದರೆ, ವಡಗೇರಾದಲ್ಲಿ ಸೂಕ್ತ ಕಚೇರಿ ಹಾಗೂ ಸಿಬ್ಬಂದಿ ಕೊರತೆಯಿಂದ ರೈತರು ಹಲವಾರು ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ವಿವರಿಸಿದರು.
ವಡಗೇರಾ ತಾಲೂಕನ್ನು ಜೆಸ್ಕಾಂ ಶೋರಾಪೂರ ವಿಭಾಗಕ್ಕೆ ಸೇರಿಸಿದೆ. ಹಲವಾರು ಸಮಯದಲ್ಲಿ ರೈತರ ಜಮೀನಿನಲ್ಲಿರುವ ವಿದ್ಯುತ್ ಪರಿವರ್ತಕ ಸುಟ್ಟರೆ ಹಾಗೂ ವಿದ್ಯುತ್ ಸಾಮಗ್ರಿ ಅವಶ್ಯಕತೆ ಇದ್ದರೆ ಅಲ್ಲಿಗೆ ಹೋಗಿ ತರಲು ವಿಳಂಬವಾಗುತ್ತಿದೆ. ಕಾರಣ ರೈತರ ಬೆಳೆಗಳು ನಾಶವಾಗುತ್ತಿವೆ ಎಂದು ಅವರು ತಿಳಿಸಿದರು.ಇನ್ನೊಂದು, ಕಡೆ ಪ್ರತಿ ವರ್ಷ ನದಿಗಳ ಪ್ರವಾಹದಿಂದ ರೈತರು ಅಪಾರ ನಷ್ಟ ಅನುಭವಿಸುತ್ತಿದ್ದಾರೆ. ಅನೇಕ ವಿದ್ಯುತ್ ಅವಘಡಗಳು ಸಂಭವಿಸುತ್ತಿವೆ. ಕಾರಣ ತಾವು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ವಡಗೇರಾ ಪಟ್ಟಣಕ್ಕೆ ಜೆಸ್ಕಾಂ ಉಪ-ವಿಭಾಗ ಕಚೇರಿ ಆರಂಭಿಸಿ, ಅಗತ್ಯ ಎಂಜಿನಿಯರ್ ಹಾಗೂ ಸಿಬ್ಬಂದಿ ನೇಮಕ ಮಾಡಿ ರೈತರಿಗೆ ಅನುಕೂಲ ಮಾಡಿಕೊಡಬೇಕೆಂದು ಮನವಿ ಮಾಡಿದರು.
ಈಗಾಗಲೇ ಇಂಧನ ಇಲಾಖೆಯಿಂದ ಕಲಬುರಗಿ ಗ್ರಾಮೀಣ ಕ್ಷೇತ್ರದಲ್ಲಿ ಬರುವಂಥ ಕಮಲಾಪೂರದಲ್ಲಿ ಉಪ ವಿಭಾಗ ಆರಂಭಿಸಲಾಗಿದೆ. ಆದಷ್ಟು ಬೇಗನೆ ಇಲ್ಲಿ ಕೂಡ ಕಚೇರಿ ತೆರೆಯಬೇಕೆಂದು ಮನವಿ ಮಾಡಿದರು. ನಂತರ ನಿಯೋಗ ಯಾದಗಿರಿ ಶಾಸಕ ಚೆನ್ನಾರಡ್ಡಿ ಪಾಟೀಲ್ ತುನ್ನೂರು ಅವರನ್ನು ಭೇಟಿಯಾಗಿ ಮನವಿ ಪತ್ರ ಸಲ್ಲಿಸಿತು.ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮರೆಪ್ಪ ಬಿಳ್ಹಾರ, ರೈತ ಮುಖಂಡರಾದ ವೈ. ಪ್ರಸಾದ್, ಮಲ್ಲಿಕಾರ್ಜುನಗೌಡ ಬಿಳ್ಹಾರ, ಅಮೀನರೆಡ್ಡಿ ಕೊಂಕಲ್, ಹನುಮಾನ ಸೇಠ್, ಲಾಯಕ್ ಹುಸೇನ್ ಬಾದಲ್, ಸೋಮನಾಥರಡ್ಡಿ ತುಮಕೂರ, ನಜೀರ್ಸಾಬ್, ಶಿವಶರಣಪ್ಪಗೌಡ ತುಮಕೂರ, ಸುರೇಶರೆಡ್ಡಿ ಗೋನಾಲ, ಶರಣು ಅಂಗಡಿ ಗೊಂದೆನೂರ ಸೇರಿದಂತೆ ಇತರರಿದ್ದರು.